Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80395

ಜೂನ್‌ 8 ರಂದು ಪ್ರಮಾಣ ವಚನ –ಮೋದಿಗೂ ಸಂಖ್ಯೆ 8ಕ್ಕೂ ಏನು ಸಂಬಂಧ?

$
0
0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಜೂನ್‌ 8 ರ ರಾತ್ರಿ 8 ಗಂಟೆಯ ವೇಳೆಗೆ ಮೂರನೇ ಬಾರಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.

ಪ್ರಧಾನಿ ಮೋದಿ ಮತ್ತು ಸಂಖ್ಯೆ 8ಕ್ಕೆ (Number 8) ಅವಿನಾಭಾವ ಸಂಬಂಧವಿದೆ. ಬಹುತೇಕ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ, ಕಾರ್ಯಕ್ರಮಗಳು 8 ರಂದೇ ಆರಂಭವಾಗಿತ್ತು.

ಸಂಖ್ಯಾಶಾಸ್ತ್ರದಲ್ಲಿ 8ನೇ ಸಂಖ್ಯೆಯು ಶನಿ ಗ್ರಹವನ್ನು ಸೂಚಿಸಿದರೂ ಎಂಟನೇ ಸಂಖ್ಯೆಯು ರಾಜಯೋಗದ ಸಂಕೇತವಾಗಿದೆ. ವೈದಿಕ ಜ್ಯೋತಿಷ್ಯದಲ್ಲಿ ರಾಜ ರೀತಿಯ ಹುದ್ದೆಗಳಿಗೆ ಸಂಬಂಧಿಸಿದಂತೆ ಒಂದು ರೀತಿಯ ಮಂಗಳಕರ ಯೋಗ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ನ್ಯಾಯದಾತ ಎಂಬುದಾಗಿ ಪರಿಗಣಿಸಲಾಗುತ್ತದೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಸಾವನ್ನಪ್ಪಿದ 9 ಚಾರಣಿಗರ ಮೃತದೇಹಗಳು ಚಾರ್ಟರ್ ಫ್ಲೈಟ್ ಮೂಲಕ ಬೆಂಗಳೂರಿಗೆ: ಕೃಷ್ಣಬೈರೇಗೌಡ

2014ರ ಮೋದಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ
2014ರ ಮೋದಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ

ಸಂಖ್ಯಾಶಾಸ್ತ್ರದ ಪ್ರಕಾರ ಮೂಲಾಂಕ 8 ಆಗಿರುವಂತಹ ಜನರು ಸಾಕಷ್ಟು ಪರಿಶ್ರಮದಿಂದ ಕೆಲಸ ಮಾಡುತ್ತಾರೆ ಹಾಗೂ ಶನಿ ಕೂಡ ನ್ಯಾಯದ ಪ್ರಕಾರವಾಗಿ ಅವರ ಪರಿಶ್ರಮಕ್ಕೆ ತಕ್ಕಂತಹ ಪ್ರತಿಫಲವನ್ನು ಕರುಣಿಸುತ್ತಾನೆ. ಶನಿ ಉಚ್ಚಸ್ಥಾನದಲ್ಲಿದ್ದವರಿಗೆ ಯಶಸ್ಸು ತಡವಾಗಿ ಲಭಿಸುತ್ತದೆ. ಆದರೆ ಸಿಗುವ ಯಶಸ್ಸು ಬಹಳ ಶ್ರೇಷ್ಠ ಮಟ್ಟದಾಗಿರುತ್ತದೆ ಮತ್ತು ಶತ್ರುಗಳು ಇರುವುದಿಲ್ಲ.

ಮೋದಿ ಸರ್ಕಾರದ ದೊಡ್ಡ ನಿರ್ಧಾರಗಳಲ್ಲಿ ಒಂದಾದ ನೋಟು ನಿಷೇಧವನ್ನು (Demonetisation) ನವೆಂಬರ್ 8 ರಂದು ರಾತ್ರಿ 8 ಗಂಟೆಗೆ ಘೋಷಿಸಲಾಗಿತ್ತು. ಸೆಪ್ಟೆಂಬರ್ 26, 2015 ರಂದು ಡಿಜಿಟಲ್ ಇಂಡಿಯಾ ಡ್ರೈವ್ ಅನ್ನು ಸಹ ಪ್ರಾರಂಭಿಸಿದರು. 2 ಮತ್ತು 6 ಸಂಖ್ಯೆಗಳನ್ನು ಕೂಡಿಸಿದರೆ 8 ಆಗುತ್ತದೆ. ಇದನ್ನೂ ಓದಿ: ಸ್ಫೋಟಕ ಟ್ವಿಸ್ಟ್‌ – ಡ್ರಗ್ಸ್‌ ಪಾರ್ಟಿಯಲ್ಲಿದ್ದ ಯುವತಿಯರಿಗೆ ಪರಿಚಯವೇ ಇರಲಿಲ್ಲ!

2019 ಪ್ರಮಾಣ ವಚನ ಸ್ವೀಕಾರ ಸಮಾರಂಭ
2019 ಪ್ರಮಾಣ ವಚನ ಸ್ವೀಕಾರ ಸಮಾರಂಭ

ಮೋದಿ ಅವರು ಸೆಪ್ಟೆಂಬರ್ 17 ರಂದು ಜನಿಸಿದ್ದಾರೆ. 1 ಮತ್ತು 7 ಸಂಖ್ಯೆಗಳನ್ನು ಕೂಡಿಸಿದರೆ 8 ಬರುತ್ತದೆ. ಭಾರತಕ್ಕೆ ಸಂಖ್ಯೆ 8 ಮಹತ್ವದ್ದಾಗಿದೆ. ಭಾರತದ ಗಣರಾಜ್ಯವಾಗಿದ್ದು ಜನವರಿ 26 ರಂದು. ಇಲ್ಲೂ 2+6 ಸೇರಿಸಿದಾಗ 8 ಆಗುತ್ತದೆ. ವರ್ಷ 2024 ಕ್ಕೂ 8ಕ್ಕೂ ಸಂಬಂಧವಿದೆ. 2+0-2+4 ಸೇರಿದಾಗ 8 ಬರುತ್ತದೆ.

ಜೂನ್ 8 ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭವು ಕೇವಲ ಕಾಕತಾಳೀಯವಾಗಿರದೇ ಬಹಳ ಯೋಚನೆ ಮಾಡಿಯೇ ಮಾಡಿರಬೇಕು ಎಂಬ ವಿಶ್ಲೇಷಣೆ ಕಂಡು ಬಂದಿದೆ. ಎಂಟರಿಂದ ಧನಾತ್ಮಕವಾಗಿ ಪ್ರಭಾವಿತರಾದವರು ತುಂಬಾ ಶ್ರಮಜೀವಿಗಳಾಗಿರುತ್ತಾರೆ. ಪ್ರಯತ್ನದಿಂದ ಯಾವುದೇ ಕೆಲಸವನ್ನು ಯಶಸ್ಸುಗೊಳಿಸುತ್ತಾರೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.

 


Viewing all articles
Browse latest Browse all 80395

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>