Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80062

ಮಹದಾಯಿಗಾಗಿ ಸಂಸತ್ತಿನಲ್ಲಿ ದೇವೇಗೌಡರು ಅಹೋರಾತ್ರಿ ಪ್ರತಿಭಟನೆ ಮಾಡಲಿ; ಐಟಿ ಬಿಟಿ ಕನ್ನಡಿಗರ ಮನವಿ

$
0
0

ಬೆಂಗಳೂರು: ಮಹದಾಯಿ ನದಿ ನೀರಿನ ವಿಚಾರವಾಗಿ ಸಂಸತ್ತಿನಲ್ಲಿ ದೇವೆಗೌಡರು ಅಹೋರಾತ್ರಿ ಧರಣಿ ಯಾಕೆ ಮಾಡಬಾರದು ಎಂದು ಜೆಡಿಎಸ್ ಶಾಸಕ ಕೋನ ರೆಡ್ಡಿ ಮತ್ತು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿಯಾವರಿಗೆ ಐಟಿ ಬಿಟಿ ಕನ್ನಡಿಗರು ಪ್ರಶ್ನೆ ಮಾಡಿದ್ದಾರೆ.

ಮಹದಾಯಿ ನ್ಯಾಯಾಧಿಕರಣದಿಂದ ಮಧ್ಯಂತರ ಆದೇಶದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯ ಹಾಗೂ ಅಮಾಯಕ ರೈತರ ಬಂಧನ ವಿರೋಧಿಸಿ ಐಟಿ ಬಿಟಿ ಕನ್ನಡಿಗರ ಬಳಗದ ಸದಸ್ಯರು ಬೆಂಗಳೂರಿನ ಟೌನ್ ಹಾಲ್ ನಲ್ಲಿ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ಡಿವೈಎಸ್ಪಿ ಗಣಪತಿ ಪ್ರಕರಣಕ್ಕೆ ಜಾರ್ಜ್ ರಾಜಿನಾಮೆಗೆ ಆಗ್ರಹಿಸಿ ಬಿಜೆಪಿ, ಜೆಡಿಎಸ್ ಪಕ್ಷದವರು ವಿಧಾನಸೌದದಲ್ಲಿ ಅಹೋರಾತ್ರಿ ಧರಣಿ ನಡೆಸಿದರು. ಈಗ ಕುಡಿಯುವ ನೀರಿಗಾಗಿ ಆರಂಭಿಸಲಾಗಿರುವ ಮಹದಾಯಿ ಯೋಜನೆಗಾಗಿ ರಾಜ್ಯದ ಸಂಸದರು ಸಂಸತ್ತಿನಲ್ಲಿ ಅಹೋರಾತ್ರಿ ಧರಣಿ ಮಾಡಲಿ. ಈ ಪ್ರತಿಭಟನೆ ಮೊದಲು ದೇವೆಗೌಡರಿಂದಲೇ ಆರಂಭವಾಗಲಿ ಎಂದು ಐಟಿ ಬಿಟಿ ಕನ್ನಡಿಗರ ಬಳಗ ಈ ವೇಳೆ ಮನವಿ ಮಾಡಿಕೊಂಡಿತು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಹೊರಟ್ಟಿ ಈ ಇವರ ಮನವಿಯನ್ನು ದೇವೇಗೌಡರಿಗೆ ತಿಳಿಸುವುದಾಗಿ ಹೇಳಿದರು. ಅಲ್ಲದೇ ಬಂಧಿತ ರೈತರನ್ನ ಬಿಡುಗಡೆಗೆ 10 ನೇ ತಾರೀಖು ನಡೆಯುವ ಕ್ಯಾಬಿನೆಟ್‍ಲ್ಲಿ ಸರ್ಕಾರ ವಾಪಸ್ ತಗೆದುಕೊಳ್ಳಲಿದೆ ಎಂದರು. ಈ ಪ್ರತಿಭಟನೆಯಲ್ಲಿ ಮಾತೆ ಮಹಾದೇವಿ ಸೇರಿದಂತೆ ನೂರಾರು ಐಟಿ ಬಿಟಿ ಕನ್ನಡಿಗರು ಪಾಲ್ಗೊಂಡಿದ್ದರು.

The post ಮಹದಾಯಿಗಾಗಿ ಸಂಸತ್ತಿನಲ್ಲಿ ದೇವೇಗೌಡರು ಅಹೋರಾತ್ರಿ ಪ್ರತಿಭಟನೆ ಮಾಡಲಿ; ಐಟಿ ಬಿಟಿ ಕನ್ನಡಿಗರ ಮನವಿ appeared first on Kannada Public tv.


Viewing all articles
Browse latest Browse all 80062


<script src="https://jsc.adskeeper.com/r/s/rssing.com.1596347.js" async> </script>