Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80365

ಅರ್ಧಕ್ಕೆ ಶಿಕ್ಷಣ ನಿಲ್ಲಿಸಿದ ಬಾಲಕಿ ಮತ್ತೆ ಶಾಲೆ ಸೇರಿದ್ಲು

$
0
0

ಹಾಸನ: ಅರಕಲಗೂಡು ತಾಲೂಕಿನ ಪಾರಸನಹಳ್ಳಿ ಅನ್ನೋ ಪುಟ್ಟ ಗ್ರಾಮದ ಹೊರಭಾಗದಲ್ಲಿರೋ ಒಂಟಿ ಮನೆಯಲ್ಲಿ ನಾಲ್ಕು ಮಕ್ಕಳೊಂದಿಗೆ ಭಾಗ್ಯ ವಾಸವಾಗಿದ್ರು. ಜಮೀನಿಲ್ಲದ ಈ ಕುಟುಂಬಕ್ಕೆ ಬದುಕೋಕೆ ಯಾವ ಆಧಾರವೂ ಇರಲಿಲ್ಲ. ತಮ್ಮ ಕುಟುಂಬದ ಕಷ್ಟವನ್ನ ಪತ್ರದ ಮೂಲಕ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬರೆದು ಸಹಾಯ ಕೇಳಿದ್ದ ಬಾಲಕಿ ಪೂಜಾಲಕ್ಷ್ಮೀಗೆ ಸಹಾಯದ ಭರವಸೆಯನ್ನ ನೀಡಲಾಗಿತ್ತು.

ಹಣವಿಲ್ಲದೆ ಅರ್ಧಕ್ಕೆ ಶಿಕ್ಷಣ ನಿಲ್ಲಿಸಿದ್ದ ಪೂಜಾಲಕ್ಷ್ಮೀಯನ್ನ ಸರ್ಕಾರಿ ಪ್ರೌಢ ಶಾಲೆಗೆ ಮತ್ತೆ ಸೇರಿಸಲಾಗಿದೆ. ಕುಟುಂಬ ನಿರ್ವಹಣೆಗೆಂದು ಬೆಳಕು ಕಾರ್ಯಕ್ರಮದ ಮೂಲಕ ಒಂದು ಹಸುವನ್ನು ಕೊಡಿಸಲಾಗಿದೆ. ರೈತ ಗವಿರಂಗೇಗೌಡ ಅವರು 5 ಸಾವಿರ ಕಡಿಮೆ ಹಣಕ್ಕೆ ಹಸುವನ್ನ ಮಾರಾಟ ಮಾಡಿ ಸಹಾಯ ಮಾಡಿದ್ದಾರೆ. ಪ್ರತಿದಿನ ಹಸು 14 ಲೀಟರ್ ಹಾಲು ನೀಡುತ್ತದೆ. ಕುಟುಂಬಕ್ಕೆ ಬೆಳಕು ನೀಡಿರುವ ಪಬ್ಲಿಕ್‍ಟಿವಿಗೆ ಗ್ರಾಮಸ್ಥರು ಹಾಗೂ ಕುಟುಂಬದ ಸದಸ್ಯರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಹೆಸರಿನಲ್ಲಿ ಭಾಗ್ಯವಿದ್ರೂ ಜೀವನದಲ್ಲಿ ದೌರ್ಭಾಗ್ಯಗಳನ್ನೇ ಕಂಡ ಭಾಗ್ಯರ ಜೀವನ ಕೊಂಚ ನಿರಾಳವಾಗಿದೆ. ನೊಂದ ಕುಟುಂಬದಲ್ಲಿ ಸಣ್ಣ ಕಿರುನಗೆ ಚೆಲ್ಲಿದೆ. ಇವರ ಈ ನಗು ನಿರಂತರವಾಗಿರಲಿ ಅನ್ನೋದೇ ನಮ್ಮ ಹಾರೈಕೆ.

 

The post ಅರ್ಧಕ್ಕೆ ಶಿಕ್ಷಣ ನಿಲ್ಲಿಸಿದ ಬಾಲಕಿ ಮತ್ತೆ ಶಾಲೆ ಸೇರಿದ್ಲು appeared first on Kannada Public tv.


Viewing all articles
Browse latest Browse all 80365

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>