Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80445

ಎಲಿಮಿನೇಟ್ ಭಯದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು

$
0
0

ಬೆಡ್‍ರೂಂ ಕಳೆದುಕೊಂಡ ಮನೆಯ ಸದಸ್ಯರು, ಸೊಳ್ಳೆ ಕಾಟ ಚಳಿಯಲ್ಲಿ ಎಲ್ಲಿ ಜಾಗ ಸಿಗುತ್ತದೆ ಎಂದು ಹುಡುಕಿ ಒಬ್ಬರು ಒಂದೊಂದು ಕಡೆ ಮಲಗಿ ನಿದ್ರೆಗೆ ಜಾರಿದ್ದರು. ಕೆಲವರು ನಿದ್ದೆ ಬಾರದೆ ಮಧ್ಯರಾತ್ರಿಯವರೆಗೆ ಮಾತನಾಡುತ್ತಾ ಕುಳಿತಿದ್ದರು. ಬಿಗ್‍ಬಾಸ್ ಸಾಂಗ್‍ನೊಂದಿಗೆ ದಿನವನ್ನು ಆರಂಭಿಸಿದ ಮನೆ ಮಂದಿ ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿರುವ ಸ್ಪರ್ಧಿಗಳು ಎಲಿಮಿನೇಶನ್ ಕುರಿತಾಗಿ ಮಾತನಾಡಿಕೊಳ್ಳುತ್ತಿದ್ದಾರೆ.

ದಿವ್ಯಾ ಉರುಡುಗ ಮತ್ತು ಅರವಿಂದ್ ನಾಮಿನೇಷನ್ ಕುರಿತಾಗಿ ಮಾತನಾಡಿಕೊಳ್ಳುತ್ತಿದ್ದಾರೆ. ನನ್ನ, ನಿಮ್ಮ ಹೆಸರು ಇರುತ್ತದೆ ಎಂದು ನಾನು ಅಂದುಕೊಂಡಿದ್ದೇನೆ ಹಾಗೆ ಆಗಿದೆ ಎಂದು ದಿವ್ಯ ಹೇಳಿದ್ದಾರೆ. ಈ ವೇಳೆ ಅರವಿಂದ್ ಹೌದು ನಮ್ಮ ಹತ್ತಿರದವರೆ ನಮ್ಮ ಹೆಸರನ್ನು ಸೂಚಿಸಿದ್ದಾರೆ. ಯಾರು ಅಂದುಕೊಂಡು ಇರುತ್ತೇವೊ ಅವರು ನಾಮಿನೇಟ್ ಮಾಡುವುದಿಲ್ಲ, ಮಾಡುವುದಿಲ್ಲ ಅಂದು ಕೊಂಡಿರುತ್ತಾರೋ ಅವರು ಮಾಡುತ್ತಾರೆ ಎಂದು ಹೇಳಿಕೊಂಡು ಇಬ್ಬರು ಮಾತ ನಾಡಿಕೊಂಡಿದ್ದಾರೆ. ಮೂರನೇ ವಾರದ ಎಲಿಮಿನೇಟ್ ಭಯ ಮನೆಯ ಸದಸ್ಯರಿಗೆ ಆರಂಭವಾಗಿದೆ.

ದಿವ್ಯ, ವಿಶ್ವ ತುಂಬಾ ಸ್ಟ್ರಾಂಗ್ ಕಂಟೆಸ್ಟಂಟ್ ಅವರು ಇಬ್ಬರು ಚಿಕ್ಕವರು ಹೊಂದಿಕೊಂಡು ಚೆನ್ನಾಗಿ ಆಡುತ್ತಾರೆ ಎಂದು ಅರವಿಂದ್ ಹೇಳಿದ್ದಾರೆ. ಹೌದು ನಿಧಿ ಮತ್ತು ಶಮಂತ್ ಕೂಡಾ ಚೆನ್ನಾಗಿ ಆಡುತ್ತಾರೆ ಎನ್ನಿಸುತ್ತಿದೆ ನಾವು ಮಾತ್ರ ಚೆನ್ನಾಗಿ ಆಟ ಆಡಬೇಕು ಎಂದು ದಿವ್ಯಾ ಹೇಳಿದ್ದಾರೆ. ದಿವ್ಯ ಮತ್ತು ಅರವಿಂದ್ ಇಬ್ಬರು ನಾವು ಸೇಫ್ ಆಗಬೇಕು ಎಂದು ಇಬ್ಬರು ಸೇರಿ ಗೇಮ್ ಪ್ಲ್ಯಾನ್ ಮಾಡಿದ್ದಾರೆ.

ಮನೆಯ ಸದಸ್ಯರು ತಮ್ಮನ್ನು ತಾವು ಬಚಾವ್ ಮಾಡಿಕೊಳ್ಳಲು ಗೇಮ್ ಪ್ಲ್ಯಾನ್ ಮಾಡುತ್ತಿದ್ದಾರೆ. ಈ ವಾರದ ಎಲಿಮಿನೇಷನ್ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಒಬ್ಬೊಬ್ಬರು ಒಂದು ರೀತಿಯ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದಾರೆ. ಎಲ್ಲರ ನಗು ಮುಖದ ಹಿಂದೆ ನಾವು ಮಾತ್ರ ಸೇಫ್ ಆಗಬೇಕು ಎನ್ನುವುದು ಇದೆ. ಎಲ್ಲರ ಹಿಂದೆ ನಿಂತು ಆಟ ಆಡಿಸುವ ಬಿಗ್‍ಬಾಸ್ ಇವರ ಆಟವನ್ನು ನೋಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.


Viewing all articles
Browse latest Browse all 80445

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಮತ್ತೊಂದು ಬೆಚ್ಚಿಬೀಳಿಸುವ ಘಟನೆ: ಕಬ್ಬಿನಗದ್ದೆಯಲ್ಲಿ ಅತ್ಯಾಚಾರದ ಬಳಿಕ ಪೈಶಾಚಿಕ ಕೃತ್ಯ


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ

<script src="https://jsc.adskeeper.com/r/s/rssing.com.1596347.js" async> </script>