Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80365

ಗೌರಿ ಹಬ್ಬದ ವಿಶೇಷ: ಕಾಯಿ ಹೋಳಿಗೆ ಮಾಡೋ ವಿಧಾನ

$
0
0

ಗೌರಿ ಹಬ್ಬ ವಿಶೇಷವಾಗಿ ಹೆಣ್ಣು ಮಕ್ಕಳ ಹಬ್ಬ. ಸಂಭ್ರಮ ಸಡಗರದ ಈ ಹಬ್ಬಕ್ಕೆ ಸಿಹಿ ಹೂರಣದ ಕಾಯಿ ಹೋಳಿಗೆ ಮಾಡಿ ಸವಿದರೆ ಹೇಗೆ? ಅದಕ್ಕಾಗಿ ಇಲ್ಲಿದೆ ಕಾಯಿ ಹೋಳಿಗೆ ಮಾಡೋ ಸಿಂಪಲ್ ವಿಧಾನ.

ಬೇಕಾಗುವ ಸಾಮಗ್ರಿಗಳು: 
1. ಮೈದಾಹಿಟ್ಟು – 1 1/2 ಕಪ್
2. ಚಿರೋಟಿ ರವೆ – 1 ಕಪ್
3. ಅರಿಶಿಣ – ಸ್ವಲ್ಪ
4. ತೆಂಗಿನ ಕಾಯಿ ತುರಿ- 2 ಕಪ್
5. ಬೆಲ್ಲ- 1 1/2 ಕಪ್
6. ಗಸಗಸೆ- 1/2 ಚಮಚ
7. ಏಲಕ್ಕಿ – 5
8. ಎಣ್ಣೆ- 1 ಕಪ್

ಮಾಡುವ ವಿಧಾನ
ಕಣಕ: 
* ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಅರಿಶಿಣ ಮತ್ತು ಚಿರೋಟಿ ರವೆ ಹಾಕಿ ಅಗತ್ಯವಿರುವಷ್ಟು ನೀರು (ಹಿಟ್ಟು ಗಟ್ಟಿಯಾಗದಂತೆ ಹೆಚ್ಚಿಗೆ ನೀರು ಹಾಕಿ) ಚೆನ್ನಾಗಿ ಕಲಸಿ.
* ನಂತರ ಅರ್ಧ ಕಪ್ ಎಣ್ಣೆ ಹಾಕಿ ಚೆನ್ನಾಗಿ ನಾದಿಕೊಂಡು ಇದರ ಮೇಲೆ ಒಂದು ಪ್ಲಾಸ್ಟಿಕ್ ಕವರ್ ಅಥವಾ ತಟ್ಟೆಯನ್ನು ಮುಚ್ಚಿ 1 ಗಂಟೆ ನೆನೆಯಲು ಬಿಡಿ.

ಹೂರಣ:
* ಮಿಕ್ಸಿ ಜಾರ್‍ಗೆ ತೆಂಗಿನಕಾಯಿ ತುರಿ ಹಾಕಿ ನೀರು ಹಾಕದೆ ಒಂದು ರೌಂಡ್ ತರಿತರಿಯಾಗಿ ರುಬ್ಬಿಕೊಳ್ಳಿ.
* ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಪುಡಿ ಮಾಡಿದ ಬೆಲ್ಲ ಮತ್ತು ನೀರು ಹಾಕಿ ಕರಗಿಸಿ.
* ಬೆಲ್ಲದಲ್ಲಿ ಕಸ ಇದ್ದರೆ ಸೋಸಿಕೊಳ್ಳಿ.
* ನಂತರ ಇದಕ್ಕೆ ರುಬ್ಬಿಕೊಂಡ ತೆಂಗಿನಕಾಯಿ ತುರಿ ಹಾಕಿ ನೀರಿನ ಅಂಶ ಹೋಗುವವರೆಗೆ ತಿರುಗಿಸುತ್ತಿರಿ.
* ಕೊನೆಯಲ್ಲಿ ಪುಡಿ ಮಾಡಿದ ಏಲಕ್ಕಿ ಮತ್ತು ಗಸಗಸೆ ಹಾಕಿ ಮಿಕ್ಸ್ ಮಾಡಿ ತಣ್ಣಗಾಗಲು ಬಿಡಿ.

ಹೋಳಿಗೆ: 
* ನೆನೆಸಿಟ್ಟ ಮೈದಾ ಹಿಟ್ಟನ್ನು ಮತ್ತೊಮ್ಮೆ ಚೆನ್ನಾಗಿ ನಾದಿಕೊಳ್ಳಿ.
* ಒಂದು ಮಣೆ ಮೇಲೆ ಪ್ಲಾಸ್ಟಿಕ್ ಕವರ್ ಅಥವಾ ಬಾಳೆ ಎಲೆ ಹರಡಿ, ಸ್ವಲ್ಪ ಮೈದಾ ಹಿಟ್ಟಿನ ಮಿಶ್ರಣವನ್ನು ತೆಗೆದುಕೊಂಡು ತಟ್ಟಿಕೊಳ್ಳಿ.
* ಸ್ವಲ್ಪ ಹೂರಣ ತೆಗೆದುಕೊಂಡು ಉಂಡೆ ಮಾಡಿ, ತಟ್ಟಿಕೊಂಡಿರುವ ಮೈದಾ ಮಿಶ್ರಣದ ಮಧ್ಯ ಭಾಗದಲ್ಲಿ ಇಟ್ಟು ಹೂರಣ ಮುಚ್ಚುವಂತೆ ಎಲ್ಲಾ ಕಡೆಯಿಂದ ಮಡಚಿಕೊಳ್ಳಿ.
* ಪ್ಯಾನ್ ಬಿಸಿಗಿಟ್ಟು ಅದರ ಮೇಲೆ ಒಂದು ಚಮಚ ತುಪ್ಪ ಅಥವಾ ಎಣ್ಣೆ ಹಾಕಿ.
* ಹೂರಣ ತುಂಬಿದ ಮೈದಾ ಉಂಡೆಯನ್ನು ಅಗಲವಾಗಿ ತಟ್ಟಿಕೊಂಡು ಪ್ಯಾನ್ ಮೇಲೆ ಹಾಕಿ ಎರಡೂ ಬದಿ ಬೇಯಿಸಿ ತೆಗೆದರೆ ಕಾಯಿ ಹೋಳಿಗೆ ರೆಡಿ.

 

The post ಗೌರಿ ಹಬ್ಬದ ವಿಶೇಷ: ಕಾಯಿ ಹೋಳಿಗೆ ಮಾಡೋ ವಿಧಾನ appeared first on Kannada Public tv.


Viewing all articles
Browse latest Browse all 80365

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>