Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80415

ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದು ಹೀಗೆ

$
0
0

ಬೆಳಗಾವಿ: ನಾವು ಸೀರೆಗಾಗಿ ಹಣ ಖರ್ಚು ಮಾಡಲ್ಲ. ಬದಲಿಗೆ ಬಸವಣ್ಣನವರು ವಿಚಾರಗಳನ್ನು ಸಾರಲು ಪ್ರತಿ ತಿಂಗಳು ಲಕ್ಷ ಹಣ ಖರ್ಚು ಮಾಡುತ್ತೇವೆ ಎಂದು ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಜಾರಕಿಹೊಳಿ ಅಭಿಮಾನಿ ಸಂಘದಿಂದ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಡವರಿಗೆ, ಅನಾಥಾಶ್ರಮಗಳಿಗೆ ಪ್ರತಿ ತಿಂಗಳು ಲಕ್ಷ ಹಣ ಖರ್ಚು ಮಾಡುತ್ತೇನೆ. ರಾಜಕೀಯ ಲಾಭಕ್ಕಾಗಿ ಈಗಾಗಲೇ ಸೀರೆ ಹಂಚುವ ಕೆಲಸ ಶುರುವಾಗಿದೆ. ಅದು ಕೇವಲ 70 ರೂಪಾಯಿ ಸೀರೆ. ಆದರೆ ಕಾಲ ಬಂದ್ರೆ ನಾವು 200 ರೂಪಾಯಿ ಸೀರೆ ಹಂಚಲು ಸಿದ್ಧರಿದ್ದೇವೆ ಎಂದರು.

ರಾಜಕೀಯ ಲಾಭಕ್ಕೆ ಸೀರೆಗಳನ್ನ ಹಂಚಲ್ಲ. ಸಮಾಜಕ್ಕಾಗಿ ದುಡಿಯಬೇಕು. ನಮ್ಮ ಹತ್ತಿರ ಜನ, ಹಣ, ಸಿದ್ಧಾಂತ ಎಲ್ಲವೂ ಇದೆ. ಮುಂದಿನ ದಿನಗಳಲ್ಲಿ ಸಾಮಾಜಿಕ ಪರ ಇರುವ ಸರ್ಕಾರ ಬರಬೇಕು. ರಾಜಕೀಯದಲ್ಲಿ ದುಡ್ಡು ಮುಖ್ಯವಲ್ಲ ಎಂದು ಹೇಳುವ ಮೂಲಕ ಲಕ್ಷ್ಮಿ ಹೆಬ್ಬಾಳಕರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ನಾನು ಎಐಸಿಸಿ ಕಾರ್ಯದರ್ಶಿ ಹಾಗು ತೆಲಂಗಾಣ ಉಸ್ತುವಾರಿ ಹುದ್ದೆ ಪಡೆದಿದ್ದು 40 ವರ್ಷದ ಕಠಿಣ ಪರಿಶ್ರಮದಿಂದ. ನನ್ನ 40 ವರ್ಷದ ಜೀವನದಲ್ಲಿ ರಾಜಕೀಯ ಮಾಡುವ ಬದಲು ಸಮಾಜವನ್ನ ಕಟ್ಟುವ ಕೆಲಸ ಮಾಡಿದ್ದೇನೆ. ಬೆಳಗಾವಿ ಉಸ್ತುವಾರಿ ಸಚಿವನಾಗಿದ್ದಾಗ ಬಹಳಷ್ಟು ಕೆಲಸಗಳನ್ನ ಮಾಡಿದ್ದೇನೆ ಎಂದರು.

ರೈತರು, ವಿದ್ಯಾರ್ಥಿಗಳು, ಬಡವರ ಪರವಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಕಾರ್ಯ ವೈಖರಿ ನೋಡಿ ಸೋನಿಯಾ ಗಾಂಧಿಯವರು ವಿವಿಧ ಹುದ್ದೆಗೆಳನ್ನ ನೀಡಿದ್ದಾರೆ. ನನ್ನ ಅಧಿಕಾರ ಅವಧಿಯಲ್ಲಿ ಹೇಗೆ ಇದ್ದೆ ಇಗಲು ಹಾಗೆ ಇದ್ದೇನೆ. ರಾಜಕೀಯ ಅಷ್ಟೇ ಅಲ್ಲದೆ ಸಾಮಾಜಿಕ ಕಾರ್ಯಗಳನ್ನು ಮೈಗೂಡಿಸಿಕೊಂಡಿದ್ದೇನೆ. ಅಧಿಕಾರ ಶಾಶ್ವತ ಅಲ್ಲ. ಜನರ ಪ್ರೀತಿ ವಿಶ್ವಾಸ ಮಾತ್ರ ಶಾಶ್ವತ. 20 ವರ್ಷಗಳಿಂದ ಮೂಢನಂಬಿಕೆಗಾಗಿ ಹೋರಾಟ ಮಾಡುತ್ತಿದ್ದೇನೆ ಎಂದು ಹೇಳಿದರು.


Viewing all articles
Browse latest Browse all 80415

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>