Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80455

ಪಾರ್ವತಮ್ಮ ರಾಜ್‍ಕುಮಾರ್‍ಗೆ ಜ್ವರ, ನಿನ್ನೆಗೆ ಹೋಲಿಸಿದ್ರೆ ಆರೋಗ್ಯ ಸ್ಥಿತಿ ಗಂಭೀರ –ಚಿಂತಿಸುವ ಅಗತ್ಯವಿಲ್ಲ ಎಂದ ಶಿವಣ್ಣ

$
0
0

ಬೆಂಗಳೂರು: ಹನ್ನೆರಡನೇ ದಿನವೂ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಚಿಕಿತ್ಸೆ ಮುಂದುವರೆದಿದೆ.

ಇಂದು ಆಸ್ಪತ್ರೆಯ ವೈದ್ಯರು ಮತ್ತು ನಟ ಶಿವರಾಜ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಪಾರ್ವತಮ್ಮನವರ ಆರೋಗ್ಯದ ಸ್ಥಿತಿ ಬಗ್ಗೆ ಮಾಹಿತಿ ನೀಡಿದ್ರು. ವೆಂಟಿಲೇಟರ್‍ನಲ್ಲೇ ಚಿಕಿತ್ಸೆ ನೀಡಲಾಗ್ತಿದೆ. ಪಾರ್ವತಮ್ಮ ಅವರ ಆರೋಗ್ಯ ಯಥಾಸ್ಥಿತಿಯಲ್ಲಿದೆ. ಉಸಿರಾಟ ಸುಲಭವಾಗಲಿ ಅಂತ ಟ್ರೈಕಾಸ್ಟಮಿ ಮಾಡಲಾಗಿದೆ. ಬಿಪಿ, ಪಲ್ಸ್ ಮೆಂಟೇನ್ ಮಾಡ್ತಿದ್ದೀವಿ ಅಂತ ಡಾ ಸಂಜಯ್ ಕುಲಕರ್ಣಿ ಹೇಳಿದ್ರು.

ಶಿವರಾಜ್ ಕುಮಾರ್ ಕೂಡ ಅಮ್ಮನ ಆರೋಗ್ಯದ ಬಗ್ಗೆ ಮಾತನಾಡಿದ್ರು. ಜ್ವರ ಇರುವುದರಿಂದ ನಿನ್ನೆಗೆ ಹೋಲಿಸಿದ್ರೆ ಇವತ್ತು ಆರೋಗ್ಯ ಸ್ವಲ್ಪ ಗಂಭೀರವಾಗಿದೆ. ನಿನ್ನೆ ಟ್ರೆಕಾಸ್ಟಮಿ ಮಾಡಿದ್ದರಿಂದ ಇಂದು ಜ್ವರ ಕಾಣಿಸಿಕೊಂಡಿದೆ. ಐಸಿಯು ನಲ್ಲಿ ಇರೋದ್ರಿಂದ ಕಂಡಿಷನ್ ಬದಲಾಗುತ್ತಿರುತ್ತೆ. ಇನ್ನು ಭರವಸೆಯನ್ನ ನಾವು ಬಿಟ್ಟಿಲ್ಲ. ನಾವು ಅಷ್ಟು ಸುಲಭಕ್ಕೆ ಬಿಟ್ಟುಕೊಡಲ್ಲ. ವೈದ್ಯರು ಉತ್ತಮ ಚಿಕಿತ್ಸೆ ಕೊಡುತ್ತಿದ್ದಾರೆ ಅಂತ ಶಿವರಾಜ್ ಕುಮಾರ್ ಹೇಳಿದ್ರು.

ಪಾರ್ವತಮ್ಮ ಅವರು ತೀರಾ ಗಂಭೀರ ಸ್ಥಿತಿಯಲ್ಲಿರೋದ್ರಿಂದ ಯಾರನ್ನೂ ಒಳಗಡೆ ಬಿಡಲಾಗ್ತಿಲ್ಲ. ದಯವಿಟ್ಟು ಯಾವುದೇ ನಟ ನಟಿಯರು ಅಥವಾ ಅಭಿಮಾನಿಗಳಾಗಲಿ ಎಲ್ಲಿದ್ದಿರೋ ಅಲ್ಲಿಂದಲೇ ಗುಣಮುಖವಾಗಲಿ ಎಂದು ಪ್ರಾರ್ಥಿಸಿ ಅಂತ ಎಂ ಎಸ್ ರಾಮಯ್ಯ ಆಸ್ಪತ್ರೆ ನಿರ್ದೇಶಕ ಪಟ್ಟಾಭಿರಾಮ್ ಹೇಳಿಕೆ ನೀಡಿದ್ರು.


Viewing all articles
Browse latest Browse all 80455

Latest Images

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ಮತ್ತೊಂದು ಬೆಚ್ಚಿಬೀಳಿಸುವ ಘಟನೆ: ಕಬ್ಬಿನಗದ್ದೆಯಲ್ಲಿ ಅತ್ಯಾಚಾರದ ಬಳಿಕ ಪೈಶಾಚಿಕ ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ

<script src="https://jsc.adskeeper.com/r/s/rssing.com.1596347.js" async> </script>