Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80395

ಪ್ರಜ್ಞೆ ತಪ್ಪಿ ಚಲಿಸುತ್ತಿದ್ದ ರೈಲಿನಿಂದ ಹೊರಬಿದ್ದ ಚಾಲಕ

$
0
0

ಕೊಲ್ಕತ್ತಾ: ಅನಾರೋಗ್ಯದಿಂದ ಪ್ರಜ್ಞೆ ತಪ್ಪಿ ಚಲಿಸುತ್ತಿದ್ದ ರೈಲಿನಿಂದ ಚಾಲಕರೊಬ್ಬರು ಹೊರಗಡೆ ಬಿದ್ದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಡ್ರೈವರ್ ಕೆಳಕ್ಕೆ ಬಿದ್ದ ತಕ್ಷಣ ರೈಲು ನಿಲುಗಡೆಯಾಗಿದೆ. ರೈಲು ಚಾಲನೆ ಮಾಡಲು ಚಾಲಕ ಅಸಮರ್ಥನಾದ ಸಂದರ್ಭದಲ್ಲಿ ತಾನಾಗೇ ಆನ್ ಆಗುವ “ಡೆಡ್ ಮ್ಯಾನ್ ಸ್ವಿಚ್” ಮೇಲಿಂದ ಚಾಲಕ ಕೈ ತೆಗೆದಿದ್ದರಿಂದ ರೈಲು ತಾನಾಗೇ ನಿಲುಗಡೆಯಾಗಿದೆ ಎಂದು ತಿಳಿದು ಬಂದಿದೆ.

ಕೊಲ್ಕತ್ತಾದಿಂದ ಸುಮಾರು 130 ಕಿ.ಮೀ ದೂರದಲ್ಲಿರುವ ದೈನ್ಹಾಟ್ ರೈಲ್ವೇ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಬುದ್ರ್ವನ್ ಜಿಲ್ಲೆಯ ಹೌರಾ ನಿಲ್ದಾಣದಿಂದ ಕಟ್ವಾನ್ ನಗರಕ್ಕೆ ರೈಲು ಪ್ರಯಾಣಿಸುತ್ತಿತ್ತು. ರೈಲಿನಿಂದ ಬಿದ್ದ ಚಾಲಕನನ್ನು ಹಾಲ್ದರ್ ಎಂದು ಗುರುತಿಸಲಾಗಿದ್ದು, ಚಾಲಕನ ತಲೆಗೆ ತೀವ್ರವಾದ ಗಾಯವಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೂರ್ವ ರೈಲ್ವೆಯ ಅಧಿಕಾರಿ ಆರ್. ಮಹಾಪಾತ್ರ ತಿಳಿಸಿದ್ದಾರೆ.

ಹಾಲ್ದರ್ ಅವರು ರೈಲ್ವೇ ಅಧಿಕಾರಿಗಳಿಗೆ ನೀಡಿರುವ ಹೇಳಿಕೆ ಪ್ರಕಾರ ತಾನು ಅನಾರೋಗ್ಯಕ್ಕೆ ಒಳಗಾಗಿ, ಇದ್ದಕ್ಕಿದ್ದ ಹಾಗೇ ತಲೆಸುತ್ತಿ ಬಂತು ಎಂದು ಹೇಳಿದ್ದಾರೆ. ಚಾಲಕ ಕೆಳಕ್ಕೆ ಬಿದ್ದ ಸಂದರ್ಭದಲ್ಲಿ ರೈಲು ಟ್ರ್ಯಾಕ್‍ಗಳನ್ನು ಬದಲಿಸುತ್ತಿತ್ತು. ಮಧ್ಯಾಹ್ನದ ವೇಳೆಗೆ ಚಾಲಕ ರೈಲಿನಿಂದ ಬೀಳೋದನ್ನ ಪ್ರತ್ಯಕ್ಷದರ್ಶಿಗಳು ಗಮನಿಸಿದ್ದರು. ಕೂಡಲೇ ಸ್ಥಳದಲ್ಲಿ ಜನಗಂಗುಳಿಯೇ ನೆರೆದಿತ್ತು. ನಂತರ ರೈಲ್ವೆ ಗಾರ್ಡ್ ಸ್ಥಳಕ್ಕೆ ದೌಡಾಯಿಸಿ ಚಾಲಕನನ್ನು ಆಸ್ಪತ್ರೆಗೆ ಕೊಂಡೊಯ್ಯುವಂತೆ ನೋಡಿಕೊಂಡ್ರು. ನಂತರ ಹೊಸ ಚಾಲಕ ಹಾಗೂ ಗಾರ್ಡ್‍ನನ್ನು ಕರೆಸಿದ್ದು, ಮಧ್ಯಾಹ್ನ 12.46 ಕ್ಕೆ ರೈಲು ಪ್ರಯಾಣ ಆರಂಭಿಸಿತು. ಘಟನೆಯಿಂದಾಗಿ ಇನ್ನೂ ಎರಡು ರೈಲುಗಳ ಸಂಚಾರ ತಡವಾಗಿತ್ತು.

ರೈಲ್ವೆ ಅಧಿಕಾರಗಳು ಚಾಲಕನ ಆರೋಗ್ಯ ಸ್ಥಿತಿಯನ್ನ ಪರಿಶೀಲಿಸಲಿದ್ದಾರೆ. ಹೌರಾದಲ್ಲಿ ಚಾಲಕ ರೈಲನ್ನು ಏರಿದಾಗ ಚೆನ್ನಾಗಿಯೇ ಇದ್ದರು ಎಂದು ಮಹಾಪಾತ್ರ ತಿಳಿಸಿದ್ದಾರೆ.


Viewing all articles
Browse latest Browse all 80395

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>