Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80395

ಪ್ಲೀಸ್ ಅಳ್ಬೇಡಿ ಎಂದು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ ಪತ್ನಿ ಕೊನೆಗೂ ಪ್ರತ್ಯಕ್ಷ!

$
0
0

ಬೆಂಗಳೂರು: ಗಂಡನಿಗೆ ಪ್ಲೀಸ್ ಅಳ್ಬೇಡಿ, ನಾನು ಮನೆ ಬಿಟ್ಟು ಹೋಗ್ತಾಯಿದ್ದೀನಿ ಎಂದು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ ಪತ್ನಿ ಇಂದು ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷ ಆಗಿದ್ದಾಳೆ.

ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರದ ಬಳಿಕ ಶ್ರೀನಿವಾಸ ಅವರ ಪತ್ನಿ ಜ್ಯೋತಿ ಇಂದು ಮಗು ಸಹಿತ ಪೊಲೀಸ್ ಠಾಣೆಯಲ್ಲಿ ಕಾಣಿಕೊಂಡಿದ್ದು, ಈಗ ದಂಪತಿ ಒಂದಾಗಿದ್ದಾರೆ.

ಹೋಗಿದ್ದು ಎಲ್ಲಿಗೆ?
ನಾನು ಯಾರ ಜೊತೆನೂ ಓಡಿ ಹೋಗಿರಲಿಲ್ಲ. ನನ್ನ ಸಂಬಂಧಿಯಾಗಿರುವ ಸಕಲೇಶಪುರದ ತಿಮ್ಮಮ್ಮ ಎಂಬವರ ಮನೆಗೆ ಹೋಗಿದ್ದೆ. ಅಲ್ಲದೆ ನಾನು ಹಾಗೂ ನನ್ನ ಗಂಡನ ನಡುವೆ ಕೆಲ ಮನಸ್ತಾಪ ಬಂದಿದ್ದು ಜಗಳವಾಡಿ ಮನೆ ಬಿಟ್ಟು ಹೋಗಿದ್ದೆ ಎಂದು ಜ್ಯೋತಿ ತಿಳಿಸಿದ್ದಾರೆ.

ಇಷ್ಟು ದಿನಗಳಿಂದ ನಾಪತ್ತೆಯಾಗಿದ್ದ ಪತ್ನಿ ಜ್ಯೋತಿ ಮತ್ತು ಮಗಳು ಮರಳಿ ಬಂದಿದ್ದಾರೆ. ಇದ್ರಿಂದ ಖುಷಿಯಾಗಿದೆ. ಮುಂದೆ ಇಬ್ಬರೂ ಚೆನ್ನಾಗಿ ಇರ್ತೀವಿ. ಯಾವುದೇ ಮನಸ್ತಾಪ ಬರದಂತೆ ಪತ್ನಿಯನ್ನು ನೋಡಿಕೊಳ್ತೇನೆ ಎಂದು ಶ್ರೀನಿವಾಸ ಹೇಳಿದ್ದಾರೆ.

ಏನಿದು ಪ್ರಕರಣ?
ಇಪ್ಪತ್ತು ದಿನದ ಹಿಂದೆ ಚನ್ನರಾಯಪಟ್ಟಣದ ಪ್ಲವರ್ ಡೆಕೊರೇಟ್ ಕೆಲಸ ಮಾಡುವ ನಾಗರಾಜು ತನ್ನ ಪತ್ನಿಯ ಜ್ಯೋತಿಯ ತಲೆಕೆಡಿಸಿ, ತನ್ನ ಹೆಂಡತಿ ಮಗುವಿನ ಜೊತೆ ನಾಪತ್ತೆಯಾಗಿದ್ದಾನೆ ಎಂದು ಪತಿ ಶ್ರೀನಿವಾಸ್ ಡಾಬಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಮನೆಯಿಂದ ಹೋಗುವ ಮುನ್ನ ಪತ್ನಿ ಜ್ಯೋತಿ ಗಂಡನಿಗೆ ಕಡೆಯ ಬಾರಿ ಪ್ರೀತಿಯ ಲೆಟರ್ ಬರೆದಿದ್ದು, “ನಿಮ್ಮನ್ನ ಬಿಟ್ಟು ಹೋಗುತ್ತಿದ್ದೇನೆ sorry ಪ್ಲೀಸ್ ಅಳ್ಬೇಡಿ” ಎಂದು ಬರೆದಿದ್ದಾಳೆ. ಅಲ್ಲದೇ ಮನೆಯಲ್ಲಿದ್ದ ಬಿಡಿಗಾಸು, ಒಡವೆ ಸೇರಿದಂತೆ ಅಡುಗೆ ಮಾಡಲು ತಂದಿದ್ದ ತರಕಾರಿ ಸಾಂಬಾರು ಪದಾರ್ಥಗಳನ್ನೆಲ್ಲ ಎತ್ತಿಕೊಂಡು ಹೋಗಿದ್ದಾಳೆ ಎಂದು ಪತಿ ಶ್ರೀನಿವಾಸ್ ಹೇಳಿದ್ದರು.

ಐದು ವರ್ಷದ ಹಿಂದೆ ಮಂಡ್ಯ ಮೂಲದ ಶ್ರೀನಿವಾಸ್, ಚನ್ನರಾಯಪಟ್ಟಣದ ಜ್ಯೋತಿ ಎಂಬುವವರು ಪ್ರೀತಿಸಿ ಮದುವೆಯಾಗಿದ್ದರು. ಬೆಂಗಳೂರಿನ ಪೀಣ್ಯಾದ ಗಾರ್ಮೆಂಟ್ಸ್ ನಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದಾಗ ಸ್ನೇಹ ಪ್ರೀತಿಗೆ ತಿರುಗಿ ಮದುವೆಯಾಗಿದ್ದರು. ಪತಿ ಶ್ರೀನಿವಾಸ್ ತನ್ನ ಪತ್ನಿಯನ್ನು ಪ್ರತಿನಿತ್ಯ ತಾನೇ ಕೈಯಾರ ಅಡುಗೆ ಮಾಡಿ ಕೈತ್ತುತ್ತು ತಿನ್ನಿಸುತಿದ್ದರು. ಹೆಂಡತಿಯ ಕೈಕಾಲು ಒತ್ತೋದು, ಆಕೆಯ ಬಟ್ಟೆ ಒಗೆಯೊದು, ನಂತರ ತಾನೇ ಆಕೆಯ ತಲೆ ಬಾಚಿ ಶೃಂಗಾರ ಮಾಡಿ ಸ್ನೋ ಪೌಡರ್ ಹಾಕಿ ತನ್ನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಂಡು ಬಡವನಾದ್ರು ಸುಖಃದಲ್ಲಿಯೇ ಪ್ರೀತಿಸುತಿದ್ದರು.

ಹೆಂಡತಿ ಹಾಗೂ ಮುದ್ದಾದ ನಾಲ್ಕು ವರ್ಷದ ಹೆಣ್ಣು ಮಗು ನೋಡದಿರುವ ಶ್ರೀನಿವಾಸ್ ಫೋಟೋ ಹಿಡಿದುಕೊಂಡು ಇಬ್ಬರ ಪತ್ತೆಗಾಗಿ ಬೀದಿಬೀದಿ ಸುತ್ತುತಿದ್ದರು. ಅಲ್ಲದೆ ಕ್ಯಾಮೆರಾ ಮುಂದೆ ಆಗಿದೆಲ್ಲ ಆಗಿದೆ ಪ್ಲೀಸ್ ಮನೆಗೆ ಬಾ ಎಂದು ಕಣ್ಣೀರಿಟ್ಟಿದ್ದರು.

 


Viewing all articles
Browse latest Browse all 80395

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>