ಧಾರವಾಡ: ನೇತ್ರದಾನ ಮಹಾ ದಾನ ಎನ್ನುವ ಮಾತಿದೆ. ಜಗತ್ತಿನಲ್ಲಿ ಕೋಟ್ಯಾಂತರ ಜನರು ಅಂಧ ವೈಕಲ್ಯತೆಯಿಂದ ಬಳಲುತಿದ್ದಾರೆ. ಆದ್ರೆ ಅವರಿಗೆ ಕಣ್ಣು ದಾನ ಮಾಡೋರು ಯಾರೂ ಇಲ್ಲ. ಧಾರವಾಡದಲ್ಲೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ನನ್ನ ಕಣ್ಣನ್ನು ದಾನ ಮಾಡಿ ಎಂದು ಬರೆದಿಟ್ಟು, ಕಣ್ಣನ್ನು ದಾನ ಮಾಡಿಸಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಧಾರವಾಡದ ನೆಹರೂನಗರ ನಿವಾಸಿ ಅಬ್ದುಲ್ವಹಾಬ್ ದೊಡ್ಡಮನಿ (28) ಆತ್ಮಹತ್ಯೆಗೆ ಶರಣಾಗಿದ್ದು, ಡೆತ್ನೋಟ್ನಲ್ಲಿ ಕಣ್ಣು ದಾನ ಮಾಡಬೇಕೆಂದು ಬರೆದಿಟ್ಟಿದ್ದ ಇವರ ಆಸೆಯನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ. ಕಳೆದ ಹಲವು ದಿನಗಳಿಂದ ದೊಡ್ಡಮನಿಗೆ ಹೊಟ್ಟೆ ನೋವು ಹಾಗೂ ತಲೆ ನೋವಿನ ಸಮಸ್ಯೆ ಕಾಡುತ್ತಿದ್ದು, ಇದರಿಂದ ಬೆಸತ್ತು ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ನಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೂ ಮೊದಲು ನನ್ನ ಸಾವಿಗೆ ನಾನೇ ಕಾರಣ, ನನ್ನ ಕಣ್ಣುಗಳನ್ನ ದಾನ ಮಾಡಿ ಎಂದು ಡೆತ್ ನೋಟ್ನಲ್ಲಿ ಬರೆದು ನೇಣಿಗೆ ಶರಣಾಗಿದ್ದಾರೆ. ಟ್ಯಾಕ್ಸಿ ಓಡಿಸುತ್ತಿದ್ದ ದೊಡ್ಡಮನಿಗೆ ಆರೋಗ್ಯ ಸಮಸ್ಯೆ ಮಾತ್ರ ಸಾವನ್ನೇ ಬಿಡುವಂತೆ ಮಾಡಿದೆ.
The post ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಾದಾನಿ appeared first on Public TV.