ಬೆಂಗಳೂರು: ಟೆಂಪೋಗೆ ಸೈಡ್ ಕೊಡಲಿಲ್ಲ ಎಂಬ ಕಾರಣಕ್ಕೆ ಚಾಲಕನೊಬ್ಬ ಕಂಡಕ್ಟರ್ಗೆ ಕಲ್ಲಿನಿಂದ ಹೊಡೆದಿರೋ ಘಟನೆ ಬೆಂಗಳೂರಿನ ಜಾಲಹಳ್ಳಿ ಬಳಿ ನಡೆದಿದೆ.
ದುರ್ಗಾಸಿಂಗ್ ಹಲ್ಲೆಗೆ ಒಳಗಾದ ಕಂಡಕ್ಟರ್. ನಿನ್ನೆ ರಾತ್ರಿ ಕೆಎಸ್ಆರ್ಟಿಸಿ ಬಸ್ ಡ್ರೈವರ್ ಟೆಂಪೋಗೆ ಜಾಗ ಬಿಟ್ಟಿರಲಿಲ್ಲ. ಆ ಸಂದರ್ಭದಲ್ಲಿ ಟೆಂಪೋ ಚಾಲಕ ರೋಡಿಗಿಳಿದು ಗಲಾಟೆ ಮಾಡಿದ್ದ. ನಂತರ ಪೊಲೀಸರು ಸ್ಥಳಕ್ಕೆ ಬಂದು ಜಗಳ ಬಿಡಿಸಿ ಕಳುಹಿಸಿದ್ರು.
ಇದನ್ನೇ ಮನಸ್ಸಲ್ಲಿ ಇಟ್ಟುಕೊಂಡು ಟೆಂಪೋ ಚಾಲಕ ಬಸ್ ಓವರ್ ಟೇಕ್ ಮಾಡಿ ಬಳಿಕ ರಿಂಗ್ ರಸ್ತೆಯಲ್ಲಿ ಬಸ್ ತಡೆದು ಕಂಡಕ್ಟರ್ ದುರ್ಗಾಸಿಂಗ್ಗೆ ಕಲ್ಲಿನಿಂದ ಹೊಡೆದು ಮಾರಾಣಾಂತಿಕ ಹಲ್ಲೆ ನಡೆಸಿದ್ದಾನೆ
ಈ ಬಗ್ಗೆ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
The post ಟೆಂಪೋಗೆ ಸೈಡ್ ಕೊಡ್ಲಿಲ್ಲ ಎಂದು ಬಸ್ ಕಂಡಕ್ಟರ್ಗೆ ಕಲ್ಲಿನಿಂದ ಹೊಡೆದ appeared first on Kannada Public tv.