Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80545

ನವಭಾರತದ ನಿರ್ಮಾಣದಲ್ಲಿ ಮನ್ ಕೀ ಬಾತ್ ಹೆಚ್ಚು ಸಹಾಯಕಾರಿ: ಪ್ರಧಾನಿ ಮೋದಿ

$
0
0

ನವದೆಹಲಿ: ಕನಸಿನ ನವ ಭಾರತದ ನಿರ್ಮಾಣದಲ್ಲಿ ಮನ್ ಕೀ ಬಾತ್ ಕಾರ್ಯಕ್ರಮ ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

36ನೇ ಮನ್ ಕೀ ಬಾತ್ ಆಕಾಶವಾಣಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾನಾಡಿದ ಅವರು, ಸರ್ಕಾರದ ಆಡಳಿತದಲ್ಲಿ ಜನ ಸಾಮಾನ್ಯರ ಸಲಹೆಗಳನ್ನು ಪಡೆದು ನವಭಾರತದ ಕನಸಿಗೆ ಮಾರ್ಗದರ್ಶನವಾಗಿ ರೂಪುಗೊಂಡಿರುವ ಮನ್ ಕಿ ಬಾತ್ ಕಾರ್ಯಕ್ರಮ ಸರ್ಕಾರದ ಉತ್ತಮ ಕ್ರಮವಾಗಿದೆ ಎಂದು ಹೇಳಿದರು.

ಮನ್ ಕಿ ಬಾತ್ ಕಾರ್ಯಕ್ರಮವಾಗಿ ಆರಂಭವಾಗಿ ಮೂರು ವರ್ಷಗಳು ಪೂರ್ಣಗೊಂಡ ಹಿನ್ನಲೆಯಲ್ಲಿ ಜನರ ಹೊಸ ಚಿಂತನೆಗಳು ಹಾಗೂ ಸಲಹೆಗಳನ್ನು ಪಡೆಯಲು ಕಾರ್ಯಕ್ರಮ ಹೆಚ್ಚು ಸಹಾಕಾರಿಯಾಗಿದೆ. ಅಚಾರ್ಯ ವಿನೋಬ ಭಾವೆಯವರ `ಎ-ಸರ್ಕಾರಿ ಇಸ್ ಅಸರ್ಕಾರಿ’ ಎಂಬ ಮಾತು ನನಗೆ ಸದಾ ನನಗೆ ನೆನಪಿದೆ. ಅಂದರೆ, ಸರ್ಕಾರದ ಪರಿಭಾಷೆಯಿಂದ ಹೊರಗಿರುವ ಯಾವುದಾದರು ಪರಿಣಾಮಕಾರಿಯಾಗಿರುತ್ತದೆ ಎಂಬ ಅರ್ಥವನ್ನು ನೀಡುತ್ತದೆ. ಈ ಕಾರ್ಯವನ್ನು ನಾನು ಮನ್ ಕೀ ಬಾತ್ ಕಾರ್ಯಕ್ರಮದ ಮೂಲಕ ಇದನ್ನು ಸಾಧ್ಯವಾಗಿಸಿ, ದೇಶದ ಪ್ರತಿ ಪ್ರಜೆಯನ್ನು ಕೇಂದ್ರವಾಗಿ ಮಾಡಲು ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ತಿಳಿಸಿದರು.

ಕಳೆದ ಮೂರು ವರ್ಷಗಳಲ್ಲಿ ಪ್ರಪಂಚಕ್ಕೆ ಭಾರತದ ಶಕ್ತಿಯನ್ನು ಪ್ರದರ್ಶಿಸುವ ವೇದಿಕೆಯಾಗಿ ಮನ್ ಕೀ ಬಾತ್ ಕಾರ್ಯನಿರ್ವಹಿಸಿದೆ. ಪ್ರಧಾನಿ ಈ ಕಾರ್ಯಕ್ರಮದ ಮೂಲಕ ಸ್ವಚ್ಛ ಭಾರತ ಅಭಿಯಾನ, ಮಹಿಳಾ ಸಬಲೀಕರಣ, ಹಾಗೂ ಸರ್ಕಾರವು ಕಾರ್ಯನಿರ್ವಹಿಸ ಬೇಕಾದ ವಿಧಾನಗಳ ಬಗ್ಗೆ ಜನರಿಂದ ಸಲಹೆ, ಅಭಿಪ್ರಾಯಗಳನ್ನು ಪಡೆದಿದ್ದಾರೆ. ಅಲ್ಲದೇ ಉತ್ತಮ ಸಲಹೆಗಳನ್ನು ನೀಡಿರುವ ಜನರನ್ನು ಪ್ರತ್ಯೇಕವಾಗಿ ಅಭಿನಂದಿಸಿದ್ದಾರೆ.

ಈ ಬಾರಿಯ ಭಾಷಣದಲ್ಲಿ ಕಾಶ್ಮೀರದ ಬಿಲಾಲ್ ದಾರ್(18) ಎಂಬ ಯುವಕ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿರುವ ಕುರಿತು ಪ್ರಸ್ತಾಪಿಸಿದರು. ಬಿಲಾಲ್‍ನನ್ನು ಶ್ರೀನಗರ ಸ್ವಚ್ಛತ ಅಭಿಯಾನದ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಯುವಕ ದಾಲ್ ಸರೋವರವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಸುಮಾರು 12 ಟನ್ ಕಸವನ್ನು ಸಂಗ್ರಹಿಸಿದ್ದ ಎಂದು ಹೊಗಳಿದರು. ಅಷ್ಟೇ ಅಲ್ಲದೇ ಈ ಮೂಲಕ ದೇಶದ ಮಾದರಿ ವ್ಯಕ್ತಿಯಾಗಿದ್ದಾನೆ ಎಂದು ಹೇಳಿದರು.

ಅಲ್ಲದೆ ಈ ತಮ್ಮ ಕಾರ್ಯಕ್ಕಾಗಿ ಬೆಂಬಲವನ್ನು ನೀಡಿರುವ ಮುದ್ರಣ ಮಾಧ್ಯಮ ಹಾಗೂ ವಿದ್ಯುನ್ಮಾನ ಮಾಧ್ಯಮಗಳಿಗೆ ಧನ್ಯವಾದಗಳನ್ನು ತಿಳಿಸಿದರು. ಗಾಂಧಿ ಜಯಂತಿಯ ಅಂಗವಾಗಿ ಎಲ್ಲರೂ ಖಾದೀ ಬಟ್ಟೆಗಳನ್ನು ಕೊಳ್ಳುವಂತೆ ಮನವಿ ಮಾಡಿಕೊಂಡ ಮೋದಿ ಈ ಕಾರ್ಯದಿಂದ ಹಲವು ಬಡ ಖಾದಿ ತಯಾರಿಕರಿಗೆ ಸಹಾಯವನ್ನು ಮಾಡಿದಂತೆ ಆಗುತ್ತದೆ. ಇಂತಹ ಬಡ ಮನೆಗಳಲ್ಲಿ ದೀಪವನ್ನು ಹಚ್ಚುವ ಕಾರ್ಯವನ್ನು ಮಾಡಬೇಕಿದೆ ಎಂದರು.

ತಮ್ಮ ಆಪ್, ಇ-ಮೇಲ್, ಮೊಬೈಲ್ ಮತ್ತು ಹಲವು ಸಾಮಾಜಿಕ ಜಾಲತಾಣಗಾಳ ಮೂಲಕ ಮಹತ್ವ ಮಾಹಿತಿಯನ್ನು ಪಡೆದುಕೊಂಡಿರುವುದಾಗಿ ತಿಳಿಸಿದ ಮೋದಿ ಈ ಮಾಹಿತಿ, ಸಲಹೆಗಳನ್ನು ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

ಈ ವರ್ಷದ ಸ್ವಾತಂತ್ರ್ಯ ದಿನಚಾರಣೆ ದಿನದಂದು ಪ್ರಸ್ತಾಪಿಸ ಬೇಕಾದ ಅಂಶಗಳ ಕುರಿತು ಮಾಹಿತಿ ನೀಡಿ ಎಂದು ಪ್ರಧಾನಿಗಳು ಸಲಹೆಗಳನ್ನು ಕೇಳಿದ್ದರು. ಇದಕ್ಕೆ ಸಂಬಂಧಿಸಿದಂತೆ ಸುಮಾರು 8 ಸಾವಿರ ಪ್ರತಿಕ್ರಿಯೆಗಳು ಲಭಿಸಿದ್ದವು. ಅಲ್ಲದೆ ಕಡಿಮೆ ಅವಧಿಯ ಭಾಷಣವನ್ನು ಮಾಡುವಂತೆ ಬಂದ ಕೋರಿಕೆಗೆ ಸ್ಪಂದಿಸಿದ ಅವರು ತಮ್ಮ ಭಾಷಣದ ಅವಧಿಯನ್ನು ಕಡಿಮೆ ಮಾಡಿದ್ದರು.


Viewing all articles
Browse latest Browse all 80545

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ಪ್ರೀ ವೆಡ್ಡಿಂಗ್ ಶೂಟ್ ಬಳಿಕ ಕೊಲೆ ಸಂಚು: ಪುಣೆಯಲ್ಲಿ ನಡೆದಿದೆ ಬೆಚ್ಚಿ ಬೀಳಿಸುವ ಘಟನೆ….!


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮದುವೆ ನಂತರ ಬ್ಲೂ ಫಿಲಂ ನೋಡಿದರೆ ಏನಾಗುತ್ತೆ?


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ನಟಿ ರಚಿತಾ ರಾಮ್ ಆಸೆ ಏನು ಗೊತ್ತಾ…!


ಕಾರ್ಪೋರೇಟರ್ ಅವ್ವ ಮಾದೇಶ  ಜೀವಾವಧಿ ಶಿಕ್ಷೆಗೆ ಕಾರಣವಾದ ` ಜೋಡಿ ಕೊಲೆ’ಯ  ಇನ್ ಸೈಡ್ ಸ್ಟೋರಿ…


ಜು.25 ರಂದು ಮತ್ತೆ ದೆಹಲಿಗೆ ಸಿಎಂ ಮತ್ತು ಡಿಸಿಎಂ


ಚಿಕ್ಕ ಮಕ್ಕಳಿಗೆ ಸೆಕ್ಸ್ ಎಜುಕೇಷನ್ ಪಾಠ ಮಾಡಿದ ಯೋಗೀಶ್ ಮಾಸ್ಟರ್ –ವಿಡಿಯೋ ವೈರಲ್


ಹಾಸ್ಯ : ಪಿತೃ ಪಕ್ಷದಲ್ಲಿ ಭರ್ಜರಿ ಭೋಜನಕ್ಕೆ ಮುನ್ನ ಕಾಗೆಗಳ ಮೀಟಿಂಗು!


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಲವ್, ಸೆಕ್ಸ್, ದೋಖಾ: ಖಾಸಗಿ ವಿಡಿಯೋ ಮಾಡಿ ಮಹಿಳೆ ಮೇಲೆ ಹಲ್ಲೆ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


The Ashtanga Key - Surya Namaskar


ಅತ್ತಿಗೆ–ಮೈದುನ ಅಕ್ರಮ ಸಂಬಂಧ, ಆಮೇಲೇನಾಯ್ತು ಗೊತ್ತಾ…?



<script src="https://jsc.adskeeper.com/r/s/rssing.com.1596347.js" async> </script>