ಚಿತ್ರದುರ್ಗ: ಕೆಎಸ್ಆರ್ಟಿಸಿ ಚಾಲಕನ ಸಮಯ ಪ್ರಜ್ಞೆಯಿಂದ ಚಿತ್ರದುರ್ಗ ಜಿಲ್ಲೆಯ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರ ಕುಂಚಿಗನಾಳ್ ಬಳಿ ದುರಂತ ತಪ್ಪಿದೆ.
ದಾವಣಗೆರೆ ವಿಭಾಗದ ಕೆಎ-17 ಎಫ್ 1373 ಸಂಖ್ಯೆಯ ಬಸ್ ಇದಾಗಿದೆ. ದಾವಣಗೆರೆಯಿಂದ ಬೆಂಗಳೂರಿಗೆ ಹೋಗ್ತಾ ಇದ್ದ ವೈಭವ ಬಸ್ ಏಕಾಏಕಿ ಬ್ರೇಕ್ ಫೇಲಾಗಿದೆ. ಇದನ್ನ ಅರಿತ ಬಸ್ ಚಾಲಕ ಮುಂಜಾಗೃತಾ ದೃಷ್ಟಿಯಿಂದ ಪಕ್ಕದ ಜಮೀನಿಗೆ ಬಸನ್ನ ತಿರುಗಿಸಿದ್ದಾರೆ. . ಬಸ್ಸನ್ನು ಜಮೀನಿಗೆ ನುಗ್ಗಿಸಿ ವೇಗ ನಿಯಂತ್ರಿಸಿದ ಪರಿಣಾಮ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಯಾಣಿಕರು ಪಾರಾಗಿದ್ದಾರೆ.
ಗಾಯಗೊಂಡವರನ್ನ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಸಿನಲ್ಲಿ 35 ಜನ ಪ್ರಯಾಣಿಕರಿದ್ದರು. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
The post ಬ್ರೇಕ್ ಫೇಲ್: ಕೆಎಸ್ಆರ್ಟಿಸಿ ಬಸ್ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿತು ದುರಂತ appeared first on Kannada Public tv.