-ಖಾಕಿ ದರ್ಪಕ್ಕೆ ಜನ ಕಂಗಾಲು
ಬೆಂಗಳೂರು: ರಸ್ತೆಗಾಗಿ ಜನ್ರು ಕಿತ್ತಾಡೋದನ್ನ ನೋಡಿದ್ದೀರಾ. ಆದ್ರೆ ಇಲ್ಲೊಂದು ಕೇಸ್ ಉಲ್ಟಾ ಆಗಿದೆ. ಜನ್ರನ್ನ ರಕ್ಷಿಸೋ ಆರಕ್ಷಕರೇ ರಸ್ತೆಗಾಗಿ ಕಿತ್ತಾಟ ಮಾಡ್ತಿದ್ದಾರೆ.
ಬೆಂಗಳೂರಿನ ವೆಂಕಾಟಪುರ ನಿವಾಸಿಗಳು ಪೊಲೀಸರ ದರ್ಪಕ್ಕೆ ಏನು ಮಾಡೋದು ಅಂತ ತಿಳಿಯದೆ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾರೆ. ಅಷ್ಟಕ್ಕೂ ಇವರು ಕೇಳ್ತಿರೋದು ಓಡಾಡೋಕೆ ರಸ್ತೆಬೇಕು ಅಂತ. ವೆಂಕಟಾಪುರದ ಸರ್ಜಾಪುರ ಮುಖ್ಯ ರಸ್ತೆಗೆ ಕೆಎಸ್ಆರ್ಪಿಯ 4ನೇ ಪಡೆಯ ಕ್ವಾಟ್ರರ್ಸ್ ರಸ್ತೆ ಇದೆ. 2007ರಲ್ಲಿ ಭದ್ರತೆಯ ನೆಪ ಹೇಳಿ ರಸ್ತೆಯನ್ನ ಪೊಲೀಸರು ಮುಚ್ಚಿದ್ದಾರೆ. ಇದ್ರಿಂದ ನಿತ್ಯ ಜನ ಸಂಚಾರ ಮಾಡೋಕೆ ಕಷ್ಟಪಡುತ್ತಿದ್ದಾರೆ.
ಅಸಲಿಗೆ ಬಿಡಿಎ, ಕೆಎಸ್ಆರ್ಪಿಗೆ ಜಾಗ ಮಂಜೂರು ಮಾಡೋವಾಗ ರೋಡ್ ಮುಚ್ಚಬಾರದು ಅಂತ ಸೂಚಿಸಿತ್ತು. ಆದ್ರೆ ಅಧಿಕಾರಿಗಳು ದರ್ಪದಿಂದ ಅನಧಿಕೃತ ಕಾಂಪೌಂಡ್ ನಿರ್ಮಿಸಿದ್ದಾರೆ. ಹೈಕೋರ್ಟ್ ಕೂಡಾ ಕಾಂಪೌಂಡ್ ತೆರವು ಮಾಡುವಂತೆ ಆದೇಶ ಮಾಡಿದ್ರು, ವಿಧಾನಸಭೆ ಅರ್ಜಿಗಳ ಸಮಿತಿ ಕೂಡಾ ರಸ್ತೆ ಬಿಡುವಂತೆ ಆದೇಶಿದ್ರು ಪ್ರಯೋಜನವಾಗಿಲ್ಲ.ಸ್ಥಳೀಯ ಎಂಎಲ್ಎ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಂಸದ ಅನಂತ್ ಕುಮಾರ್ ಸಹ ಕೈಕಟ್ಟಿ ಕುಳಿತಿದ್ದಾರೆ ಅನ್ನೋದು ಸ್ಥಳೀಯರ ಆರೋಪವಾಗಿದೆ.
ಜನರ ಸಮಸ್ಯೆ ಪರಿಹರಿಸಬೇಕಾದ ಪೊಲೀಸರೇ ಈಗ ಸಮಸ್ಯೆಯನ್ನ ಹುಟ್ಟಿ ಹಾಕಿದ್ದಾರೆ. ಸಂಚಾರಕ್ಕಾಗಿ ರೋಡ್ ಕೇಳ್ತಿರೋ ಜನರಿಗೆ ರಸ್ತೆ ಬಿಡದೆ ಹಠ ಮಾಡ್ತಿದ್ದಾರೆ. ಇಲಾಖೆ ಉನ್ನತ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ ಜನರಿಗೆ ನ್ಯಾಯ ಒದಗಿಸಿಕೊಡಬೇಕಾಗಿದೆ.
The post ರಸ್ತೆಗೆ ಅಕ್ರಮವಾಗಿ ಕಾಂಪೌಂಡ್ ಹಾಕಿದ್ರು ಪೊಲೀಸ್ರು! appeared first on Kannada Public tv.