ಧಾರವಾಡ: ಮಹದಾಯಿ ಹೋರಾಟದಲ್ಲಿ ಬಂಧನಕ್ಕೊಳಗಾದ 187 ಜನರಲ್ಲಿ 186 ರೈತರಿಗೆ ಧಾರವಾಡ ಜಿಲ್ಲಾ ಕೋರ್ಟ್ ಜಾಮೀನು ನೀಡಿದೆ. ತಲಾ 50 ಸಾವಿರ ರೂಪಾಯಿ ಬಾಂಡ್ ಹಾಗೂ 10 ರೈತರ ಶೂರಿಟಿ ಮೇಲೆ ಬಿಡುಗಡೆ ಮಾಡಲು ಆದೇಶ ನೀಡಲಾಗಿದೆ.
ಬಳ್ಳಾರಿ ಜೈಲಿನಲ್ಲಿರುವ ರೈತರು ಹಾಗೂ ಚಿತ್ರದುರ್ಗದ ಜೈಲಿನಲ್ಲಿರುವ ರೈತರು ಇಂದು ಬಿಡುಗಡೆಯಾಗಲಿದ್ದಾರೆ. ತಾಂತ್ರಿಕ ದೋಷದಿಂದಾಗಿ ಇಬ್ರಾಹಿಂಸಾಬ್ ಬಸರಕೋಡ ಅನ್ನೋ ರೈತನಿಗೆ ಜಾಮೀನು ಸಿಕ್ಕಿಲ್ಲ. ಹೀಗಾಗಿ ಇವರಿಗೆ ಮತ್ತೊಮ್ಮೆ ಜಾಮೀನು ಅರ್ಜಿ ಸಲ್ಲಿಸಬೇಕಾಗಿದೆ. ಈಗಾಗಲೇ ವಕೀಲರು ಚಿತ್ರದುರ್ಗ ಹಾಗೂ ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ದಾರೆ.
ಜೈಲಿನ ಒಳಗೆ ಕಾನೂನು ಪ್ರಕ್ರಿಯೆಗಳು ಮುಗಿದ ಬಳಿಕ ಬೆಳಗ್ಗೆ 10 ವೇಳೆಗೆ ಬಂಧಿತ ರೈತರನ್ನು ಬಿಡುಗಡೆಗೊಳಿಸುವ ಸಾಧ್ಯತೆಯಿದೆ. ಕೀ ನಡುವೆ ಓರ್ವ ರೈತನನ್ನು ಬೆಂಗಳೂರು ಜೈಲಿನಲ್ಲಿಟ್ಟಿದ್ದಾರೆ ಅನ್ನೋ ಮಾಹಿತಿಯೂ ಸಿಕ್ಕಿದೆ. ಇಲ್ಲೂ ಬಿಡುಗಡೆ ಮಾಡ್ಬೇಕಿದೆ.
ರೈತರಿಗೆ ಜಾಮೀನು ಮಂಜೂರಾದ್ರು ಕೇಸ್ನಿಂದ ಇನ್ನೂ ಮುಕ್ತಿ ಸಿಕ್ಕಿಲ್ಲ. ಸರ್ಕಾರ ಕೇಸ್ ವಾಪಸ್ ಪಡೆಯದರೆ ಮಾತ್ರ ರೈತರು ನಿರಾಳ. ಜೊತೆಗೆ ಜಾಮೀನು ಮೇಲೆ ಹೊರಬಂದಿರುವ ರೈತರು ಮತ್ತೆ ಮಹದಾಯಿಗಾಗಿ ಹೋರಾಟ ಮಾಡ್ತಾರಾ ಇಲ್ವಾ ಅನ್ನೋ ಬಗ್ಗೆ ಕುತೂಹಲ ಮೂಡಿದೆ.
The post ಮಹದಾಯಿ ರೈತರಿಗೆ ಧಾರವಾಡ ಕೋರ್ಟ್ ಬೇಲ್: ಬಳ್ಳಾರಿ, ಚಿತ್ರದುರ್ಗ ಜೈಲಿನಿಂದ ರಿಲೀಸ್ appeared first on Kannada Public tv.