ಮೈಸೂರು: ಪಬ್ಲಿಕ್ ಟಿವಿ ವರದಿಗೆ ಎಚ್ಚೆತ್ತ ಮೈಸೂರು ಪೊಲೀಸ್ ಅಧಿಕಾರಿಗಳು, ಸಚಿವರ ಮಗನನ್ನ ಹೆಗಲ ಮೇಲೆ ಕೂರಿಸಿ ಪಾರ್ಟಿ ಮಾಡಿದ್ದ ಪೊಲೀಸರನ್ನ ಅಮಾನತು ಮಾಡಿದೆ.
ಸಚಿವ ಮಹದೇವಪ್ಪ ಮಗ ಸುನೀಲ್ ಬೋಸ್ನನ್ನ ಹೆಗಲ ಮೇಲೆ ಹೊತ್ತುಕೊಂಡಿದ್ದವರನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಕರೆ ಅಮಾನತು ಮಾಡಿದ್ದಾರೆ. ಟಿ.ನರಸೀಪುರ ಎಸ್ಐ ಶಿವಣ್ಣ ಅಮಾನತಾಗಿದ್ದು, ಎಸಿಬಿ ಇನ್ಸ್ಪೆಕ್ಟರ್ ರಾಘವೇಂದ್ರ ಗೌಡಗೆ ವರ್ಗಾವಣೆ ಮಾಡಲಾಗಿದೆ.
ಸಚಿವರ ಪುತ್ರನ ಅಕ್ರಮಗಳಿಗೆ ಪೊಲೀಸರು ಸಾಥ್ ನೀಡಿದ್ದರು ಅಂತ ಹೇಳಲಾಗಿತ್ತು. ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾದ ಬಳಿಕ ತನಿಖೆ ನಡೆಸಿ ಅಭಿನವ್ ಕರೆ ಅಮಾನತು ಆದೇಶ ನೀಡಿದ್ದಾರೆ.
The post ಮೈಸೂರು: ಸಚಿವರ ಮಗನನ್ನ ಹೆಗಲ ಮೇಲೆ ಕೂರಿಸಿ ಪಾರ್ಟಿ ಮಾಡಿದ್ದ ಎಸ್ಐ ಸಸ್ಪೆಂಡ್ appeared first on Kannada Public tv.