– ಬಿಜೆಪಿ ಅತೃಪ್ತರಿಗೆ ಡೋಂಟ್ ಕೇರ್ ಅಂದ ಬಿಎಸ್ವೈ
ಬೆಂಗಳೂರು: ಬಿಜೆಪಿಯ ಅತೃಪ್ತ ಟೀಮ್ನ ಅಸಮಾಧಾನಕ್ಕೆ ತೇಪೆ ಹಚ್ಚಲು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಕರೆದಿದ್ದ ಪದಾಧಿಕಾರಿಗಳ ಸಭೆ ಕೇವಲ ತಿರಂಗಾ ಕಾರ್ಯಕ್ರಮಗಳ ಘೋಷಣೆಯೊಂದಿಗೆ ಅಂತ್ಯವಾಗಿದೆ.
ಆಂತರಿಕ ಕಲಹದಲ್ಲಿ ಮತ್ತೆ ಕಮರುತ್ತಿರುವ ಕಮಲ ಪಾಳೆಯದಲ್ಲಿ ಉತ್ಸಾಹ ತುಂಬಲು ಇಂದು ಬಿಎಸ್ವೈ ಪದಾಧಿಕಾರಗಳ ಸಭೆ ಕರೆದಿದ್ದರು. ಪದಾಧಿಕಾರಿಗಳ ನೇಮಕದಲ್ಲಿ ಸಾಕಷ್ಟು ಭಿನ್ನಮತ ಸ್ಪೋಟಗೊಂಡಿದ್ದರ ಬೆನ್ನಲ್ಲೇ ಎಲ್ಲರೊಂದಿಗೆ ಮಾತನಾಡಿಸಿ ಸಮಾಧಾನ ಹೇಳಲು ಬಿಎಸ್ವೈ ಎಲ್ಲ ಪದಾಧಿಕಾರಿಗಳು ಮುಖಂಡರ ಸಭೆ ಕರೆದಿದ್ದರು. ಆದರೆ ಬೆಂಗಳೂರಿನಲ್ಲಿ ಇದ್ದರೂ ಸ್ವತ: ಈಶ್ವರಪ್ಪ ಅಂಡ್ ಅತೃಪ್ತರ ಟೀಮ್ ಗೈರಾಗಿತ್ತು.
ಮಲ್ಕಾಪುರೆ, ನಿರ್ಮಲ್ ಕುಮಾರ್ ಸುರಾನಾ, ಭಾನುಪ್ರಕಾಶ್ ಸೇರಿದಂತೆ ಹಲವು ನಾಯಕರು ಸಭೆಗೆ ಬಂದಿರಲಿಲ್ಲ. ಈ ಬಗ್ಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಅರವಿಂದ್ ಲಿಂಬಾವಳಿ ಸಭೆಯೊಳಗೆ ಯಡಿಯೂರಪ್ಪ ಅವರಿಗೆ ಹೇಳಿದ್ರು, ಇರಲಿ ಇರಲಿ ಅಂತಾ ಅತೃಪ್ತರ ಕಡೆ ಬಿಎಸ್ವೈ ಗಮನವು ಕೊಡಲಿಲ್ಲ.
ಆಗಸ್ಟ್ 9 ರಿಂದ ವಿವಿಧ ತಿರಂಗಾ ಕಾರ್ಯಕ್ರಮಗಳ ಬಗ್ಗೆ ಸಭೆಯಲ್ಲಿ ಸಂಘಟನಾ ಕಾರ್ಯದರ್ಶಿ ಸಂತೋಷ್ ಮಾಹಿತಿ ನೀಡಿದರು. ಅದಕ್ಕೆ ಬಿಎಸ್ವೈ ಒಪ್ಪಿಗೆ ಸೂಚಿಸುವುದರೊಂದಿಗೆ ಎಲ್ಲಿಯೂ ಬಿಜೆಪಿಯ ಧ್ವಜ ಕಾಣದೇ ಇದು ರಾಷ್ಟ್ರಾಭಿಮಾನ ಕಾರ್ಯಕ್ರಮಗಳು ಎನ್ನುವ ರೀತಿಯಲ್ಲಿ ಬಿಜೆಪಿ ಕಾರ್ಯಕರ್ತರು ಬಿಂಬಿಸಬೇಕೆಂದು ಸೂಚಿಸಿದರು.
ಆಗಸ್ಟ್ 09 ರಿಂದ ತಿರಂಗಾ ಯಾತ್ರೆ ನಡೆಸಲು ನಿರ್ಧರಿಸಿದ್ದು, ಯುವ ಮೋರ್ಚಾದಿಂದ ಪಂಜಿನ ಮೆರವಣಿಗೆ, ಆಗಸ್ಟ್ 14 ರಂದು ರನ್ ಪಾರ್ ಭಾರತ್ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ. ಆಗಸ್ಟ್ 18 ರಂದು ಸೈನಿಕರು ಇರುವಲ್ಲಿಗೆ ಹೋಗಿ ಅವರನ್ನು ಸನ್ಮಾನಿಸುವುದರೊಂದಿಗೆ ರಕ್ಷಾ ಬಂಧನ ಆಚರಿಸುವಂತೆ ಬಿಎಸ್ವೈ ಸೂಚಿಸಿದ್ದಾರೆ.
ಆಗಸ್ಟ್ 16 ರಂದು ಕೋರ್ ಕಮಿಟಿ ಸಭೆ ಕರೆದಿರುವ ಯಡಿಯೂರಪ್ಪ ಮಿಷನ್ 150, ಮಹದಾಯಿ ವಿಚಾರದಲ್ಲಿ ಪ್ರಧಾನಿ ಮಧ್ಯ ಪ್ರವೇಶಿಸುವುದು ಸೇರಿದಂತೆ ಚುನಾವಣೆಗೆ ಈಗಿನಿಂದಲೇ ಪಕ್ಷ ಸಂಘಟನೆ ಕುರಿತು ಚರ್ಚೆ ನಡೆಸಲಿದ್ದಾರೆ.
The post ತೇಪೆ ಹಚ್ಚಲು ಬಿಎಸ್ವೈ ಕರೆದಿದ್ದ ಸಭೆಗೆ ಈಶ್ವರಪ್ಪ ಅಂಡ್ ಟೀಂ ಗೈರು appeared first on Kannada Public tv.