ನವದೆಹಲಿ: ಕಪ್ಪು ಹಣವನ್ನು ತಡೆಗಟ್ಟುವ ಸಲುವಾಗಿ ಭಾರತದಲ್ಲಿ ಇನ್ನು ಮುಂದೆ 500 ರೂ ಮತ್ತು 1 ಸಾವಿರ ರೂ. ಚಲಾವಣೆಯನ್ನು ನಿಷೇಧಿಸಲಾಗಿದೆ.
ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದಲ್ಲಿ ವ್ಯಾಪಕವಾಗಿ ಕಪ್ಪು ಹಣ ಚಲಾವಣೆ ಯಾಗುತ್ತಿದೆ. ಗಡಿಯಿಂದ ಹಣಗಳು ಉತ್ಪಾದನೆಯಾಗಿ ದೇಶದ ಒಳಗಡೆ ನುಸುಳುತ್ತಿವೆ. ಈ ಕಪ್ಪು ಹಣ ತಡೆಯುವ ನಿಟ್ಟಿನಲ್ಲಿ 1 ಸಾವಿರ ರೂ. ಮತ್ತು 500 ರೂ. ನೋಟುಗಳ ಚಲಾವಣೆಯಿಂದ ಇಂದು ಮಧ್ಯರಾತ್ರಿಯಿಂದಲೇ ನಿಷೇಧಿಸಲಾಗುತ್ತಿದೆ ಎಂದು ಹೇಳಿದರು.
50 ದಿನದ ಒಳಗಡೆ ಈ ಹಣಗಳನ್ನು ಬ್ಯಾಂಕ್ಗಳಲ್ಲಿ, ಪೋಸ್ಟ್ ಆಫೀಸ್ಗಳಲ್ಲಿ ಬದಲಿಸಬೇಕೆಂದು ಪ್ರಧಾನಿ ಮೋದಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮೋದಿ ಭಾಷಣದ ಹೈಲೈಟ್ಸ್
ಆರ್ಥಿಕಾಭಿವೃದ್ಧಿಯಲ್ಲಿ ಭಾರತ ತುಂಬಾ ವೇಗವಾಗಿ ಮುನ್ನುಗ್ಗುತ್ತಿದೆ. ಆದರೆ ಜಾಗತಿಕ ಭ್ರಷ್ಟಾಚಾರ ಪಟ್ಟಿಯಲ್ಲೂ ಭಾರತ ಮೇಲಿದೆ. ಸರ್ಕಾರದ ಉದ್ದೇಶ ಎಲ್ಲರ ಜೊತೆಗೂ ಎಲ್ಲರ ಅಭಿವೃದ್ಧಿ ಆಗಿದೆ. 125 ಕೋಟಿ ಜನರು ಇರುವ ಭಾರತದ ವಿಶ್ವದ ಆರ್ಥಿಕತೆಯಲ್ಲಿ ಭಾರತ ಶೈನಿಂಗ್ ಆಗುತ್ತಿದೆ.
ಬಡತನದ ವಿರುದ್ಧ ನಮ್ಮ ಸರ್ಕಾರ ಹೋರಾಡುತ್ತದೆ. ಆರ್ಥಿಕತೆಯಲ್ಲಿ ಬಡವರು ಒಳಗೊಳ್ಳಬೇಕು, ಬಡವರು ಆರ್ಥಿಕವಾಗಿ ಸಬಲೀಕರಣಗೊಳ್ಳಬೇಕು. ಬಡವರ ಉದ್ಧಾರಕ್ಕಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ
ಗಡಿಯಲ್ಲಿ ನಮ್ಮ ಶತ್ರುಗಳು ಕಳೆದ 4 ವರ್ಷಗಳಿಂದ ವ್ಯವಹಾರ ಮಾಡುತ್ತಿದ್ದು, ಭ್ರಷ್ಟಾಚಾರ, ಕಪ್ಪುಹಣ, ಭಯೋತ್ಪಾದನೆಯಿಂದ ಭಾರತ ಮೇಲೆ ಪರಿಣಾಮ ಬೀರಿದೆ.
ಇಂದು ಮಧ್ಯರಾತ್ರಿಯಿಂದಲೇ 500 ಹಾಗೂ 1000 ರೂ.ನೋಟು ಗಳ ಚಲಾವಣೆಯನ್ನು ನಿಷೇಧಿಸಲಾಗಿದ್ದು, ನವಂಬರ್ 10ರಿಂದ ಡಿಸೆಂಬರ್ 30ರೊಳಗೆ ಬ್ಯಾಂಕ್ ಹಾಗೂ ಪೋಸ್ಟ್ ಆಫೀಸಿನಲ್ಲಿ ಹಳೇ ನೋಟು ಕೊಟ್ಟು ಹೊಸ ನೋಟು ಪಡೆದುಕೊಳ್ಳಬೇಕು.
ನೋಟು ಬದಲಾವಣೆಗೆ 50 ದಿನಗಳ ಕಾಲಾವಕಾಶವಿದ್ದು, ಪಾನ್ ಕಾರ್ಡ್, ಆಧಾರ್ ಕಾರ್ಡ್ ತೋರಿಸಿ ನೋಟ್ಗಳನ್ನು ಬದಲಾವಣೆ ಮಾಡಬೇಕು. ಪ್ರತಿದಿನ 20 ಸಾವಿರ ಮಾತ್ರ ಹಣ ಬದಲಾಯಿಸಿಕೊಳ್ಳಬಹುದು.
ಒಂದು ದಿನ ಎಟಿಎಂನಿಂದ 4 ಸಾವಿರ ರೂ. ಮಾತ್ರ ಪಡೆದುಕೊಳ್ಳಲು ಅವಕಾಶ. ನವೆಂಬರ್ 9 ಹಾಗೂ 10ರಂದು ಎಟಿಎಂ ಬಂದ್, ನಾಳೆ ಎಲ್ಲಾ ಬ್ಯಾಂಕ್ಗಳು ಬಂದ್ ಮಾಡಲಾಗುತ್ತಿದ್ದು. ಭ್ರಷ್ಟಾಚಾರ, ನಕಲಿ ನೋಟು, ಭಯೋತ್ಪಾದನೆ ದೇಶದ ಆರ್ಥಿಕತೆಗೆ ಹಾನಿ ಮಾಡುತ್ತಿದೆ.
ಆಸ್ಪತ್ರೆ, ಮೆಡಿಕಲ್ ಪೆಟ್ರೋಲ್ ಬಂದ್, ಬಸ್, ಏರ್ಪೋರ್ಟ್, ರೈಲ್ವೇ ಬುಕ್ಕೀಂಗ್, ಚಿತಾಗಾರದಲ್ಲಿ ನವಂಬರ್ 11ರ ತನಕ ನೋಟು ಕೊಡಬಹುದಾಗಿದೆ.
ಆನ್ಲೈನ್ ಹಣ ವರ್ಗಾವಣೆಗೆ ಯಾವುದೇ ಸಮಸ್ಯೆ ಇಲ್ಲ. ಇನ್ಮುಂದೆ 1 ಸಾವಿರ ರೂಪಾಯಿ ನೋಟು ಚಲಾವಣೆ ಇರಲ್ಲ. 500, 2000 ಸಾವಿರ ಮುಖಬೆಲೆಯ ಹೊಸ ನೋಟುಗಳನ್ನು ಜಾರಿ ತರಲಾಗುತ್ತೆ. ಚೆಕ್, ಡಿಡಿ, ಕ್ರೆಡಿಟ್, ಡಿಬಿಟ್ ಕಾರ್ಡ್ ಮೂಲಕ ವ್ಯವಹಾರ ಮಾಡಬಹುದು.
2 ಸಾವಿರ ರೂಪಾಯಿಯ ಹೊಸ ನೋಟು ಚಲಾವಣೆಗೆ ಬರಲಿದೆ.