ನವದೆಹಲಿ: ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಎಲ್ಲ ಹಂಪ್ಸ್ಗಳನ್ನು ತೆಗೆದು ಹಾಕಿ ಎಂದು ಕೇಂದ್ರ ಸಾರಿಗೆ ಸಚಿವಾಲಯ ಎಲ್ಲ ರಾಜ್ಯ ಸಚಿವಾಲಯ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಾಜ್ಯದ ಲೋಕೋಪಯೋಗಿ ಇಲಾಖೆಗೆ ಆದೇಶಿಸಿದೆ.
ಸುಗಮ ಸಂಚಾರ ವ್ಯವಸ್ಥೆಗೆ ಸ್ಪೀಡ್ ಬ್ರೇಕರ್ಗಳು ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಣಯ ಕೈಗೊಂಡಿದ್ದು, ಮುಂದಿನ ಬುಧವಾರ ಸಚಿವಾಲಯ ಇದರ ಬಗ್ಗೆ ಸಮಗ್ರವಾದ ವಿವರವನ್ನು ಪ್ರಕಟಿಸಲಿದೆ.
2014ರ ರಸ್ತೆ ಅಪಘಾತ ವರದಿಯನ್ನು ಸಚಿವಾಲಯ ಪ್ರಕಟಿಸಿದ್ದು, ಈ ವರದಿಯಲ್ಲಿ 4726 ಮಂದಿ ಹಂಪ್ಸ್ಗಳಿಂದ ಸಂಭವಿಸಿದ ಅಪಘಾತ ಮೃತಪಟ್ಟರೆ, 6672 ಮಂದಿ ಸ್ಪೀಡ್ ಬ್ರೇಕರ್ ಮತ್ತು ರಸ್ತೆ ಗುಂಡಿಗಳಿಂದಾದ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎನ್ನುವ ಅಂಶವಿದೆ. ಹೀಗಾಗಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
The post ಹೈವೇಯಲ್ಲಿರುವ ಎಲ್ಲ ಹಂಪ್ಸ್ಗಳನ್ನು ತೆಗೆಯಿರಿ: ಸಾರಿಗೆ ಸಚಿವಾಲಯ appeared first on Public TV.