Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80062

ಕರ್ನಾಟಕದ ಮಾರ್ಪಾಡು ಅರ್ಜಿ ಸೋಮವಾರ ವಿಚಾರಣೆ

$
0
0

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸಲು ನೀಡಿದ್ದ ಆದೇಶಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಲ್ಲಿಸಿದ್ದ ಮಾರ್ಪಾಡು ಅರ್ಜಿಯ ವಿಚಾರಣೆ ಸೋಮವಾರ ಬೆಳಗ್ಗೆ ನಡೆಯಲಿದೆ.

ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಮೂಲಕ ಸಲ್ಲಿಸಿದ್ದ ಕರ್ನಾಟಕದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲು ಒಪ್ಪಿಗೆ ಸೂಚಿಸಿದೆ. ಸೋಮವಾರ ಬೆಳಗ್ಗೆ 10.30ಕ್ಕೆ ಈ ಅರ್ಜಿಯ ವಿಚಾರಣೆ ನ್ಯಾ.ದೀಪಕ್ ಮಿಶ್ರಾ ಹಾಗೂ ನಾ. ಲಲಿತ್ ಉದಯ್ ಪೀಠದಲ್ಲಿ ನಡೆಯಲಿದೆ.

ಸೆ.5ರಂದು ಕರ್ನಾಟಕ ಮುಂದಿನ 10 ದಿನಗಳ ಕಾಲ ಪ್ರತಿ ದಿನ 15 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ ಆದೇಶ ಪ್ರಕಟಗೊಂಡ ಬಳಿಕ ರಾಜ್ಯ ಸರ್ಕಾರ ತಮಿಳುನಾಡಿಗೆ 15 ಸಾವಿರ ಕ್ಯೂಸೆಕ್ ನೀರನ್ನು ಮಂಗಳವಾರದಿಂದ ಬಿಡುಗಡೆ ಮಾಡಿಕೊಂಡು ಮಾಡಿಕೊಂಡು ಬಂದಿದೆ.

ಈಗ ಸರ್ಕಾರ, ನಿಮ್ಮ ಆದೇಶವನ್ನು ನಾವು ಪಾಲಿಸಿದ್ದೇವೆ. ಆದರೆ ನಮ್ಮಲ್ಲೇ ನೀರಿಗೆ ತೊಂದರೆಯಿದೆ. ಹೀಗಾಗಿ ಆದೇಶವನ್ನು ಮಾರ್ಪಾಡು ಮಾಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದೆ.

 

The post ಕರ್ನಾಟಕದ ಮಾರ್ಪಾಡು ಅರ್ಜಿ ಸೋಮವಾರ ವಿಚಾರಣೆ appeared first on Kannada Public tv.


Viewing all articles
Browse latest Browse all 80062


<script src="https://jsc.adskeeper.com/r/s/rssing.com.1596347.js" async> </script>