ಮಂಡ್ಯ: ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾಗಲು ನಿಶ್ಚಯಿಸಿರುವ ಯುವತಿಯ ಮನೆಮುಂದೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ಮಾಡಿದ ಘಟನೆ ಮಂಡ್ಯದಲ್ಲಿ ನಡೆದಿದೆ.
ವೈದ್ಯರಾದ ನರೇಂದ್ರಬಾಬು ಮತ್ತು ಉಮಾದೇವಿ ದಂಪತಿಯ ಪುತ್ರಿ ಅಶಿತ, ಶಕೀಲ್ ಅವರನ್ನು ಕಳೆದ 12 ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಈ ಇಬ್ಬರೂ ಎಂಬಿಎ ವಿದ್ಯಾರ್ಥಿಗಳಾಗಿದ್ದು, ಯುವತಿಯ ಪೋಷಕರು ಮಗಳ ಮದುವೆಗೆ ಒಪ್ಪಿಗೆ ನೀಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಇದು ಲವ್ ಜಿಹಾದ್ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಯುವತಿಯ ಮನೆ ಮುಂದೆ ಜಮಾಯಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಯಾವುದೇ ಅನಾಹುತವಾಗದಂತೆ ತಡೆಯಲು ಯುವತಿಯ ಮನೆಯವರಿಗೆ ರಕ್ಷಣೆ ಒದಗಿಸಿದ್ದಾರೆ. ಆದರೆ ಇಡೀ ಘಟನೆಯಿಂದ ವಿಚಲಿತರಾದ ಯುವತಿಯ ಕುಟುಂಬ, ನಾವು ಇಷ್ಟಪಟ್ಟು ಮಗಳ ಮದುವೆ ಮಾಡುತ್ತಿದ್ದೇವೆ. ನಮಗೆ ಯಾವುದೇ ಜಾತಿಯಿಲ್ಲ. ನಮ್ಮ ಮಗಳ ಸಂತೋಷವೇ ನಮ್ಮ ಸಂತೋಷ. ದಯಮಾಡಿ ನಮಗೆ ತೊಂದರೆ ಕೊಡಬೇಡಿ ಎಂದು, ಪ್ರತಿಭಟನಾ ನಿರತರನ್ನು ಕೇಳಿಕೊಂಡಿದ್ದಾರೆ.
The post ಮಂಡ್ಯದಲ್ಲಿ ಹಿಂದೂ ಮುಸ್ಲಿಂ ಮದುವೆಗೆ ಪೋಷಕರ ಒಪ್ಪಿಗೆ; ಹಿಂದೂ ಸಂಘಟನೆಗಳ ಪ್ರತಿಭಟನೆ appeared first on Public TV.