Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80012

ತಮಿಳುನಾಡಿಗೆ ಕನ್ನಡಿಗ ಡಿಎಚ್ ಶಂಕರಮೂರ್ತಿ ರಾಜ್ಯಪಾಲ?

$
0
0

 

ಚೆನ್ನೈ: ತಮಿಳುನಾಡಿಗೆ ಮತ್ತೊಬ್ಬ ಕನ್ನಡದ ನಾಯಕ ರಾಜ್ಯಪಾಲರಾಗುತ್ತಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಅಧ್ಯಕ್ಷ ಡಿ.ಎಚ್. ಶಂಕರ್‍ಮೂರ್ತಿ ರಾಜ್ಯಪಾಲರಾಗುವ ಸಾಧ್ಯತೆ ಇದೆ.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಹಲವು ನಾಯಕರು ಶಂಕರ್ ಮೂರ್ತಿ ಅವರನ್ನು ರಾಜ್ಯಪಾಲರನ್ನಾಗಿ ಆಯ್ಕೆ ಮಾಡಲು ಆಸಕ್ತಿ ತೋರಿಸಿದ್ದಾರೆ.

ಬಿಜೆಪಿಯ ಉನ್ನತ ಮೂಲಗಳ ಮಾಹಿತಿ ಪ್ರಕಾರ ಇತ್ತೀಚೆಗೆ ದೆಹಲಿಯಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಚರ್ಚೆ ನಡೆಸಿದ್ದು, ಸಂಸತ್‍ನಲ್ಲಿ ಮಳೆಗಾಲದ ಅಧಿವೇಶನ ಮುಗಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಕಂಡುಬಂದಿದೆ.

ಸದ್ಯ ತಮಿಳುನಾಡಿನ ರಾಜ್ಯಪಾಲರಾಗಿ ಕೊನಿಜೇಟಿ ರೋಸಯ್ಯ ಅವರ ಸೇವೆ ಇದೇ ಅಗಸ್ಟ್ 31ಕ್ಕೆ ಕೊನೆಗೊಳ್ಳಲಿದೆ. ರೋಸಯ್ಯರ ಸ್ಥಾನಕ್ಕೆ ಶಂಕರ್‍ಮೂರ್ತಿ ಆಯ್ಕೆ ಮಾಡಲು ಬಿಜೆಪಿ ನಿರ್ಧರಿಸಿದೆ.

ಇತ್ತ 1988ರಿಂದ ವಿಧಾನ ಪರಿಷತ್ ಸದಸ್ಯರಾಗಿರುವ ಶಂಕರ್‍ಮೂರ್ತಿ, 2018ಕ್ಕೆ ಅವರ ವಿಧಾನ ಪರಿಷತ್ ಸದಸ್ಯತ್ವ ಮುಗಿಯಲಿದೆ.

The post ತಮಿಳುನಾಡಿಗೆ ಕನ್ನಡಿಗ ಡಿಎಚ್ ಶಂಕರಮೂರ್ತಿ ರಾಜ್ಯಪಾಲ? appeared first on Kannada Public tv.


Viewing all articles
Browse latest Browse all 80012


<script src="https://jsc.adskeeper.com/r/s/rssing.com.1596347.js" async> </script>