Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80042

ಡೊನೇಷನ್‍ಗೆ ತೆರಿಗೆ ಕಟ್ಟದ್ದಕ್ಕೆ ನವೋದಯ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಎಸ್.ಆರ್.ರೆಡ್ಡಿ ವಿರುದ್ಧ ಕೇಸ್

$
0
0

ರಾಯಚೂರು: 413 ಕೋಟಿ ರೂಪಾಯಿಗೆ ತೆರಿಗೆ ವಂಚಿಸಿದ ಆರೋಪದಡಿ ರಾಯಚೂರಿನ ಪ್ರತಿಷ್ಠಿತ ನವೋದಯ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಎಸ್. ರಾಜೇಂದರ್ ರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿದೆ.

2008 ರಿಂದ 2016ರ ವರೆಗೆ ನವೋದಯ ಮೆಡಿಕಲ್ ಕಾಲೇಜ್‍ಗೆ ವಿದ್ಯಾರ್ಥಿಗಳಿಂದ ತೆಗೆದುಕೊಂಡ 413 ಕೋಟಿ ರೂಪಾಯಿ ಡೊನೆಷನ್‍ಗೆ ತೆರಿಗೆ ಪಾವತಿಸಿದ ಕಾರಣ ತೆಲಂಗಾಣದ ನಾರಾಯಣಪೇಟೆಯ ಟಿಡಿಪಿ ಶಾಸಕರು ಆಗಿರುವ ರೆಡ್ಡಿ ಮೇಲೆ ಧಾರವಾಡ ವಲಯ ಆದಾಯ ತೆರಿಗೆ ಇಲಾಖೆ ಆಯುಕ್ತರು ಪ್ರಕರಣ ದಾಖಲಿಸಿದ್ದಾರೆ.

2015ರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ಎಸ್.ಆರ್.ರೆಡ್ಡಿ ಕಚೇರಿಯಲ್ಲಿ 19 ಕೋಟಿ ರೂ. ಹಣ ಸಿಕ್ಕಿತ್ತು. ಚಾರ್ಟರ್ಡ್ ಅಕೌಂಟೆಂಟ್ ಮೂಲಕ ಅದು ಡೊನೆಷನ್ ಹಣ ಅಂತ ರೆಡ್ಡಿ ಇಲಾಖೆಗೆ ಉತ್ತರ ನೀಡಿದ್ದರು. ಇಲಾಖೆ 2008ರಿಂದ ಪರಿಶೀಲಿಸಿದಾಗ 413 ಕೋಟಿ ರೂಪಾಯಿ ತೆರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

2012-13ರ ಆದಾಯ ತೆರಿಗೆಯ ಟಿಡಿಎಸ್ ಪಾವತಿಯಲ್ಲಿ 84 ಲಕ್ಷ ರೂಪಾಯಿ ವಂಚನೆ ಮಾಡಿರುವ ಆರೋಪದಲ್ಲಿ ಐಟಿ ಆಯುಕ್ತರು ಎರಡನೇ ದೂರು ದಾಖಲಿಸಿದ್ದಾರೆ. ದೂರಿನ ಮೇರೆಗೆ ಎಸ್.ಆರ್.ರೆಡ್ಡಿ ಹಾಗೂ ನವೋದಯ ಶಿಕ್ಷಣ ಸಂಸ್ಥೆಗೆ ನೋಟಿಸ್ ಜಾರಿಯಾಗಿದೆ.


Viewing all articles
Browse latest Browse all 80042


<script src="https://jsc.adskeeper.com/r/s/rssing.com.1596347.js" async> </script>