ಬೆಂಗಳೂರು: ಬಯಲಾಯ್ತು ಸಿಎಂ ಸಿದ್ದರಾಮಯ್ಯ ಅವರ ಪುತ್ರವ್ಯಾಮೋಹ. ಬಹಿರಂಗಕ್ಕೆ ಬಂತು ಬಿಎಸ್ವೈ ವಿರುದ್ಧದ ಸಿಎಂ ಸೇಡು. ಈ ಎರಡೂ ಸ್ಪೋಟಕ ಸುದ್ದಿಯನ್ನು ಮೊದಲಿಗೆ ನಿಮ್ಮ ಮುಂದೆ ಇಟ್ಟಿದ್ದು ಪಬ್ಲಿಕ್ ಟಿವಿ.
ಹೌದು.ಇಂದು ರಾಜ್ಯದೆಲ್ಲೆಡೆ ಸಂಚಲನ ಮೂಡಿಸಿರುವ ಈ ಎರಡೂ ಸುದ್ದಿಯನ್ನ ನಿಮ್ಮ ಪಬ್ಲಿಕ್ ಟಿವಿ ಎಕ್ಸ್ಕ್ಲೂಸಿವ್ ಆಗಿ ಪ್ರಸಾರ ಮಾಡಿತು. ಆನಂತರ ಇದು ರಾಜ್ಯದ ಎಲ್ಲಾ ಸ್ತರಗಳಲ್ಲೂ ಸಂಚಲನ ಮೂಡಿಸಿ ವಾದ – ಪ್ರತಿವಾದಕ್ಕೆ ಕಾರಣವಾಗಿದೆ.
ಬುಧವಾರ ಬೆಳಗ್ಗೆ ನ್ಯೂಸ್ ಕೆಫೆಯಲ್ಲಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಸರ್ಕಾರ ಸೇಡಿನ ಕ್ರಮಕ್ಕೆ ಸಜ್ಜಾಗಿರೋ ವಿಷಯವನ್ನು ದಾಖಲೆ ಸಹಿತ ಪಬ್ಲಿಕ್ ಟಿವಿಯು ಪ್ರಸಾರ ಮಾಡಿತು. ಯಡಿಯೂರಪ್ಪ ವಿರುದ್ಧ ಮೇಲ್ಮನವಿ ಸಲ್ಲಿಸಲು ಸರ್ಕಾರಿ ಆದೇಶದ ಪ್ರತಿಯನ್ನೂ ಪಬ್ಲಿಕ್ ಟಿವಿ ತೋರಿಸಿದರೂ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅಂತಹುದ್ದು ಆಗಿಲ್ಲ ಅಂತ ಸಮರ್ಥಿಸಿಕೊಂಡು ಪೇಚಿಗೆ ಸಿಲುಕಿದ್ದಾರೆ.
ಹೈಕೋರ್ಟ್ ವಜಾ ಮಾಡಿದ್ದ ಯಡಿಯೂರಪ್ಪ ವಿರುದ್ಧದ ಡಿನೋಟಿಫಿಕೇಶನ್ ಪ್ರಕರಣಗಳ ವಿರುದ್ಧ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಸರ್ಕಾರ ಚುರುಕಿನ ಸಿದ್ಧತೆ ನಡೆಸಿದೆ. ಖಾಸಗಿ ದೂರಿನ ಮೇಲೆ ಸುಮ್ಮನಾಗಿದ್ದ ಸರ್ಕಾರ ಈಗ ಬಿಎಸ್ವೈ, ಬಿಜೆಪಿ ಅಧ್ಯಕ್ಷರಾಗುತ್ತಿದ್ದಂತೆ ಕೇಸ್ ಹಾಕ್ತಿರೋದು ಸರೀನಾ ಎನ್ನುವ ಪ್ರಶ್ನೆ ಎದ್ದಿದೆ. ಇದು ಬಿಎಸ್ವೈಗೆ ಅನುಕಂಪದ ಲಾಭ ತಂದು ಕೊಡುತ್ತದೆ ಎನ್ನಲಾಗುತ್ತಿದೆ.
ಬಿಗ್ಬುಲೆಟಿನ್ನಲ್ಲೇ ಬಯಲಾಯ್ತು ಪುತ್ರ ವ್ಯಾಮೋಹ: ಮಂಗಳವಾರ ರಾತ್ರಿ ಬಿಗ್ಬುಲೆಟಿನ್ನಲ್ಲಿ ಪಬ್ಲಿಕ್ ಟಿವಿ, ಸಿಎಂ ಪುತ್ರನ ಕಂಪನಿಗೆ ಸರ್ಕಾರಿ ಟೆಂಡರ್ ಆಗಿರೋ ವಿಷಯವನ್ನು ಪ್ರಸಾರ ಶುರು ಮಾಡಿತು. ಈವರೆಗೆ ಸಿಎಂ ಸಿದ್ದರಾಮಯ್ಯರ ಸರ್ಕಾರಿ ನಿವಾಸದತ್ತಲೂ ಸುಳಿಯದ ಅವರ ಎರಡನೇ ಪುತ್ರ ಡಾ. ಯತೀಂದ್ರ, ವಿಕ್ಟೋರಿಯಾ ಆಸ್ಪತ್ರೆ ಲ್ಯಾಬ್ ಟೆಂಡರ್ ಪಡೆದದ್ದು ದೊಡ್ಡ ಆಶ್ಚರ್ಯಕ್ಕೂ ಕಾರಣವಾಯಿತು.ಆದರೆ ಇವತ್ತು ಬೆಳಗ್ಗೆ ಪಬ್ಲಿಕ್ ಟಿವಿ ಸಂಪರ್ಕಕ್ಕೆ ಬಂದ ಡಾ. ಯತೀಂದ್ರ ಸಿದ್ದರಾಮಯ್ಯ, ತನ್ನ ಕಂಪನಿಯ ಪಾಲುದಾರಿಕೆಯಿಂದಲೇ ನಿರ್ಗಮಿಸುವುದಾಗಿ ಪ್ರಕಟಿಸಿದರು.
ಒಟ್ಟಿನಲ್ಲಿ ಪಬ್ಲಿಕ್ ಟಿವಿ ಪ್ರಸಾರ ಮಾಡಿದ ಈ ಎರಡು ಎಕ್ಸ್ಕ್ಲೂಸಿವ್ ರಿಪೋರ್ಟ್ಗಳು ಇಂದು ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದ್ದಂತು ಸತ್ಯ. ಸಿಎಂ ಗದ್ದುಗೆ ಸುತ್ತಾ ಬಯಲಾದ ಈ ಸುದ್ದಿಗಳಿಗೆ ತಾರ್ಕಿಕ ಅಂತ್ಯ ಸಿಗುತ್ತಾ? ಸಿಗಬೇಕಾ? ಎನ್ನುವದರ ಬಗ್ಗೆ ಈಗ ಚರ್ಚೆ ಆರಂಭವಾಗಿದೆ.
The post ಸಿಎಂ ಪುತ್ರನಿಗೆ ಲ್ಯಾಬ್ ಭಾಗ್ಯ; ಬಿಎಸ್ವೈ ವಿರುದ್ಧ ಸೇಡು: ರಾಜ್ಯದೆಲ್ಲೆಡೆ ಪಬ್ಲಿಕ್ ಟಿವಿ ವರದಿ ಸಂಚಲನ appeared first on Public TV.