Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80535

ದಕ್ಷಿಣ ಕನ್ನಡ ಗಲಭೆ ನಿಯಂತ್ರಿಸುವಲ್ಲಿ ವಿಫಲವಾಗಿದ್ದಕ್ಕೆ ಐಜಿಪಿ ಹರಿಶೇಖರನ್ ಎತ್ತಂಗಡಿ?

$
0
0

ಬೆಂಗಳೂರು: ದಕ್ಷಿಣ ಕನ್ನಡ ಗಲಭೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದು, ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಎತ್ತಂಗಡಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ದಕ್ಷಿಣ ಕನ್ನಡ ಗಲಭೆಯ ಪರಿಸ್ಥಿತಿ ನಿಭಾಯಿಸುವಲ್ಲಿ ಹರಿಶೇಖರನ್ ವಿಫಲವಾಗಿದ್ದಾರೆ. ಗಲಭೆ ವೇಳೆ ಕೂಡಲೇ ಶಾಂತಿ ಸಭೆ ನಡೆಸಲಿಲ್ಲ. ಎರಡೂ ಸಮಾಜದ ಮುಖಂಡರ ಮನವೊಲಿಸಿಲ್ಲ ಅಂತ ಸಿಎಂ ಕಿಡಿಕಾರಿದ್ದಾರೆ.

ಬಿಜೆಪಿ ಮುಖಂಡರಿಗೆ ಸಹಾನುಭೂತಿ ತೋರಿಸಿದ ಪೊಲೀಸರ ಬಗ್ಗೆಯೂ ಸಿಎಂ ಕೆಂಗಣ್ಣು ಬೀರಿದ್ದಾರೆ. ಹೀಗಾಗಿ, ಈ ಹಿಂದೆ ದಕ್ಷಿಣ ಕನ್ನಡ ಎಸ್‍ಪಿಯಾಗಿದ್ದ ಭೂಷಣ್ ಜಿ ಬೊರಸೆ ವಿರುದ್ಧವೂ ಕಿಡಿಕಾರಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ನಡೆದಿದ್ದ ಪೊಲೀಸ್ ಅಧಿಕಾರಿಗಳ ಸಭೆಯಲ್ಲೂ ಸಿಎಂ ಸಿಟ್ಟು ಹೊರಹಾಕಿದ್ದರು.


Viewing all articles
Browse latest Browse all 80535

Trending Articles



<script src="https://jsc.adskeeper.com/r/s/rssing.com.1596347.js" async> </script>