Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80062

ಭಾರತೀಯ ಯೋಧನ ರುಂಡ, ಅಂಗಾಂಗ ಕತ್ತರಿಸಿ ಉಗ್ರರಿಂದ ವಿಕೃತಿ

$
0
0

ಜಮ್ಮು: ಪಾಕ್ ಪ್ರಚೋದಿತ ಉಗ್ರರು ಜಮ್ಮುಕಾಶ್ಮೀರ ಕುಪ್ವಾರದ ಮಚಿಲ್‍ನಲ್ಲಿ ಹೇಯ ಕೃತ್ಯವೊಂದು ನಡೆಸಿ ಅಟ್ಟಹಾಸ ಮೆರೆದಿದ್ದಾರೆ. ಗುಂಡಿನ ಚಕಮಕಿಯಲ್ಲಿ ಹುತಾತ್ಮನಾದ ಭಾರತೀಯ ಸೈನಿಕರೊಬ್ಬರ ತಲೆಯನ್ನೇ ಕತ್ತರಿಸಿ ತೆಗೆದುಕೊಂಡು ಹೋಗಿದ್ದಾರೆ.ಜೊತೆಗೆ ದೇಹವನ್ನೆಲ್ಲಾ ಕತ್ತರಿಸಿ ಗಡಿಯಲ್ಲಿ ಹಾಕಿದ್ದಾರೆ.

ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ನುಸುಳಿ ಬಿಎಸ್‍ಎಫ್ ಯೋಧರನ್ನ ಗುರಿಯಾಗಿಸಿ ಫೈರಿಂಗ್ ನಡೆಸಿದ್ರು. ಭಯೋತ್ಪಾದಕರ ಗುಂಡೇಟಿಗೆ ಬಿಎಸ್‍ಎಫ್ ಯೋಧ ಮಂಜೀತ್ ಸಿಗ್ ಹುತಾತ್ಮರಾಗಿದ್ರು. ಇವರ ಮೃತದೇಹವನ್ನು ಹೊತ್ತೊಯ್ದು, ಶಿರಚ್ಛೇದ ಮಾಡಿ, ಅಂಗಾಂಗಗಳನ್ನ ತುಂಡು ತುಂಡಾಗಿ ಕತ್ತರಿಸಿದ್ದಾರೆ.

ಉಗ್ರರಿಗೆ ಭದ್ರತಾಪಡೆಗಳು ತಿರುಗೇಟು ನೀಡಿದ್ದಾರೆ. ಇದರಿಂದಾಗಿ ಮಚಿಲ್ ಗಡಿಭಾಗದಲ್ಲಿ ಸಿಕ್ಕಾಪಟ್ಟೆ ಗುಂಡಿನ ಚಕಮಕಿ ನಡೆದಿದೆ. ಓರ್ವ ಉಗ್ರನನ್ನು ಸದೆಬಡೆಯುವಲ್ಲಿ ಯೋಧರು ಯಶಸ್ವಿಯಾಗಿದ್ದಾರೆ. ಭಾರತದ ಸೇನೆ ಎಚ್ಚೆತ್ತುಕೊಳ್ಳುತ್ತಿದ್ದಂತೆ ದಾಳಿ ನಡೆಸ್ತಿದ್ದ ಎಲ್ಲಾ ಉಗ್ರರು ಪಾಕ್ ಸೇನೆಯ ಬಲದೊಂದಿಗೆ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ಓಡಿ ಹೋಗಿ ರಕ್ಷಣೆ ಪಡೆದಿದ್ದಾರೆ.

ಈ ಗುಂಡಿನ ಚಕಮಕಿಯಲ್ಲಿ ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ. ಇದಕ್ಕೂ ಮುನ್ನಾ ಪುಲ್ವಮಾ ಪ್ರದೇಶದೊಳಗೆ ನುಗ್ಗಿಬಂದ ಭಯೋತ್ಪಾದಕನೊಬ್ಬ ಮನೆಯೊಂದಕ್ಕೆ ನುಗ್ಗಿ ಓರ್ವ ಮಹಿಳೆಯನ್ನ ಹತ್ಯೆ ಮಾಡಿದ್ದಾನೆ.

ಪಾಕ್ ಉಗ್ರರ ಅನಾಗರಿಕ ದುಷ್ಕøತ್ಯಕ್ಕೆ ಭಾರತೀಯ ಸೇನೆ ಪ್ರತೀಕಾರದ ಘೋಷಣೆ ಮಾಡಿದೆ. ಉಗ್ರರ ಕೃತ್ಯಕ್ಕೆ ನಾವು ಪ್ರತೀಕಾರ ತೀರಿಸಿಕೊಳ್ತೇವೆ. 2011 ಹಾಗು 2013ರಲ್ಲೂ ಕಾಶ್ಮೀರದ ಮಂದರ್ ಸೆಕ್ಟರ್‍ನಲ್ಲಿ ಉಗ್ರರು ಯೋಧನ ಶಿರಚ್ಛೇದ ಮಾಡಿದ್ರು. ಇದಕ್ಕೆಲ್ಲಾ ನಾವು ತಕ್ಕ ಪಾಠ ಕಲಿಸ್ತೇವೆ ಅಂತಾ ಸೇನಾ ಮುಖ್ಯಸ್ಥ ಬಿಕ್ರಮ್ ಸಿಂಗ್ ಹೇಳಿದ್ದಾರೆ.


Viewing all articles
Browse latest Browse all 80062


<script src="https://jsc.adskeeper.com/r/s/rssing.com.1596347.js" async> </script>