Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80375

ಸಾಕಲು ಹಸು ಸಿಕ್ಕಿದರೆ ಮಂಡ್ಯದ ಈ ಕುಟುಂಬಕ್ಕೆ ಸಿಗುತ್ತೆ ‘ಬೆಳಕು’

$
0
0

ಮಂಡ್ಯ: ಕಿತ್ತು ತಿನ್ನುವ ಬಡತನದ ನಡುವೆ ತನ್ನಿಬ್ಬರು ಬುದ್ಧಿಮಾಂದ್ಯ ಮಕ್ಕಳನ್ನ ಪ್ರೀತಿಯಿಂದ ಆರೈಕೆ ಮಾಡುತ್ತಿರುವ ತಾಯಿಯ ಹೆಸರು ಜಾನಕಿ. ಕಳೆದ ಇಪ್ಪತ್ತು ವರ್ಷಗಳ ಹಿಂದೆ ದಾಸಪ್ಪ ಎಂಬುವವರ ಜೊತೆ ಮದುವೆಯಾಯ್ತು. ಇವರ ಊರು ಮಂಡ್ಯ. ಜಾನಕಿ ಮತ್ತು ದಾಸಪ್ಪ ಅವರಿಗೆ ಮೂವರು ಮಕ್ಕಳು. ಅವರಲ್ಲಿ ಒಬ್ಬಳು ಆಕ್ಸಿಡೆಂಟ್‍ನಲ್ಲಿ ಮೃತಪಟ್ಟಿದ್ದಾಳೆ. ಇನ್ನುಳಿದ ಇಬ್ಬರು ಮಕ್ಕಳೂ ಬುದ್ಧಿ ಮಾಂದ್ಯರು. ಅವರಿಗೆ ಇಹಲೋಕದ ಪರಿವೇ ಇಲ್ಲ. ತಾಯಿ ಜಾನಕಿ ಜೊತೆಗಿದ್ದುಕೊಂಡೇ ಅವರ ಆರೈಕೆ ಮಾಡಬೇಕು. ಇಬ್ಬರು ಬುದ್ಧಿ ಮಾಂದ್ಯ ಮಕ್ಕಳು ತನಗೆ ಬೇಡ ಎಂದು ಹೃದಯ ಹೀನ ತಂದೆ ದಾಸಪ್ಪ ಮನೆಯನ್ನೇ ತೊರೆದಿದ್ದಾನೆ.

belaku-mnd-1

ಜಾನಕಿ ಮತ್ತು ಮಕ್ಕಳಿಗೆ ವಾಸ ಮಾಡಲು ಮುರುಕಲು ಮನೆ ಬಿಟ್ರೆ ಬೇರೆ ಏನೂ ಆಸರೆಯಿಲ್ಲ. ಇಬ್ಬರು ಮಕ್ಕಳನ್ನ ಮನೆಯಲ್ಲೇ ಬಿಟ್ಟು ಕೂಲಿ ಮಾಡಿಕೊಂಡು ಬರೋಣ ಅಂದ್ರೆ ತಾಯಿ ಜಾನಕಿಗೆ ಅದೂ ಕೂಡ ಸಾಧ್ಯವಿಲ್ಲ. ಮನೆಯಲ್ಲಿ ಊಟಕ್ಕೂ ಸಂಕಷ್ಟ ಶುರುವಾಗಿದೆ. ಯಾರಾದ್ರೂ ಒಂದು ಹಸುವನ್ನು ಕೊಡಿಸಿದ್ರೆ ಹಸುವಿನ ಹಾಲನ್ನು ಮಾರಿ ಹೇಗಾದ್ರೂ ಜೀವನ ಸಾಗಿಸುತ್ತೇನೆ ಎನ್ನುತ್ತಾರೆ ಜಾನಕಿ.

ಕಿತ್ತು ತಿನ್ನುವ ಬಡತನದ ನಡುವೆ ಜಾನಕಿ ಮಕ್ಕಳನ್ನ ಸಾಕುತ್ತಿದ್ದಾರೆ. ಆದರೆ ಮುಂದೆ ಜೀವನ ನಡೆಯಲು ಏನಾದ್ರೂ ಕೆಲಸ ಮಾಡಲೇ ಬೇಕು. ಅದಕ್ಕಾಗಿ ಹಸು ಸಾಕಾಣಿಕೆನಾದ್ರೂ ಮಾಡೋಣ ಅನ್ನೋದು ಜಾನಕಿ ಆಸೆ. ಬಡತನದಲ್ಲಿ ಬೇಯುತ್ತಿರುವ ಈ ಕುಟುಂಬಕ್ಕೆ ಸಹಾಯ ದೊರಕಿದ್ರೆ ಒಂದು ಕುಟುಂಬಕ್ಕೆ ಬೆಳಕು ಸಿಕ್ಕಂತಾಗುತ್ತದೆ.

 


Viewing all articles
Browse latest Browse all 80375

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>