Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80042

ಕೇಂದ್ರದ ವಿರುದ್ಧ ಹೋರಾಟಕ್ಕೆ ಕೈ ಸಿದ್ಧತೆ; ಸಮಿತಿಯಲ್ಲಿ ರಾಜ್ಯದ ಇಬ್ಬರಿಗೆ ಸ್ಥಾನ

$
0
0

ಬೆಂಗಳೂರು: ನೋಟು ಬ್ಯಾನ್ ಮಾಡಿರುವ ಮೋದಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ಕಾಂಗ್ರೆಸ್ ಸಮಿತಿ ರಚನೆ ಮಾಡಿದ್ದು, ಇಬ್ಬರು ಕನ್ನಡಿಗರಿಗೆ ಸಮಿತಿಯಲ್ಲಿ ಸ್ಥಾನ ಸಿಕ್ಕಿದೆ.

500, 1 ಸಾವಿರ ರೂ. ಮುಖಬೆಲೆಯ ನೋಟು ನಿಷೇಧಗೊಂಡ ಬಳಿಕ ಜನ ಸಮಾನ್ಯರಿಗೆ ಆಗುತ್ತಿರುವ ಕಷ್ಟವನ್ನು ತೋರಿಸಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಲು ಹೈಕಮಾಂಡ್ ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಅಧ್ಯಕ್ಷತೆಯ ಸಮಿತಿಯನ್ನು ರಚನೆ ಮಾಡಿದೆ.

ಈ ಸಮಿತಿಯಲ್ಲಿ ರಾಜ್ಯದ ಆಸ್ಕರ್ ಫರ್ನಾಂಡೀಸ್, ಡಿ.ಕೆ ಶಿವಕುಮಾರ್ ಸ್ಥಾನ ಪಡೆದಿದ್ದಾರೆ. ಮಾಣಿಕ್ ಟಾಗೋರ್, ಜಿತೇಂದ್ರ ಸಿಂಗ್, ದೀಪೇಂದ್ರ ಹೂಡ ಈ ಸಮಿತಿಯಲ್ಲಿ ಸ್ಥಾನ ಪಡೆದಿದ್ದು, ಎರಡು ಹಂತಗಳಲ್ಲಿ ಸಮಿತಿ ದೇಶದ್ಯಾಂತ ಚಳವಳಿ ರೂಪಿಸಲು ಮುಂದಾಗಿದೆ.

ಜನವರಿ 5 ರಿಂದ ಮೊದಲ ಹಂತ ನಡೆದರೆ, ಜನವರಿ 8ರಂದು ಎರಡನೇ ಹಂತದ ಹೋರಾಟವನ್ನು ಕಾಂಗ್ರೆಸ್ ನಡೆಸಲಿದೆ.


Viewing all articles
Browse latest Browse all 80042


<script src="https://jsc.adskeeper.com/r/s/rssing.com.1596347.js" async> </script>