ಉಡುಪಿ: ರೈತರು, ಬಡವರು ಅಂದ್ರೆ ನಮ್ ಪೊಲೀಸರಿಗೆ ಒಂಥರಾ ಅಸಡ್ಡೆ. ಆದ್ರೆ ದುಡ್ಡಿದ್ದವರು ಅಂದಾಕ್ಷಣ ಅವರಿಗೆ ಕೊಡೋ ಮರ್ಯಾದೆನೇ ಬೇರೆ. ಇದ್ಯಾಕಪ್ಪಾ ಹೇಳ್ತಿದ್ದೀವಿ ಅಂದ್ರೆ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಾದ ಪುತ್ರ ನವನೀತ್ ಮತ್ತು ತಾಯಿ ರಾಜೇಶ್ವರಿಗೆ ರಾಜಾತಿಥ್ಯ ಕೊಡ್ತಿರೋ ರೀತಿ ನೋಡಿದ್ರೆ ಅನುಮಾನ ಮೂಡಿದೆ.
ಹೌದು. ಆರೋಪಿಗಳಿಗೆ ಪೊಲೀಸರು ಸಿಕ್ಕಾಪಟ್ಟೆ ಅತಿಥ್ಯ ನೀಡುತ್ತಿದ್ದು, ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿರೋದ್ರಿಂದ ಪೊಲೀಸರೇ ಹೀಗೆ ಮಾಡ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.
ಮಂಗಳವಾರ ಆರೋಪಿಗಳನ್ನ ಸ್ಟೇಷನ್ಗೆ ಜೀಪ್ನಲ್ಲಿ ಕರೆದೊಯ್ಯುವಾಗ ಖುದ್ದು ಇನ್ಸ್ ಪೆಕ್ಟರ್ ಸೀಟ್ನಲ್ಲಿ ಆರೋಪಿ ನವನೀತ್ ಕುಳಿತುಕೊಳ್ಳುತ್ತಾನೆ. ಆದ್ರೆ ಇನ್ಸ್ ಪೆಕ್ಟರ್ ಗಿರೀಶ್ ಮಾತ್ರ ಹಿಂದಿನ ಸೀಟ್ನಲ್ಲಿ ಕುಳಿತು ಅಚ್ಚರಿ ಮೂಡಿಸಿದ್ರು.
ಅಚ್ಚರಿ ಅಂದ್ರೆ ಆರೋಪಿ ಕೈಗೆ ಬೇಡಿನೂ ಹಾಕಿಲ್ಲ. ಒಂದು ವೇಳೆ ಇನ್ಸ್ ಪೆಕ್ಟರ್ ಲೇಡಿ ಆಗಿದ್ದಲ್ಲಿ ಹಿಂದೆ ಓಕೆ ಅನ್ನಬಹುದು. ಆದ್ರೂ ದಷ್ಟಪುಷ್ಟವಾಗಿರೋ ಕೊಲೆ ಆರೋಪಿಯನ್ನ ಹೀಗೆ ಕೂರಿಸೋದು ಸರೀನಾ ಅನ್ನೋದು ಎಲ್ಲರ ಪ್ರಶ್ನೆಯಾಗಿದೆ.
The post ಉಡುಪಿ ಉದ್ಯಮಿ ಕೊಂದವರಿಗೆ ಪೊಲೀಸರಿಂದಲೇ ರಾಜಾತಿಥ್ಯ? appeared first on Kannada Public tv.