ಬೆಂಗಳೂರು: ಕುಡುಕ ಪತಿ ತನ್ನ ಅನುಮಾನದಿಂದ ಪತ್ನಿಯ ಗುಪ್ತಾಂಗಕ್ಕೆ ಬೆಂಕಿಯಿಂದ ಸುಡುವ ಯತ್ನ ನಡೆಸಿರುವ ಘನಘೋರ ಘಟನೆ ನಗರದ ಹೊರವಲಯ ನೆಲಮಂಗಲದಲ್ಲಿ ನಡೆದಿದೆ.
ನೆಲಮಂಗಲ ತಾಲೂಕಿನ ಹೆಗುಂದ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕುಡುಕ ಪತಿ ಪ್ರಕಾಶ್ ಈ ಕೃತ್ಯವೆಸಗಿದ್ದಾನೆ. ಈತ ಈ ಹಿಂದೆಯೂ ಮೂರ್ನಾಲ್ಕು ಬಾರಿ ಇಂತಹ ಹೀನ ಕೃತ್ಯವೆಸಗಿದ್ದು, ಈತನ ಹೆಂಡತಿ ಪೊಲೀಸರಿಗೆ ದೂರು ಕೊಡುವ ಪ್ರಯತ್ನ ಮಾಡಿರಲಿಲ್ಲ.
ಆದರೆ ಕುಡುಕ ಪತಿಯ ವರ್ತನೆ ವಿಕೋಪಕ್ಕೆ ತಿರುಗಿದಾಗ ಮನನೊಂದ ಪತ್ನಿ ಡಾಬಸ್ಪೇಟೆ ಪೊಲೀಸರಿಗೆ ಇಂದು ದೂರು ನೀಡಿದ್ದಾರೆ. ಈತ ನನಗೆ ಹಾಗೂ ಹಾಗೂ ನನ್ನ ತಾಯಿಗೆ ಅಶ್ಲೀಲ ಪದಗಳಿಂದ ಬೈಯ್ಯುತ್ತಾನೆ ಅಂತ ಆರೋಪಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡುರುವ ಡಾಬಸ್ಪೇಟೆ ಪೊಲೀಸರು ಆರೋಪಿ ಪತಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
The post ಹೆಂಡ್ತಿ ಗುಪ್ತಾಂಗಕ್ಕೆ ಬೆಂಕಿ ಇಡಲು ಯತ್ನಿಸಿದ ಕಿರಾತಕ appeared first on Kannada Public tv.