ಬೆಂಗಳೂರು: ನೋಟು ಬ್ಯಾನ್ ಮಾಡಿರುವ ಮೋದಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ಕಾಂಗ್ರೆಸ್ ಸಮಿತಿ ರಚನೆ ಮಾಡಿದ್ದು, ಇಬ್ಬರು ಕನ್ನಡಿಗರಿಗೆ ಸಮಿತಿಯಲ್ಲಿ ಸ್ಥಾನ ಸಿಕ್ಕಿದೆ.
500, 1 ಸಾವಿರ ರೂ. ಮುಖಬೆಲೆಯ ನೋಟು ನಿಷೇಧಗೊಂಡ ಬಳಿಕ ಜನ ಸಮಾನ್ಯರಿಗೆ ಆಗುತ್ತಿರುವ ಕಷ್ಟವನ್ನು ತೋರಿಸಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಲು ಹೈಕಮಾಂಡ್ ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಅಧ್ಯಕ್ಷತೆಯ ಸಮಿತಿಯನ್ನು ರಚನೆ ಮಾಡಿದೆ.
ಈ ಸಮಿತಿಯಲ್ಲಿ ರಾಜ್ಯದ ಆಸ್ಕರ್ ಫರ್ನಾಂಡೀಸ್, ಡಿ.ಕೆ ಶಿವಕುಮಾರ್ ಸ್ಥಾನ ಪಡೆದಿದ್ದಾರೆ. ಮಾಣಿಕ್ ಟಾಗೋರ್, ಜಿತೇಂದ್ರ ಸಿಂಗ್, ದೀಪೇಂದ್ರ ಹೂಡ ಈ ಸಮಿತಿಯಲ್ಲಿ ಸ್ಥಾನ ಪಡೆದಿದ್ದು, ಎರಡು ಹಂತಗಳಲ್ಲಿ ಸಮಿತಿ ದೇಶದ್ಯಾಂತ ಚಳವಳಿ ರೂಪಿಸಲು ಮುಂದಾಗಿದೆ.
ಜನವರಿ 5 ರಿಂದ ಮೊದಲ ಹಂತ ನಡೆದರೆ, ಜನವರಿ 8ರಂದು ಎರಡನೇ ಹಂತದ ಹೋರಾಟವನ್ನು ಕಾಂಗ್ರೆಸ್ ನಡೆಸಲಿದೆ.