ಬೆಂಗಳೂರು: ಸಚಿವ ಸಂಪುಟ ಪುನರಚನೆ ಬಳಿಕ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಸಂಪುಟ ಸಭೆಯಲ್ಲಿ ಸಾರಿಗೆ ಸಂಸ್ಥೆಗಳ ನೌಕರರಿಗೆ ಶೇ.8 ರಷ್ಟು ವೇತನ ಹೆಚ್ಚಳ, ಹಾಗೂ ಬೆಂಗಳೂರು ಪೆರಿಫರೆಲ್ ರೋಡ್ ನಿರ್ಮಾಣ ಕುರಿತ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.
ಬೆಂಗಳೂರು ಪೆರಿಫೆರಲ್ ರೋಡ್ ನಿರ್ಮಾಣಕ್ಕೆ 1986 ರಲ್ಲೇ 1883 ಎಕರೆ ಭೂ ಸ್ವಾಧೀನವಾಗಿದ್ದು, ರೈತರಿಗೆ ಇನ್ನೂ ಪರಿಹಾರ ನೀಡಿಲ್ಲ. ಅನುದಾನದ ಕೊರತೆಯಿಂದ 30 ವರ್ಷದಿಂದ ನೆನಗುದಿಗೆ ಬಿದ್ದಿದ್ದ 100 ಮೀಟರ್ ರಸ್ತೆ ಯೋಜನೆಯಲ್ಲಿ ಶೇ 75 ಮೀಟರ್ ಮಾತ್ರ ರಸ್ತೆ ನಿರ್ಮಿಸಿ ಉಳಿದ 25 ಮೀಟರ್ ಲ್ಯಾಂಡ್ ಡೆವಲಪ್ ಮಾರಿ ರೈತರಿಗೆ ಪರಿಹಾರ ನೀಡಲು ಕ್ಯಾಬಿನೆಟ್ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ಖಾತೆಯ ಸಚಿವ ಟಿ.ಬಿ ಜಯಚಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಪುಟ ಸಭೆಯ ಹೈಲೈಟ್ಸ್:
– ಕೆಎಸ್.ಆರ್.ಟಿಸಿ ಸೇರಿದಂತೆ ನಾಲ್ಕು ಸಾರಿಗೆ ಸಂಸ್ಥೆಗಳ ನೌಕರರ ವೇತನ ಶೇ. 8 ರಷ್ಟು ಹೆಚ್ಚಳ. ಜನವರಿ 16 ರಿಂದ ವೇತನ ಹೆಚ್ಚಳ ಜಾರಿಯಾಗಿದ್ದು ಮತ್ತೆ ನಾಲ್ಕು ವರ್ಷದ ವರೆಗೆ ವೇತನ ಹೆಚ್ಚಳವಿಲ್ಲ
– ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಆಯ್ಕೆ ಮಾಡಿದ್ದ 2257 ಸಾರಿಗೆ ಸಿಬ್ಬಂದಿ ನೇಮಕಕ್ಕೆ ಕ್ಯಾಬಿನೆಟ್ ಒಪ್ಪಿಗೆ
– ಗಣರಾಜ್ಯೋತ್ಸವ ಪ್ರಶಸ್ತಿ ಹೆಸರು ಶಿಫಾರಸು ಮಾಡಲು ಸಮಿತಿ ರಚನೆ. ಪಟ್ಟಿ ಅಂತಿಮಗೊಳಿಸುವ ಅಧಿಕಾರವನ್ನು ಸಿಎಂ ಹೊಂದಿರುತ್ತಾರೆ.
– ಬಿಎಂಟಿಸಿ ಸಂಸ್ಥೆ ಒಂದು ಸಾವಿರ ಬಸ್ ಖರೀದಿಸಲು ಕ್ಯಾಬಿನೆಟ್ ಒಪ್ಪಿಗೆ ನೀಡಿದ್ದರೂ ಸಂಸ್ಥೆಯ ಆದಾಯ ಮೂಲದಿಂದಲೇ ಬಸ್ ಖರೀದಿಯಾಗಬೇಕು. 388 ಕೋಟಿ ಸಾಲ ಪಡೆಯಬಹುದು. ಸಾಲಕ್ಕೆ 152 ಕೋಟಿ ಬಡ್ಡಿ ಆಗಲಿದ್ದು ಸರ್ಕಾರದಿಂದ ಬಡ್ಡಿ ಪಾವತಿಸಲು ಕ್ಯಾಬಿನೆಟ್ ಸಮ್ಮತಿ ನೀಡಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಸಂಬಳ ಏರಿಕೆ; ನೀವು ತಿಳಿಯಲೇಬೇಕಾದ ಅಂಶಗಳು
The post ರಾಜ್ಯ ಸರ್ಕಾರದಿಂದ ಗಿಫ್ಟ್: ಕೆಎಸ್ಆರ್ಟಿಸಿ ನೌಕರರ ಸಂಬಳ ಏರಿಕೆ appeared first on Kannada Public tv.