ಚಿಕ್ಕಮಗಳೂರು: ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಹಾಗೂ ತೇಜಸ್ ಗೌಡನ ಕಿಡ್ನಾಪ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ಮೂರನೇ ಆರೋಪಿಯಾಗಿರೋ ಚಿಟ್ಫಂಡ್ ಮಾಲೀಕ ಕಲ್ಮನೆ ನಟರಾಜ್ ಪ್ರಕರಣದ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆಗೆ ತೇಜಸ್ ಗೌಡನೇ ಕಾರಣವೇ ಹೊರತು ಮತ್ತ್ಯಾರೂ ಅಲ್ಲ ಎಂದಿದ್ದಾರೆ.
ಅಸಲಿಗೆ ತೇಜಸ್ ಗೌಡ ಕಿಡ್ನಾಪ್ ಆಗಿಯೇ ಇಲ್ಲ. ಚಿಕ್ಕಮಗಳೂರಿಗೆ ಟೂರ್ ಬಂದಿದ್ದ ನವೀನ್ ಶೆಟ್ಟಿ ಹುಡುಗರೊಂದಿಗೆ ಬೆಂಗಳೂರಿಗೆ ಹೋದ ತೇಜಸ್ ಗೌಡ, ನವೀನ್ ಶೆಟ್ಟಿ ಮನೆಯಲ್ಲೇ ಕೂತು ಕಲ್ಲಪ್ಪ ಹಂಡಿಭಾಗ್ ಮೇಲೆ ಕೆಟ್ಟ ಹೆಸರು ತರುಲು ಸಂಚು ರೂಪಿಸಿದ್ದ ಎಂದಿದ್ದಾರೆ.
ತೇಜಸ್ ಗೌಡನ ಕ್ರಿಕೆಟ್ ಬೆಟ್ಟಿಂಗ್ಗೆ ಕಲ್ಲಪ್ಪ ಹಂಡಿಭಾಗ್ ಸಿಂಹಸ್ವಪ್ನವಾಗಿದ್ರಿಂದ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಪವನ್ ಮೂಲಕ ಕಲ್ಲಪ್ಪ ಹಂಡಿಭಾಗ್ಗೆ ಹಣ ಕೊಡಿಸಿ ಅದನ್ನ ರೆಕಾರ್ಡ್ ಮಾಡಿಕೊಂಡಿದ್ದಾನೆ ಅಂತ ಹೇಳಿದ್ದಾರೆ.
ಇದೆಲ್ಲಾ ದೂರುದಾರ ತೇಜಸ್ ಗೌಡನದ್ದೇ ಕುತಂತ್ರ. ತೇಜಸ್ ಒಂದೇ ಬಾಣದಲ್ಲಿ ಎರಡು ಹಕ್ಕಿ ಹೊಡಿದಿದ್ದಾನೆ. ಕಲ್ಲಪ್ಪ ಸಾವಿಗೆ ದೂರುದಾರ ತೇಜಸ್ ಗೌಡನೇ ಕಾರಣ ಎಂದು ಪ್ರಕರಣದ ಎರಡು ಮತ್ತು ಮೂರನೇ ಆರೋಪಿಗಳಾದ ನವೀನ್ ಶೆಟ್ಟಿ ಹಾಗೂ ಕಲ್ಮನೆ ನಟರಾಜ್ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ.