ಡೆಹ್ರಡೂನ್: ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾನೆ ಎಂಬ ಶಂಕೆ ಆಧಾರದ ಮೇಲೆ ಕಳೆದ 3 ದಿನಗಳ ಹಿಂದೆ ಬಂಧನಕ್ಕೊಳಗಾಗಿದ್ದ ಭಾರತೀಯ ಸೇನೆಯ ಮಾಜಿ ಮೇಜರ್ ಜನರಲ್ ಪುತ್ರ ಸಮೀರ್ ಸರ್ದಾರ್ನಿಂದ ಭಯಾನಕ ಸುದ್ದಿಯೊಂದು ಬಹಿರಂಗವಾಗಿದೆ.
ಭಾರತ ಪ್ರಮುಖ ನಗರಗಳಲ್ಲಿ ಸರಣಿ ಬಾಂಬ್ ಸ್ಫೋಟ ಮಾಡಲು ಯೋಜನೆ ರೂಪಿಸಿದ್ದ ಎನ್ನಲಾಗಿದ್ದು, ಬಂಧಿತ 44 ವರ್ಷದ ಸಮೀರ್ ಸರ್ದಾರ್ನನ್ನು ತೀವ್ರ ವಿಚಾರಣೆಗೆ ಒಳಪಡಿಸುತ್ತಿರುವ ಭಯೋತ್ಪಾದಕ ನಿಗ್ರಹ ದಳವು ಈ ವಿಷಯವನ್ನು ಸ್ಪಷ್ಟಪಡಿಸಿದೆ.
ಬಂಧಿತನ ಇ-ಮೇಲ್ಗಳನ್ನ ತೆರೆದು ನೋಡಿದಾಗ ಸರಣಿ ಬಾಂಬ್ ಸ್ಫೋಟ ಮಾಡುವ ಬಗ್ಗೆ ಕಳುಹಿಸಿದ ಹಲವು ಮಹತ್ವದ ದಾಖಲೆಗಳು ಸಿಕ್ಕಿವೆ. ವಾಸ್ಕೋ ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಹಿನ್ನೆಲೆಯಲ್ಲಿ ಈತನನ್ನು ಎಟಿಎಸ್ ಬಂಧಿಸಿತ್ತು.
ಸಮೀರ್ ಮೂಲತಃ ಹಿಂದೂವಾದ್ರೂ ಇಸ್ಲಾಂ ಸಂಪ್ರದಾಯ ಅಳವಡಿಸಿಕೊಂಡಿದ್ದ. ಚಾರ್ಟೆಡ್ ಅಕೌಂಟ್ ಆಗಿದ್ದ ಈತ ಹಾಂಗ್ಕಾಂಗ್, ಮಲೇಷ್ಯಾ, ಸೌದಿ ಅರೇಬಿಯಾದ ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡಿದ್ದಾನೆ. ಬಂಧಿತನಿಂದ ಐದು ಪಾಸ್ಪೋರ್ಟ್ಗಳು, ಏಳು ಮೊಬೈಲ್ ಫೋನ್ಗಳು ಮತ್ತು ಲ್ಯಾಪ್ಟಾಪ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.