Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80032

ನನ್ನ ಸೇಫ್ಟಿಗಾಗಿ ನಿರಾಣಿ ಕಾರು ನೀಡಿದ್ದಾರೆ: ಬಿಎಸ್‍ವೈ

$
0
0

ಬೆಂಗಳೂರು: ನನಗೆ ಕಾರನ್ನು ಮುರುಗೇಶ್ ನಿರಾಣಿ ನೀಡಿದ್ದಾರೆ. ನಾನು ರಾಜ್ಯಾಧ್ಯಕ್ಷರಾದ ಮೇಲೆ ಹೊಸ ಕಾರು ಬಳಸುತ್ತಿರುವುದಲ್ಲಿ ತಪ್ಪೇನಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ಯಡಿಯೂರಪ್ಪ ಪ್ರಶ್ನಿಸಿದ್ದಾರೆ.

ನಾನು ರಾಜ್ಯಾಧ್ಯಕ್ಷನಾದ ನಂತರ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದೇನೆ. ಈ ಪ್ರವಾಸಕ್ಕೆ ಒಂದು ಸೇಫ್ಟಿ ಕಾರು ಅಗತ್ಯ ಇರುವುದರಿಂದ ಮುರುಗೇಶ್ ನಿರಾಣಿ ಕಾರನ್ನು ನೀಡಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಟ್ಯಾಂಕರ್ ಮೂಲಕ ನೀರು ಕೊಟ್ಟರೆ ಸಾಕಾಗುವುದಿಲ್ಲ. ಸಚಿವರು ಯಾವ ಜಿಲ್ಲೆಗೆ ಭೇಟಿ ಕೊಟ್ಟಿದ್ದಾರೆ ಎನ್ನುವುದನ್ನು ತಿಳಿಸಲಿ. ಕೇಂದ್ರದ 1450 ಕೋಟಿ ರೂ. ಹಣವನ್ನು ಇನ್ನೂ ಖರ್ಚು ಮಾಡಿಲ್ಲ. ಇನ್ನೂ ಹೆಚ್ಚಿನ ಹಣ ಬೇಕಾದರೆ ಕೇಳಲಿ. ನಾವು ಕೇಂದ್ರದ ಜೊತೆ ಮಾತನಾಡಿ ಕೊಡಿಸುತ್ತೇವೆ. ಬರ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಸಿಎಂ ಪುತ್ರನ ಕಂಪನಿಗೆ ಲ್ಯಾಬ್ ಟೆಂಡರ್ ನೀಡುವ ಮೂಲಕ ಸಿಎಂ ಸಿದ್ದರಾಮಯ್ಯ ಸ್ವಜನ ಪಕ್ಷಪಾತ ಮಾಡಿದ್ದಾರೆ. ಜನರ ಗಮನ ಬೇರೆಡೆಗೆ ಸೆಳೆಯಲು ಸಿಎಂ ಬರ ಪ್ರವಾಸ ಕೈಗೊಂಡಿದ್ದಾರೆ ಎಂದು ಬಿಎಸ್‍ವೈ ಸಿದ್ದರಾಮಯ್ಯನವರನ್ನು ಕುಟುಕಿದರು.

The post ನನ್ನ ಸೇಫ್ಟಿಗಾಗಿ ನಿರಾಣಿ ಕಾರು ನೀಡಿದ್ದಾರೆ: ಬಿಎಸ್‍ವೈ appeared first on Public TV.


Viewing all articles
Browse latest Browse all 80032


<script src="https://jsc.adskeeper.com/r/s/rssing.com.1596347.js" async> </script>