Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80062

ಮಸಣ ಸೇರಿಸಿದ ಮೇಣದ ಬತ್ತಿ: ಮೈಸೂರಿನಲ್ಲಿ ವ್ಯಕ್ತಿ ಸಜೀವ ದಹನ

$
0
0

 

ಮೈಸೂರು: ಕಿಚ್ಚು ಹೊತ್ತಿ ಉರಿಯಲು ಸಣ್ಣ ಬೆಂಕಿಕಡಿ ಸಾಕು ಎನ್ನುವಂತೆ, ಮನೆಗೆ ಆಕಸ್ಮಿಕ ಬೆಂಕಿ ಬಿದ್ದು ವ್ಯಕ್ತಿ ಸಜೀವ ದಹನವಾಗಿರೋ ಘಟನೆ ಮೈಸೂರಿನ ಮಂಡಿ ಮೊಹಲ್ಲಾದಲ್ಲಿ ನಡೆದಿದೆ.

ಇಂದು ಬೆಳಗಿನ ಜಾವ ದುರ್ಘಟನೆ ಸಂಭವಿಸಿದ್ದು, ಮೇಣದ ಬತ್ತಿಯಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದ್ದರೂ ಪ್ರಯೋಜನವಾಗಿಲ್ಲ, ಮನೆಯಲ್ಲಿ ಮಲಗಿದ್ದ 46 ವರ್ಷದ ಅನ್ಸರ್ ಸಜೀವ ದಹನವಾಗಿದ್ದಾರೆ.

ಕೊನೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಈ ಸಂಬಂಧ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

The post ಮಸಣ ಸೇರಿಸಿದ ಮೇಣದ ಬತ್ತಿ: ಮೈಸೂರಿನಲ್ಲಿ ವ್ಯಕ್ತಿ ಸಜೀವ ದಹನ appeared first on Kannada Public tv.


Viewing all articles
Browse latest Browse all 80062


<script src="https://jsc.adskeeper.com/r/s/rssing.com.1596347.js" async> </script>