Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80425

ಹೆಣ್ಣುಮಕ್ಕಳನ್ನ ಸಶಕ್ತರನ್ನಾಗಿ ಮಾಡ್ಬೇಕು, ಗರ್ಭದಲ್ಲೇ ಕೊಲ್ಲಬಾರ್ದು- ಹರ್ಮನ್‍ಪ್ರೀತ್ ಕೌರ್ ತಾಯಿ

$
0
0

ನವದೆಹಲಿ: ಗುರುವಾರದಂದು ನಡೆದ ಐಸಿಸಿ ಮಹಿಳಾ ವಿಶ್ವಕಪ್‍ನ ಸೆಮಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಹರ್ಮನ್‍ಪ್ರೀತ್ ಕೌರ್ ಅವರ ತಾಯಿ ಎಲ್ಲರಿಗೂ ಸಂದೇಶವೊಂದನ್ನ ನೀಡಿದ್ದಾರೆ.

ಹೆಣ್ಣುಮಕ್ಕಳನ್ನ ಸಶಕ್ತರನ್ನಾಗಿ ಮಾಡ್ಬೇಕು. ಗರ್ಭದಲ್ಲಿಯೇ ಕೊಲ್ಲಬಾರದು. ನನ್ನ ಮಗಳು ದೇಶಕ್ಕೆ ಹೆಮ್ಮೆ ತಂದಿರುವಂತೆ ಇತರೆ ಹೆಣ್ಣುಮಕ್ಕಳನ್ನೂ ಪ್ರೋತ್ಸಾಹಿಸಬೇಕು ಅಂತ ಹರ್ಮನ್ ಪ್ರೀತಿ ತಾಯಿ ಹೇಳಿದ್ದಾರೆ.

ಹರ್ಮನ್‍ಪ್ರೀತ್ ಅವರ ಪಂಜಾಬ್‍ನ ಮೋಗಾದಲ್ಲಿರೋ ಮನೆಯಲ್ಲಿ ಸಂಭ್ರಮದ ನಡುವೆ ಅವರ ತಂದೆ ಹರ್ಮಿಂದರ್ ಸಿಂಗ್ ಕೂಡ ಮಾತನಾಡಿದ್ರು. ಆಕೆ ಮುಂದೆ ಇನ್ನೂ ಚೆನ್ನಾಗಿ ಆಟವಾಡಿ, ವಿಶ್ವ ಕಪ್ ಗೆದ್ದು ಭಾರತಕ್ಕೆ ಹೆಮ್ಮೆ ತರಬೇಕು ಅಂತ ಹೇಳಿದ್ರು.

ಇದನ್ನೂ ಓದಿ: 90 ಎಸೆತದಲ್ಲಿ ಶತಕ, 115 ಎಸೆತದಲ್ಲಿ 171 ರನ್: ಆಸೀಸ್ ವಿರುದ್ಧ ಸಿಡಿದ ಹರ್ಮನ್ ಪ್ರೀತ್

ಆಕೆ ಚಿಕ್ಕಂದಿನಿಂದಲೂ ಹುಡುಗರ ಜೊತೆ ಕ್ರಿಕೆಟ್ ಆಡುತ್ತಾ ಬಂದಿದ್ದಾಳೆ. ಆಕೆಯ ರನ್‍ಗಳ ಹಸಿವು ಸಾಯುವುದಿಲ್ಲ. ಇದು ಆಕೆಯ ಸ್ಟ್ರೈಕ್ ರೇಟ್‍ನಲ್ಲಿ ಕಾಣಿಸುತ್ತದೆ. ಅವಳು ಯಾವಾಗ್ಲೂ ಪಾಸಿಟವ್ ಆಗಿರ್ತಾಳೆ. ಮೈದಾನದಲ್ಲಿ ವಿರಾಟ್ ಕೊಹ್ಲಿಯಂತೆ ವರ್ತಿಸುತ್ತಾಳೆ. ಅವರಂತೆಯೇ ಆಕ್ರಮಣಕಾರಿ. ಆದ್ರೆ ಬೇರೆ ಕಡೆ ಇದ್ದಾಗ ಆಕೆ ತುಂಬಾ ಮೌನವಾಗಿ ಹಾಗೂ ಗಂಭೀರವಾಗಿರ್ತಾಳೆ. ತನ್ನ ಯೌವ್ವನಾವಸ್ಥೆಯಿಂದ್ಲೂ ವಿರೇಂದ್ರ ಸೆಹ್ವಾಗ್ ಅವರನ್ನ ಮಾದರಿಯಾಗಿ ಇಟ್ಟುಕೊಂಡಿದ್ದಾಳೆ. ಅವರಂತೆಯೇ ಬ್ಯಾಟಿಂಗ್ ಮಾಡ್ತಾಳೆ ಎಂದು ಹರ್ಮನ್‍ಪ್ರೀತಿ ಸಹೋದರಿ ಹೇಳಿದ್ದಾರೆ.

ಭಾರತದ ಮಹಿಳಾ ಕ್ರಿಕೆಟ್ ತಂಡದ ವೈಸ್ ಕ್ಯಾಪ್ಟನ್ ಆಗಿರೋ ಹರ್ಮನ್‍ಪ್ರೀತ್ ಕೌರ್ ಗುರುವಾರದಂದು ನಡೆದ ಪಂದ್ಯದಲ್ಲಿ 115 ಎಸೆತಗಳಿಗೆ 171 ರನ್ ಗಳಿಸುವ ಮೂಲಕ ಆಸ್ಟ್ರೇಲಿಯಾ ಬೌಲರ್‍ಗಳನ್ನೇ ಮೂಕವಿಸ್ಮಿತರನ್ನಾಗಿ ಮಾಡಿದ್ರು. ಹರ್ಮನ್‍ಪ್ರೀತ್ ಅವರ ಅಜೇಯ 171 ರನ್ ವಿಶ್ವಕಪ್ ನಾಕ್‍ಔಟ್ ಮ್ಯಾಚ್‍ನಲ್ಲಿ ಭಾರತೀಯ ಆಟಗಾರರೊಬ್ಬರು ಗಳಿಸಿರೋ ಅತ್ಯಂತ ಹೆಚ್ಚಿನ ರನ್.

ಇದನ್ನೂ ಓದಿ: ಭಾರತಕ್ಕೆ 36 ರನ್ ಗಳ ಜಯ : ಫೈನಲಿಗೆ ಎಂಟ್ರಿ


Viewing all articles
Browse latest Browse all 80425

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>