ಮಂಡ್ಯ: ಮದ್ಯದ ದೊರೆ ವಿಜಯ್ ಮಲ್ಯರ ಸಾವಿರಾರು ಕೋಟಿ ರೂಪಾಯಿ ಸಾಲ ಮನ್ನಾಮಾಡಿರುವಂತೆ ನಮ್ಮ ಬೆಳೆ ಸಾಲವನ್ನೆಲ್ಲಾ ಮನ್ನಾ ಮಾಡುವಂತೆ ಜಿಲ್ಲೆಯ ರೈತಕುಟುಂಬವೊಂದು ಬ್ಯಾಂಕ್ ಮೊರೆ ಹೋಗಿದೆ.
ಮದ್ದೂರು ತಾಲೂಕಿನಪಣ್ಣೇದೊಡ್ಡಿ ಗ್ರಾಮದ ಸುನಂದಮ್ಮ ಮತ್ತು ಮಗ ಸುಧಾಕರ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಮಲ್ಯ ರೀತಿಯಲ್ಲಿ ನಮ್ಮ ಸಾಲವನ್ನು ಮನ್ನಾ ಮಾಡಿ ಎಂದು ಮನವಿ ಮಾಡಿದ್ದಾರೆ.
ಮದ್ದೂರು ಸಮೀಪದ ಶಿವಪುರದಲ್ಲಿರುವ ಎಸ್ಬಿಐ ಬ್ಯಾಂಕ್ ನಲ್ಲಿ 2005-06ನೇ ಸಾಲಿನಲ್ಲಿ ಟ್ರ್ಯಾಕ್ಟರ್ ಸಾಲ ಮತ್ತುರೇಷ್ಮೆ ಬೆಳೆಗೆ ಸಾಲವನ್ನ ಪಡೆದುಕೊಂಡಿತ್ತು. ಅಂದು ಪಡೆದ ಸಾಲವೀಗ ಅಸಲು ಬಡ್ಡಿ ಸೇರಿಸುಮಾರು ಏಳು ಲಕ್ಷ ರೂಪಾಯಿ ದಾಟಿದೆ. ಸರಿಯಾಗಿ ಮಳೆ ಬಾರದ ಕಾರಣ ಈ ಸಾಲವನ್ನು ತೀರಿಸಲು ಆಗುತ್ತಿಲ್ಲ. ನೀವು ಈಗ ಹೇಗೆ ಸಾಲ ತೀರಿಸಲಾಗದೇ ದೇಶ ಬಿಟ್ಟು ಹೋಗಿರೋ ಮದ್ಯದ ದೊರೆ ವಿಜಯ್ ಮಲ್ಯರ ಸಾವಿರಾರು ಕೋಟಿ ಸಾಲ ಮನ್ನ ಮಾಡಿರುವಂತೆ ನಮ್ಮ ಸಾಲವನ್ನೂ ಮನ್ನಾ ಮಾಡಿ. ನಮ್ಮ ಜೀವನೋಪಯಾಕ್ಕಾಗಿ ಹೊಸ ಸಾಲ ಮಂಜೂರು ಮಾಡಿಕೊಡಿ. ಭೂ ತಾಯಿ ನಂಬಿಜೀವನ ನಡೆಸೋ ನಾವು ಎಷ್ಟೇ ಕಷ್ಟ ಬಂದ್ರೂ ಊರು ಬಿಡೋದಿಲ್ಲ ಎಂದು ಮನವಿ ಮಾಡಿದೆ.