ಮುಂಬೈ: ವ್ಯಕ್ತಿಯೋರ್ವ ತನ್ನ ತಾಯಿ, ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನ ಭೀಕರವಾಗಿ ಹತ್ಯೆಗೈದಿರೋ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಡ್ನೂರು ಗ್ರಾಮದಲ್ಲಿ ನಡೆದಿದೆ.
45 ವರ್ಷ ವಯಸ್ಸಿನ ಭರತ್ ಇರ್ಕಾರ್ ತನ್ನ ಕುಟುಂಬದ ನಾಲ್ವರನ್ನ ಹತ್ಯೆಗೈದ ಆರೋಪಿ. ತಾಯಿ ಸುಶೀಲಾ, ಪತ್ನಿ ಸಿಂಧುಬಾಯಿ ಇರ್ಕಾರ್ ಹಾಗೂ ಮಕ್ಕಳಾದ ರೂಪಾಲಿ, ರಾಣಿ ಮೃತ ದುರ್ದೈವಿಗಳು.
ಕೊಲೆಗೆ ಕಾರಣವೇನು?: ಆರೋಪಿ ಭರತ್ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಹೆಂಡತಿ ಸಿಂಧುಬಾಯಿಯೊಂದಿಗೆ ಜಗಳವಾಡಿಕೊಂಡಿದ್ದಾನೆ. ಜಗಳ ತಾರಕಕ್ಕೇರಿ ಆಕೆಯನ್ನ ಇರಿದು ಕೊಂದಿದ್ದಾನೆ. ನಂತರ ಆತನ ತಾಯಿ ಹಾಗೂ ಇಬ್ಬರು ಮಕ್ಕಳನ್ನೂ ಕೂಡ ಜಮೀನಿಗೆ ಕರೆದೊಯ್ದು ಹೆಂಡತಿಯನ್ನು ಕೊಂದಂತೆಯೇ ಅವರನ್ನೂ ಕೊಂದಿದ್ದಾನೆ ಎಂದು ಈವರೆಗೂ ನಡೆದಿರುವ ತನಿಖೆಯಿಂದ ಬಹಿರಂಗವಾಗಿದೆ. ಕೊಲೆ ಮಾಡಿದ ಬಳಿಕ ಆರೋಪಿ ಭರತ್ ನೇರವಾಗಿ ಜಾಟ್ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಗಂಡು ಮಕ್ಕಳು ಸೇಫ್: ಆರೋಪಿ ಭರತ್ಗೆ ಇಬ್ಬರು ಗಂಡು ಮಕ್ಕಳು ಕೂಡ ಇದ್ದು, ಅವರು ಶುಕ್ರವಾರ ರಾತ್ರಿಯೇ ಗಣೇಶ ಹಬ್ಬ ಆಚರಣೆಗೆ ಹೊರಗೆ ಹೋಗಿದ್ದರು. ಕೊಲೆ ನಡೆದಾಗಲೂ ಅವರು ಮನೆಯಲ್ಲಿ ಇರಲಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.
The post ತಾಯಿ, ಪತ್ನಿ, ಮಕ್ಕಳನ್ನು ಜಮೀನಿನಲ್ಲೇ ಭೀಕರವಾಗಿ ಕೊಂದ appeared first on Kannada Public tv.