ಕಾರವಾರ: ಶ್ರೀ ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಶ್ರೀ ಒಂದು ವರ್ಷದ ಬಳಿಕ ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಕ್ಷೇತ್ರದ ಮಂಡಲಾಧೀಶ್ವರರಾಗಿರುವ ರಾಘವೇಶ್ವರ ಶ್ರೀ ಅತ್ಯಾಚಾರ ಆರೋಪದ ಹಿನ್ನಲೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿರಲಿಲ್ಲ. ಇಷ್ಟು ದಿನ ಬೆಂಗಳೂರಿನ ಗಿರಿನಗರ ಮಠದಲ್ಲೇ ಇದ್ದ ಅವರು ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಲಯದಿಂದ ಆರೋಪ ಮುಕ್ತರಾದ ಹಿನ್ನಲೆಯಲ್ಲಿ ಗೋಕರ್ಣಕ್ಕೆ ಭೇಟಿ ನೀಡಿದರು.
ನೂರಾರು ಭಕ್ತರು ಶ್ರೀಗಳಿಗೆ ಸ್ವಾಗತ ಕೋರಿದರು. ಬಳಿಕ ಮಹಾಬಲೇಶ್ವರ ದೇವಾಲಯದಲ್ಲಿ ಶ್ರೀಗಳು ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು.
The post ಒಂದು ವರ್ಷದ ಬಳಿಕ ಗೋಕರ್ಣ ಕ್ಷೇತ್ರಕ್ಕೆ ರಾಘವೇಶ್ವರ ಶ್ರೀ ಭೇಟಿ appeared first on Public TV.