ದೆಹಲಿ: ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್ಯು) ವಿದ್ಯಾರ್ಥಿಯ ಬಗ್ಗೆ ಇನ್ನೂ ಸುಳಿವು ಸಿಗದ ಹಿನ್ನಲೆಯಲ್ಲಿ ಆಕ್ರೋಶಗೊಂಡ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ತನ್ನ `ಬಿಹಾರ್ ಟು ತಿಹಾರ್’ ಎಂಬ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ, ನಾಪತ್ತೆಯಾದ ವಿದ್ಯಾರ್ಥಿಯ ಹುಡುಕಾಟ ಮಾಡಲು ವಿಫಲರಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕನ್ಹಯ್ಯ. ಜೆಎನ್ಯು ವಿಶ್ವವಿದ್ಯಾಲಯದಲ್ಲಿ ಬಳಸಿದ ಕಾಂಡೋಮ್ಗಳೆಷ್ಟು ಎಂದು ಲೆಕ್ಕ ಹಾಕಿದ್ರು. ಆದ್ರೆ ಅವರ ಬುದ್ಧಿವಂತಿಕೆ ಬಳಸಿ ನಾಪತ್ತೆಯಾದ ವಿದ್ಯಾರ್ಥಿಯನ್ನ ಹುಡುಕೋಕೆ ಆಗಲ್ವಾ ಎಂದರು.
ಫೆಬ್ರವರಿಯಲ್ಲಿ ಜೆಎನ್ಯುನಲ್ಲಿ ನಡೆದ ಪ್ರತಿಭಟನೆ ವೇಳೆ ಬಿಜೆಪಿ ಶಾಸಕ ಜ್ಞಾನದೇವ್ ಅಹೂಜಾ, ಜೆಎನ್ಯುನಲ್ಲಿ ಪ್ರತಿದಿನ 3 ಸಾವಿರ ಬೀರ್ ಬಾಟಲ್ಗಳು, 2 ಸಾವಿರ ಭಾರತೀಯ ಮದ್ಯದ ಬಾಟಲಿಗಳು, 10 ಸಾವಿರ ಸಿಗರೇಟ್ ಪ್ಯಾಕ್, 4 ಸಾವಿರ ಬೀಡಿ, 50 ಸಾವಿರ ಮೂಳೆ, 2 ಸಾವಿರ ಚಿಪ್ಸ್ ಪ್ಯಾಕೆಟ್ಗಳು 3 ಸಾವಿರ ಬಳಸಿ ಬಿಸಾಡಲಾದ ಕಾಂಡೋಮ್ಗಳು ಹಾಗೂ 500 ಅಬಾರ್ಷನ್ ಇಂಜೆಕ್ಷನ್ಗಳು ಸಿಗುತ್ತವೆ ಅಂತ ಹೇಳಿದ್ರು.
ಅಕ್ಟೋಬರ್ 14ರಂದು ಜೆಎನ್ಯು ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆದಿದ್ದು, ಈ ಸಂದರ್ಭದಲ್ಲಿ ನಜೀಮ್ ಅಹಮದ್ ನಾಪತ್ತೆಯಾಗಿದ್ದನು. ಈತನ ಸುಳಿವು ಈವರೆಗೂ ಸಿಗದಿರುವುದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.