Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80072

ಬಿಎಸ್‍ವೈ ಈಶ್ವರಪ್ಪ ಮಧ್ಯೆ ನಿಲ್ಲದ ಶೀತಲ ಸಮರ

$
0
0

 

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಪರಿಷತ್ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ನಡುವಿನ ಶೀತಲ ಸಮರ ಮುಂದುವರಿದಿದೆ. ಕೆಎಸ್ ಈಶ್ವರಪ್ಪರನ್ನ ಸಮಾಧಾನಪಡಿಸಲು ಬಿಎಸ್‍ವೈ ಮುಂದಾಗಿದ್ದಾರೆ.

ಹೀಗಾಗಿ ಇಂದು ಶಿವಮೊಗ್ಗದಲ್ಲಿ ಮಾತುಕತೆ ನಡೆಸಲು ಬಿಎಸ್ ಯಡಿಯೂರಪ್ಪ ನಿರ್ಧರಿಸಿದ್ದರು. ಆದ್ರೆ ಬಿಎಸ್‍ವೈಗೆ ಸೆಡ್ಡು ಹೊಡೆದು, ಇಂದು ಬೆಳಗ್ಗೆ ಬೆಂಗಳೂರಿನತ್ತ ಈಶ್ವರಪ್ಪ ಮುಖಮಾಡಿದ್ದಾರೆ. ಅಲ್ಲದೇ, ಇಂದು ಈಶ್ವರಪ್ಪ ಹಿಂದುಳಿದ ವರ್ಗದ, ಕುರುಬ ಸಮುದಾಯದ ನಾಯಕರ ಸಭೆ ಕರೆದಿದ್ದಾರೆ.

ಈ ಸಭೆಗೆ ವಿಧಾನಸೌಧದ ಪರಿಷತ್ ವಿಪಕ್ಷನಾಯಕರ ಕೊಠಡಿಯಲ್ಲಿ ನಡೆಯೋ ಸಭೆಯಲ್ಲಿ 25 ಮಂದಿ ಮುಖಂಡರುಗಳಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಕೆಲ ಮಾಜಿ ಶಾಸಕರು ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಸಭೆಯಲ್ಲಿ ಪ್ರಮುಖವಾಗಿ ಸಂಗೋಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆ ವಿಚಾರವಾಗಿ ಚರ್ಚೆ ನಡೆಯಲಿದೆ.

ಇಂದು ಎರಡನೇ ಶನಿವಾರವಾಗಿದ್ದು, ವಿಧಾನಸೌಧಕ್ಕೆ ಮಾಧ್ಯಮದವರಿಗೆ ಪ್ರವೇಶ ಇಲ್ಲದ ಕಾರಣ ವಿಧಾನಸೌಧದಲ್ಲಿ ಸಭೆ ಕರೆಯಲಾಗಿದೆ. ಒಟ್ಟಾರೆ ಇಂದಿನ ಸಭೆ ಮಹತ್ವದ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.

The post ಬಿಎಸ್‍ವೈ ಈಶ್ವರಪ್ಪ ಮಧ್ಯೆ ನಿಲ್ಲದ ಶೀತಲ ಸಮರ appeared first on Kannada Public tv.


Viewing all articles
Browse latest Browse all 80072


<script src="https://jsc.adskeeper.com/r/s/rssing.com.1596347.js" async> </script>