Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80032

ಕಾವೇರಿ ಐತೀರ್ಪು ವಿಶೇಷ ಮೇಲ್ಮನವಿ ಅರ್ಜಿ ವಿಚಾರಣೆ: ಸುಪ್ರೀಂನಲ್ಲಿ ಬೆಳಗ್ಗೆ ಏನಾಯ್ತು?

$
0
0

ನವದೆಹಲಿ: ಸುಪ್ರೀಂಕೋರ್ಟ್‍ನಲ್ಲಿ ಕಾವೇರಿ ನದಿ ನೀರು ಹಂಚಿಕೆ ವಿವಾದದ ವಿಚಾರಣೆ ನಡೆದಿದ್ದು, ಮಧ್ಯಾಹ್ನ 2 ಗಂಟೆಗೆ ಮುಂದೂಡಿಕೆಯಾಗಿದೆ. ಕಾವೇರಿ ನ್ಯಾಯಾಧಿಕರಣದ ಐತೀರ್ಪು ಪ್ರಶ್ನಿಸಿದ್ದ ಮೇಲ್ಮನವಿ ಅರ್ಜಿಯನ್ನ ಸುಪ್ರೀಂಕೋರ್ಟ್‍ನ ಹಾಲ್ ನಂಬರ್ 4ರಲ್ಲಿ ನ್ಯಾಯಮೂರ್ತಿಗಳಾದ ಅಮಿತಾವ್ ರಾಯ್, ನ್ಯಾಯಮೂರ್ತಿ ಅಜಯ್ ಎಂ. ಖಾನ್ವಿಲ್ಕರ್, ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು.

11 ಗಂಟೆಗೆ ವಿಚಾರಣೆ ಆರಂಭವಾದಾಗ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ಮಾತ್ರ ಹಾಜರಿದ್ರು. ಆದ್ರೆ ಅಟಾರ್ನಿ ಜನರಲ್ ರೋಹ್ಟಗಿ ಹಾಜರಿರದ ಹಿನ್ನೆಲೆಯಲ್ಲಿ ವಿಚಾರಣೆ ಕೆಲ ಕಾಲ ಮುಂದೂಡಿದ್ರು. ಇದೇ ವೇಳೆಮಂಡಳಿ ರಚನೆ ಸಂಸತ್‍ಗೆ ಇರುವ ಅಧಿಕಾರ ಅಂತಾ ನೀರು ನಿರ್ವಹಣಾ ಮಂಡಳಿ ರಚನೆ ಪ್ರಶ್ನಿಸಿದ ಕೇಂದ್ರ ಸರ್ಕಾರದ ಅರ್ಜಿ ಯೋಗ್ಯವೇ? ಇಲ್ಲವೇ? ಎಂಬ ಬಗ್ಗೆ 1 ವಾರದಲ್ಲಿ ತೀರ್ಪು ಕೊಡುತ್ತೇವೆ ಅಂತಾ ಸುಪ್ರೀಂ ಪೀಠ ಹೇಳಿತು.

11.20ಕ್ಕೆ ಮತ್ತೆ ಆರಂಭವಾದ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ತ್ರಿ ಸದಸ್ಯ ಪೀಠದ ಮುಂದೆ ಅಟಾರ್ನಿ ಜನರಲ್ ರೋಹ್ಟಗಿ ಹಾಜರಿದ್ರು. ಆಗ ಕೇಂದ್ರ ಅಧ್ಯಯನ ತಂಡದ ವರದಿ ಪರಿಶೀಲಿಸಿ ಕೇಂದ್ರ ಅಧ್ಯಯನ ತಂಡ ಎರಡೂ ರಾಜ್ಯಗಳಿಗೆ ಪ್ರವಾಸಕೈಗೊಂಡು ನೀಡಿದ್ದ ವಾಸ್ತವ ವರದಿಯನ್ನ ಪರಿಶೀಲನೆ ನಡೆಸಿದ್ರು. ಬಳಿಕ ಪೀಠದ ಮುಂದೆ ಅಟಾರ್ನಿ ಜನರಲ್ ರೋಹ್ಟಗಿಯಿಂದ ವಾದ ಮಂಡಿಸಿ, ತಾಂತ್ರಿಕ ಉನ್ನತಾಧಿಕಾರ ತಂಡದ ವರದಿ ಬಗ್ಗೆ ಮಾಹಿತಿ ನೀಡಿದ್ರು. ಉನ್ನತಾಧಿಕಾರ ತಂಡದ ವರದಿ ಏನೆಂದು ಅಟಾರ್ನಿ ಜನರಲ್ ರೋಹ್ಟಗಿಗೆ ಸುಪ್ರೀಂಕೋರ್ಟ್ ಪ್ರಶ್ನಿಸಿತು.

ಇದೇ ವೇಳೆ ತಾಂತ್ರಿಕ ಉನ್ನತಾಧಿಕಾರ ತಂಡದ ವರದಿಗೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿತು. ಇದೇ ವೇಳೆ ನೀರು ನಿರ್ವಹಣಾ ಮಂಡಳಿ ರಚನೆ ವಿಚಾರವಾಗಿ ಸಂಸತ್‍ಗೆ ಅಧಿಕಾರ ಇರೋದು ಅಂತಾ ಅಟಾರ್ನಿ ಜನರಲ್ ರೋಹ್ಟಗಿ ಆರ್ಟಿಕಲ್ 262 ಉಲ್ಲೇಖಿಸಿದ್ರು. ಆಗ ನ್ಯಾ.ದೀಪಕ್ ಮಿಶ್ರಾ ಇಂದು ಮಧ್ಯಂತರ ಆದೇಶ ನೀಡಬೇಕಾಗುತ್ತೆ ಅಂತೇಳಿದ್ರು. ಸಾಂವಿಧಾನಿಕ ಪೀಠದಲ್ಲಿ ಈ ಅರ್ಜಿ ವಿಚಾರಣೆ ನಡೆಯಬೇಕು ಅಂತಾ ತ್ರಿಸದಸ್ಯ ಪೀಠಕ್ಕೆ ಅಟಾರ್ನಿ ಜನರಲ್ ನೀಡಿದ ಹೇಳಿಕೆಗೆ ಕರ್ನಾಟಕ ಪರ ವಕೀಲ ಸಹಮತ ವ್ಯಕ್ತಪಡಿಸಿದ್ರು.

ಈ ನಡುವೆ ನೀರು ಹಂಚಿಕೆ ಉಭಯ ರಾಜ್ಯಗಳ ಮಧ್ಯೆ ವಾರ್ಷಿಕ ಸಮಸ್ಯೆ, ಕೇಂದ್ರದ ಅರ್ಜಿ ಇತ್ಯರ್ಥವಾದ್ರೆ ಶೇಕಡ 50 ರಷ್ಟು ಸಮಸ್ಯೆ ಇತ್ಯರ್ಥವಾಗುತ್ತೆ ಅಂತಾ ತಮಿಳುನಾಡು ಪರ ವಕೀಲ ಶೇಖರ್ ನಾಫ್ಡೆ ಹೇಳಿದ್ರು. ಎರಡೂ ರಾಜ್ಯಗಳಲ್ಲೂ ಸಹ ಸಂಕಷ್ಟ ಇದೆ ಆದ್ದರಿಂದ ಈ ಪರಿಸ್ಥಿತಿಯಲ್ಲಿ ಪರಿಹಾರ ಏನು.? ಅಂತಾ ನ್ಯಾ.ದೀಪಕ್ ಮಿಶ್ರಾ ಕರ್ನಾಟಕ ಪರ ವಕೀಲ ನಾರಿಮನ್ ಅವರನ್ನ ಪ್ರಶ್ನಿಸಿದಾಗ ನಾಡಿದ್ದು ಕರ್ನಾಟಕದ ಪರವಾಗಿ ಕೆಲ ದಾಖಲೆ ಸಲ್ಲಿಸುತ್ತೇವೆ ಅಂತಾ ವಕೀಲ ನಾರಿಮನ್ ಹೇಳಿದ್ರು.

ಬಳಿಕ ಪ್ರಾಥಮಿಕ ವಾದವನ್ನ ಆಲಿಸಿರುವ ಸುಪ್ರೀಂ ತ್ರಿಸದಸ್ಯ ಪೀಠ ಮಧ್ಯಾಹ್ನ 2 ಗಂಟೆಗೆ ವಿಚಾರಣೆ ಮುಂದೂಡಿದ್ದು, ಮಧ್ಯಂತರ ಆದೇಶ ನೀಡುತ್ತೋ? ಎಲ್ಲ ವಿಚಾರಣೆ ಮತ್ತೆ ಮುಂದೂಡುತ್ತೊ? ಅನ್ನೋದನ್ನ ಕಾದುನೋಡಬೇಕಿದೆ.


Viewing all articles
Browse latest Browse all 80032


<script src="https://jsc.adskeeper.com/r/s/rssing.com.1596347.js" async> </script>