Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80012

ಹೈವೇಯಲ್ಲಿದ್ದ ಬಾರ್ ಹೊಲಕ್ಕೆ ಶಿಫ್ಟ್ –ಮಾಲೀಕನ ವಿರುದ್ಧ ಗ್ರಾಮಸ್ಥರಿಂದ ಪ್ರತಿಭಟನೆ

$
0
0

ಹುಬ್ಬಳ್ಳಿ: ಸುಪ್ರೀಂ ಕೋರ್ಟ್ ಆದೇಶದಂತೆ ಹೆದ್ದಾರಿ ಪಕ್ಕದಲ್ಲಿ ಇರುವ ಬಾರ್‍ಗಳನ್ನು ಸರ್ಕಾರ ಬಂದ್ ಮಾಡಿಸಿದೆ. ಆದ್ರೆ ಅದಕ್ಕೂ ವಾಮ ಮಾರ್ಗ ಕಂಡುಕೊಂಡ ಬಾರ್ ಮಾಲೀಕರು ಹೈವೇ ಪಕ್ಕದಲ್ಲಿ ಇರುವ ಹೊಲದಲ್ಲಿ ಬಾರ್ ಗಳನ್ನು ಓಪನ್ ಮಾಡಿಕೊಂಡಿವೆ.

ಹುಬ್ಬಳ್ಳಿಯ ಗಿರಣಿ ಚಾಳದ ಪಕ್ಕದಲ್ಲಿ ಇರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವ ಬಹುತೇಕ ಬಾರ್ ಗಳನ್ನು ಅಬಕಾರಿ ಇಲಾಖೆ ಬಂದ್ ಮಾಡಿಸಿತ್ತು. ಆದ್ರೆ ಅದೇ ಬಾರ್ ಮಾಲೀಕರು ಅಕ್ರಮವಾಗಿ ಹೊಲದಲ್ಲಿ ಬಾರ್ ಓಪನ್ ಮಾಡಿದ್ದಾರೆ.

ಹೀಗಾಗಿ ಹುಬ್ಬಳ್ಳಿಯ ಗಿರಣಿ ಚಾಳ ನಿವಾಸಿಗಳು ಇದರಿಂದ ಬೇಸತ್ತು ಹೊಲದಲ್ಲಿ ತೆರೆದಿದ್ದ ಬಾರ್ ಬಂದ್ ಮಾಡಿಸಿ, ಜಿಲ್ಲಾ ಅಬಕಾರಿ ಕಚೇರಿ ಎದುರು ನೂರಾರು ಜನ ಪ್ರತಿಭಟನೆ ಮಾಡಿದ್ದಾರೆ. ಅಲ್ಲದೆ ಈ ರೀತಿಯಲ್ಲಿ ಬಾರ್ ಗಳನ್ನು ತೆರೆಯಲು ಅನುಮತಿ ನೀಡಬಾರದು ಮತ್ತು ಬಾರ್ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.


Viewing all articles
Browse latest Browse all 80012


<script src="https://jsc.adskeeper.com/r/s/rssing.com.1596347.js" async> </script>