Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80355

ಸೋಮವಾರ ಬಂದ್ ಆಗೇ ಆಗುತ್ತೆ, ಬಸ್ ಸಂಚಾರ, ಹೋಟೆಲ್ ತೆರೆಯಲು ಬಿಡಲ್ಲ: ವಾಟಾಳ್

$
0
0

ಬೆಂಗಳೂರು: ರಾಜ್ಯದ ಜನರಿಗೆ, ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಹಾಗೂ ನೆಲ-ಜಲ, ನಾಡು-ನುಡಿ ರಕ್ಷಣೆಗಾಗಿ ಅನೇಕ ಬೇಡಿಕೆಗಳನ್ನ ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಸೋಮವಾರ ನಡೆಯುವ ಬಂದ್ ಗೆ ಬೆಂಬಲ ನೀಡುವಂತೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂದ್ ನಿಲ್ಲಿಸಲು ಕೆಲವರು ಪಿತೂರಿ ಮಾಡುತ್ತಿದ್ದಾರೆ. ಅವರಿಗೆ ಭಯವಿದೆ, ಎಲ್ಲಿ ಮುಂದೆ ಪ್ರಾದೇಶಿಕ ಪಕ್ಷ ಕಟ್ತಾರೆ ಅಂತಾ. ನಾನು ಇದಕ್ಕೆಲ್ಲ ಬಗ್ಗಲ್ಲ, ಬಂದ್ ನಡೆಸೇ ನಡೆಸ್ತೀವಿ. ಕೆಲ ಸಂಘಟನೆಗಳ ವಿರೋಧ ಇದೆ. ಬಂದ್ ಆದ್ರೇ ಏನಾಗಿ ಹೋಗುತ್ತೆ. ಬಂದ್ ವಾಪಸು ಪಡೆದುಕೊಳ್ಳುವ ಮಾತೇ ಇಲ್ಲ. ಹೀಗಾಗಿ ನಾಳೆ ಬಂದ್ ಆಗೇ ಆಗುತ್ತೆ. ಬಸ್ ಸಂಚಾರ, ಹೋಟೆಲ್ ತೆರೆಯಲು ಬಿಡಲ್ಲ ಅಂತಾ ವಾಟಾಳ್ ಸ್ಪಷ್ಟಪಡಿಸಿದ್ದಾರೆ.

ಬಳಿಕ ಸಾರಿಗೆ ನೌಕರರ ಸಂಘದ ಅನಂತ್ ಸುಬ್ಬರಾವ್ ಹಾಗು ನಾಗರಾಜ್ ವಿರುದ್ಧ ಕಿಡಿಕಾರಿದ ವಾಟಾಳ್ ನಾಗರಾಜ್, ನನ್ನ ಕರೆಯನ್ನು ಇವರು ಸ್ವೀಕರಿಸುತ್ತಿಲ್ಲ. ನಾನು ಅವರ ಹೋರಾಟಕ್ಕೆ ಸಾಕಷ್ಟು ಬೆಂಬಲ ನೀಡಿದ್ದೇನೆ. ಆದ್ರೆ ಈಗ ನನ್ನಂಥವನ ಕರೆಯನ್ನು ಸ್ಪೀಕರಿಸಲ್ಲ. ನಾಳೆ ಬಸ್ ಸಂಚಾರಕ್ಕೂ ಬಿಡಲ್ಲ ಅಂತಾ ಹೇಳಿದರು.

ಮಾಧ್ಯಮದ ವಿರುದ್ಧ ಕಿಡಿ: ಬಂದ್ ಗೆ ಕೆಲ ಸಂಘಟನೆಗಳ ವಿರೋಧವಿದೆ. ವಿರೋಧಿಸುವ ಸಂಘಟನೆಗಳು ಕೆಲ ಸಣ್ಣಪುಟ್ಟ ಹೇಳಿಕೆಗಳನ್ನು ಕೊಟ್ಟರೆ ಮಾಧ್ಯಮದವರು ಅದನ್ನೇ ದೊಡ್ಡದು ಮಾಡುತ್ತೀರಿ. ಒಟ್ಟಿನಲ್ಲಿ ಬಂದ್ ಗೆ ವಿರೋಧ ಮಾಧ್ಯಮ ಸೃಷ್ಠಿ ಅಂತಾ ಮಾಧ್ಯಮದ ಮೇಲೆ ಗೂಬೆ ಕೂರಿಸಿದರು.


Viewing all articles
Browse latest Browse all 80355

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>