Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80395

ಹುಲಿರಾಯ- ಕಾಡಿನಿಂದ ನಾಡಿಗೆ, ಅಕ್ಟೋಬರ್ 6ಕ್ಕೆ ಬರಲಿದ್ದಾನೆ

$
0
0

ಬೆಂಗಳೂರ: ಎಸ್.ಎಲ್.ಎನ್ ಕ್ರಿಯೇಷನ್ಸ್ ಅಡಿಯಲ್ಲಿ, ನಾಗೇಶ್ ಕೋಗಿಲು ನಿರ್ಮಾಣದಲ್ಲಿ, ಅರವಿಂದ ಕೌಶಿಕ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹು ನಿರೀಕ್ಷಿತ ಚಿತ್ರ ಹುಲಿರಾಯ ಈಗ ತೆರೆಗೆ ಬರಲು ಕ್ಷಣಗಣನೆ ಶುರುವಾಗಿದೆ. ಅಕ್ಟೋಬರ್ ಆರಕ್ಕೆ ರಾಜ್ಯಾದ್ಯಂತ ಈ ಚಿತ್ರವು ಪರಮ್ವಾಹ್ ಸ್ಟುಡಿಯೋಸ್ ಮತ್ತು ಪುಷ್ಕರ್ ಫಿಲಮ್ಸ್ ರವರ ವಿತರಣೆಯ ಮುಖಾಂತರ ಕನ್ನಡ ಪ್ರೇಕ್ಷಕನೆದುರಿಗೆ ಬರಲಿದೆ.

ಈಗಾಗಲೇ ಬಹಳಷ್ಟು ನಿರೀಕ್ಷೆಗಳನ್ನ ಹುಟ್ಟುಹಾಕಿರುವ ಚಿತ್ರ ಹುಲಿರಾಯ. ತನ್ನ `ಫಸ್ಟ್ ಲುಕ್` ನಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ ಸಿನೆಮಾ ಇದು. ತದನಂತರ, `ಮೋಷನ್ ಪೋಸ್ಟರ್’, ಧ್ವನಿ ಸುರುಳಿ ಬಿಡುಗಡೆ, ಮುಂದಕ್ಕೆ ಚಿತ್ರದ `ಅಫಿಶಿಯಲ್ ಟ್ರೈಲರ್’ ಹೀಗೆ ವಿಶಿಶ್ಟವಾದ ಸಂಗತಿಗಳನ್ನು ಚಿತ್ರ ತಂಡ ಪ್ರೇಕ್ಷಕನೆದುರಿಗೆ ತರುತ್ತಾ ಹೋಯಿತು. ಚಿತ್ರದ ಬಗೆಗಿನ ನಿರೀಕ್ಷೆಯೂ ಹೆಚ್ಚಿದೆ. ಈಗಾಗಲೇ ಚಿತ್ರವನ್ನು ನೋಡಿರುವ ಸಿನೆಮಾ ಮಂದಿಯೂ ಸಹ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಹುಲಿರಾಯ ಚಿತ್ರದಲ್ಲಿ ಬಾಲು ನಾಗೇಂದ್ರ ನಾಯಕ ನಟನಾಗಿದ್ದು, ಚಿರಶ್ರಿ ಅಂಚನ್ ಹಾಗು ದಿವ್ಯಾ ಉರುಡುಗಾ ನಾಯಕಿಯರಾಗಿದ್ದಾರೆ.

ಚಿತ್ರಕ್ಕೆ ರವಿ ಅವರ ಛಾಯಾಗ್ರಹಣ, ಅರ್ಜುನ್ ರಾಮು ರವರ್ ಸಂಗೀತ ಸಂಯೋಜನೆಯಿದ್ದು ಚಿತ್ರದ ಹಾಡುಗಳೂ ಸಹ ‘ಹಿಟ್’ ಆಗಿವೆ. ಚಿತ್ರದಲ್ಲಿನ ವಿವಿಧ ಸನ್ನಿವೇಶಗಳನ್ನು ಹಾಡುಗಳ ಮುಖಾಂತರ ಕಥೆಯೊಂದಿಗೆ ಸಾಗುವ ಹಾಗೆ ಚಿತ್ರಿಸಿರುವ ನಿರ್ದೇಶಕ, ಹಾಡುಗಳನ್ನ ಸಾಂದರ್ಭಿಕವಾಗಿ ಬಳಸುವುದರಲ್ಲಿ ಯಶಸ್ವಿಯಾಗಿದ್ದಾರೆ.

ಚಿತ್ರಕ್ಕೆ ರವಿ ರವರು ಒದಗಿಸಿರುವ ಛಾಯಾಗ್ರಹಣವೇ ಆಗಿರಲಿ, ಅರ್ಜುನ್ ರಾಮು ರವರು ಒದಗಿಸಿರುವ ಸಂಗೀತವೇ ಆಗಿರಲಿ, ಬಾಲು ನಾಗೇಂದ್ರ ರವರ ನಟನೆಯೇ ಆಗಲಿ.. ಎಲ್ಲವೂ `ಸೈ’ ಎನ್ನಿಸಿಕೊಂಡಂತೆಯೇ ಕಾಣುತ್ತಿದೆ. ಹುಲಿರಾಯನ ಕಥೆಯ ಇಂದಿನ ಸಾಮಾಜಿಕ ಆಗುಹೋಗುಗಳನ್ನು ಬಿಂಬಿಸುತ್ತಾ ಮನರಂಜನೆ ನೀಡುತ್ತಾ ಸಾಗುತ್ತದೆ ಎಂದು ಹೇಳುತ್ತಾರೆ ನಿರ್ದೇಶಕರು.

ಕಾಡಿನಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿರುವ ಹುಲಿಯೊಂದು ನಾಡಿಗೆ ಬಂದುಬಿಟ್ಟರೆ? ಆಗಬಹುದಾದ ಅನಾಹುತಗಳೇನು? ಆ ಹುಲಿ ಇಲ್ಲಿ , ನಾಡಿನಲ್ಲಿ ಬದುಕಲು ಸಾಧ್ಯವೇ? ಎನ್ನುವ ಒಂದು ಪ್ರಶ್ನೆಯನ್ನು ಎತ್ತುತ್ತಾ, ಸುರೇಶಾ ಎನ್ನುವ ಯುವಕನೊಬ್ಬನ ಜೀವನದ ರೋಚಕವಾದ ಕಥೆಯನ್ನ ಹೇಳುತ್ತಾ ಸಾಗುತ್ತದೆ.

ಇದೇ ವಾರ ತೆರೆಗೆ ಬರಲಿರುವ ಹುಲಿರಾಯ ಪ್ರೇಕ್ಷನಿಗೆ ಇಷ್ಟವಾಗುವ, ಈ ಚಿತ್ರ ಕನ್ನಡ ಚಿತ್ರರಂಗಕ್ಕೆ ಒಂದು ಒಳ್ಳೆಯ ಕೊಡುಗೆಯಾಗುವ ಸಾಧ್ಯತೆಗಳು ಕಾಣುತ್ತಿವೆ.

 


Viewing all articles
Browse latest Browse all 80395

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>