Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80062

ಪುನೀತ್ ರಾಜ್‍ಕುಮಾರ್ ನಿಧನ ದೊಡ್ಡ ಆಘಾತವಾಗಿದೆ: ಆರಗ ಜ್ಞಾನೇಂದ್ರ

$
0
0
araga jnanendra

– ಈವರೆಗೂ 6 ಲಕ್ಷಕ್ಕೂ ಹೆಚ್ಚು ಜನರಿಂದ ಪುನೀತ್ ಅಂತಿಮ ದರ್ಶನ

ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನ ದೊಡ್ಡ ಆಘಾತವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಪುನೀತ್ ರಾಜ್‍ಕುಮಾರ್ ಅಗಲಿಕೆ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪುನೀತ್ ಅವರು ಸಾಮಾಜಿಕ ಕಾರ್ಯಕರ್ತ ಮತ್ತು ನಟರಾಗಿದ್ದರು. ಅವರ ನಿಧನ ನಮಗೆ ದೊಡ್ಡ ಆಘಾತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಂದು ಸಂಜೆಯೇ ನಟ  ಪುನೀತ್ ಅಂತ್ಯಕ್ರಿಯೆ

ಇದೇ ವೇಳೆ ಕಾನೂನು ಸುವ್ಯವಸ್ಥೆಗೆ ಭಂಗ ಬಾರದಂತೆ ಜನ ಸಹಕಾರ ನೀಡಬೇಕು. ನಮ್ಮ ಪೊಲೀಸ್ ತಂಡ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದೆ. ಜನರು ಅಶಾಂತಿ ತರುವ ಕೆಲಸ ಮಾಡಬಾರದು. ಈಗಾಗಲೇ 20 ಸಾವಿರ ಪೊಲೀಸರು ಬೆಂಗಳೂರಿನಲ್ಲಿ ನಿಯೋಜನೆ ಮಾಡಲಾಗಿದೆ. 1,500 ಸಿಬ್ಬಂದಿಯನ್ನು ಜಿಲ್ಲೆಗಳಿಂದ ಕರೆಸಲಾಗಿದೆ. ಎರಡು ಸೆಂಟ್ರಲ್ ಫೋರ್ಸ್ ತರಿಸಲಾಗಿದೆ ಮತ್ತು 50 ಕೆಎಸ್‍ಆರ್‍ಪಿ ತುಕಡಿ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.  ಇದನ್ನೂ ಓದಿ:   ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ

ಈವರೆಗೂ 6 ಲಕ್ಷಕ್ಕೂ ಹೆಚ್ಚು ಜನರು ಪುನೀತ್ ಅಂತಿಮ ದರ್ಶನ ಮಾಡಿದ್ದು, ಜನರು ಶಾಂತಿಯುತವಾಗಿ ಇರಬೇಕು ಹಾಗೂ ನಮಗೆ ಸಹಕಾರ ನೀಡಬೇಕು ಎಂದಿದ್ದಾರೆ.

The post ಪುನೀತ್ ರಾಜ್‍ಕುಮಾರ್ ನಿಧನ ದೊಡ್ಡ ಆಘಾತವಾಗಿದೆ: ಆರಗ ಜ್ಞಾನೇಂದ್ರ appeared first on Public TV.


Viewing all articles
Browse latest Browse all 80062


<script src="https://jsc.adskeeper.com/r/s/rssing.com.1596347.js" async> </script>