Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80455

ಕಾವೇರಿಗಾಗಿ ಅಖಂಡ ಕರ್ನಾಟಕವೇ ಒಂದಾಗಬೇಕು: ಶಿವಣ್ಣ

$
0
0

 

ಬೆಂಗಳೂರು: ಕಾವೇರಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಕನ್ನಡ ಚಿತ್ರರಂಗ ಕೈ ಜೋಡಿಸಿದ್ದು, ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ಇಂದಿನ ಕರ್ನಾಟಕ ಬಂದ್‍ಗೆ ಕನ್ನಡ ಚಿತ್ರೋದ್ಯಮ ಸಂಪೂರ್ಣವಾಗಿ ಬೆಂಬಲ ನೀಡಿತ್ತು.

ಈ ವೇಳೆ ಮಾತನಾಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಾವೇರಿಗಾಗಿ ಹೋರಾಟ ಕೇವಲ ಮಂಡ್ಯ, ಬೆಂಗಳೂರಿನಲ್ಲಿ ಮಾತ್ರವಲ್ಲದೇ ಅಖಂಡ ಕರ್ನಾಟಕದಲ್ಲಿ ನಡೆಯಬೇಕು, ಕೇವಲ ಬೆಂಗಳೂರಿಗರು ಮಾತ್ರವಲ್ಲದೇ ಹುಬ್ಬಳ್ಳಿ ಸೇರಿದಂತೆ ಉತ್ತರಕರ್ನಾಟಕದ ಜನತೆಯೂ ಕೈ ಜೋಡಿಸಬೇಕು ಎಂದರು.

ಇನ್ಮುಂದೆ ವೋಟ್ ಹಾಕಿ ಯಾವುದೇ ಸರ್ಕಾರವನ್ನ ಆಯ್ಕೆ ಮಾಡಬೇಕಾದ್ರೆ ಯೋಚನೆ ಮಾಡಿ, ಯಾರಿಗೆ ಹೋರಾಟ ಮಾಡುವ ತಾಕತ್ತಿರುತ್ತೋ ಅಂತವರಿಗೆ ನಿಮ್ಮ ಮತ ಹಾಕಿ, ಈಗ ಕಾವೇರಿಗಾಗಿ ನಾವು ನೀವು ಹೋರಾಟ ಮಾಡುತ್ತಿದ್ದೇವೆ, ಇಲ್ಲಿ ಯಾವುದೇ ಜನಪ್ರತಿನಿಧಿಗಳು ಬಂದಿಲ್ಲ, ಅವರೆಲ್ಲ ಬಿಸ್ಲೆರಿ ನೀರು ಕುಡಿಯುತ್ತಾರೆ ಆದ್ರೆ ನಮಗೆ ಕುಡಿಯೋಕೆ ನೀರಿಲ್ಲ.

ರಾಜ್ಯದಲ್ಲಿರುವ ತಮಿಳರು ಕೂಡ ಹೋರಾಟಕ್ಕೆ ಬರಬೇಕು, ಅವರು ಕೂಡ ಇಲ್ಲಿಯ ನೀರನ್ನೇ ಕುಡಿಯೋದು, ಇಲ್ಲಿಯ ಅನ್ನವನ್ನೇ ತಿನ್ನೋದು, ಅವರು ಬರಬೇಕು ಹೋರಾಟಕ್ಕೆ. ಯಾವುದೇ ಹೋರಾಟವಾದ್ರೂ ಚಿತ್ರರಂಗ ಜೊತೆಗಿರುತ್ತೆ, ಮಾತಿಗೂ ಮುಂಚೆ ಕಲಾವಿದರೂ ಬರಲ್ಲ ಅಂತ ಹೇಳಬೇಡಿ, ಕೆಲವು ಕಲಾವಿದರೂ ಬೇರೆಡೆಗೆ ಹೋಗಿರುತ್ತಾರೆ, ಇಲ್ಲಿ ಒಬ್ಬ ಕಲಾವಿದ ಬಂದ್ರೂ ಇಡೀ ಚಿತ್ರರಂಗವೇ ಬಂದಂತೆ ಎಂದು ಹೇಳಿದರು.

ಇದೇ ವೇಳೆ ಕೆಲವು ಪ್ರತಿಭಟನಾಕಾರರು ಸೆಲ್ಫೀ ಕ್ಲಿಕ್ಕಿಸಿಕೊಳ್ಳುತ್ತಿದ್ದನ್ನ ನೋಡಿದ ಶಿವಣ್ಣ ಸಿಟ್ಟಿಗೆದ್ದು, ಇಲ್ಲಿ ನಾವು ನೀವು ಬಂದಿರುವುದು ಸೆಲ್ಫೀ ತೆಗೆಸಿಕೊಳ್ಲುವುದಕ್ಕಲ್ಲ, ಹೋರಾಟ ಮಾಡುವುದಕ್ಕೆ, ಅದಕ್ಕೆಂದೆ ಇನ್ನೊಂದು ದಿನ ನಿಗದಿ ಮಾಡೋಣ, ಯಾರು ನಮಗೆ ಜೈ ಎನ್ನುವುದು ಬೇಕಾಗಿಲ್ಲ, ಕಾವೇರಿಗಾಗಿ ಕರ್ನಾಟಕ್ಕಾಗಿ ಜೈ ಎಂದು ಹೇಳಿ, ಭಾಷೆ ಹಾಗೂ ನೀರು ಅಂತ ಬಂದಾಗ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ತಿಳಿಸಿದರು.

The post ಕಾವೇರಿಗಾಗಿ ಅಖಂಡ ಕರ್ನಾಟಕವೇ ಒಂದಾಗಬೇಕು: ಶಿವಣ್ಣ appeared first on Kannada Public tv.


Viewing all articles
Browse latest Browse all 80455

Trending Articles


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ತುಳು ತೆರೆಗೆ ಸೋನಿಯಾ ಎಂಟ್ರಿ


ಮತ್ತೊಂದು ಬೆಚ್ಚಿಬೀಳಿಸುವ ಘಟನೆ: ಕಬ್ಬಿನಗದ್ದೆಯಲ್ಲಿ ಅತ್ಯಾಚಾರದ ಬಳಿಕ ಪೈಶಾಚಿಕ ಕೃತ್ಯ


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>