Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80495

12 ಗಂಟೆ ಶಸ್ತ್ರಚಿಕಿತ್ಸೆ, 6 ಬಾರಿ ಹೃದಯಾಘಾತದ ಬಳಿಕ ಬದುಕುಳಿದ 45 ದಿನದ ಮಗು!

$
0
0

ಮುಂಬೈ: ಸಾಮಾನ್ಯವಾಗಿ ಹೃದಯಾಘಾತವಾಗಿ ಬದುಕುಳಿದ ಮಂದಿ ತುಂಬಾ ವಿರಳ. ಅಂತದ್ದರಲ್ಲಿ 6 ಬಾರಿ ಹೃದಯಾಘಾತವಾಗಿ 45 ದಿನದ ಪುಟ್ಟ ಮಗುವೊಂದು ಬದುಕುಳಿದ ಅಚ್ಚರಿಯ ಘಟನೆಯೊಂದು ನಡೆದಿದೆ.

ಹೌದು. ಮುಂಬೈನ ಕಲ್ಯಾಣ್ ನಿವಾಸಿಗಳಾದ ವಿಶಾಖ ಹಾಗೂ ವಿನೋದ್ ದಂಪತಿಯ ಪುತ್ರಿ ವಿಧಿಶಾ ಸತತ 12 ಗಂಟೆಗಳ ಶಸ್ತ್ರಚಿಕಿತ್ಸೆಯ ಬಳಿಕ ಬದುಕುಳಿದ ಪುಟಾಣಿ.

45 ದಿನದ ಈ ಪುಟ್ಟ ಕಂದಮ್ಮನಿಗೆ ಮೊದಲು ತಾಯಿಯ ಹಾಲು ಕುಡಿದ ತಕ್ಷಣವೇ ವಾಂತಿಯಾಗುತ್ತಿತ್ತು. ಅಲ್ಲದೇ ಕೂಡಲೇ ಪ್ರಜ್ಞೆ ತಪ್ಪುತ್ತಿತ್ತು. ಎಚ್ಚರಿಸಿದ್ರೂ ಮತ್ತೆ ಮತ್ತೆ ಹಾಗೇ ಆಗುತ್ತಿತ್ತು. ಈ ಘಟನೆ ನಮ್ಮನ್ನ ಬೆಚ್ಚಿ ಬೀಳಿಸಿತ್ತು. ಕೂಡಲೇ ಸ್ಥಳೀಯ ನರ್ಸಿಂಗ್ ಹೋಂ ಗೆ ಮಗುವನ್ನು ಕರೆತೆರಲಾಯಿತು. ಆದ್ರೆ ಅಲ್ಲಿನ ವೈದ್ಯರು ಆಕೆಯನ್ನು ಮುಂಬೈನ ಬಿಜೆ ವಾಡಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ರು. ಅಂತೆಯೇ ಆಕೆಯನ್ನು ಪರೀಕ್ಷಿಸಿದ ಅಲ್ಲಿನ ತಜ್ಞ ವೈದ್ಯ ಡಾ.ಬಿಸ್ವಾ ಪಂಡಾ ಹೃದಯದ ತೊಂದರೆ ಇರುವುದಾಗಿ ಪತ್ತೆ ಮಾಡಿದ್ದಾರೆ. ಬಳಿಕ ಮಾರ್ಚ್ 14ರಂದು 12 ಗಂಟೆಗಳ ಕಾಲ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಸರ್ಜರಿ ಬಳಿಕ 51 ದಿನಗಳ ಕಾಲ ಮಗುವನ್ನು ಐಸಿಯುನಲ್ಲಿ ಇಡಲಾಗಿತ್ತು. ಈ ವೇಳೆ 6 ಬಾರಿ ಮಗುವಿಗೆ ಹೃದಯಾಘಾತವಾಗುವ ಹಂತಕ್ಕೆ ತಲುಪಿದ್ಳು. ಒಂದು ಬಾರಿ ಆಕೆಗೆ ಹೃದಯಘಾತವಾಗಿ ಚೇತರಿಕೆ ಕಾಣಲು ಆಕೆಗೆ 15 ನಿಮಿಷಗಳೇ ಬೇಕಾಗಿತ್ತು ಅಂತಾ ವೈದ್ಯರು ಹೇಳಿದ್ದಾರೆ.

ಮಗುವಿನ ಚಿಕಿತ್ಸೆಗೆ 5 ಲಕ್ಷ ರೂಪಾಯಿ ವೆಚ್ಚವಾಗಿದ್ದು, ದಾನಿಗಳು ಆಸ್ಪತ್ರೆಯ ಶುಲ್ಕ ಕಟ್ಟಲು ನೆರವಾಗಿದ್ದಾರೆ. ಹಾಗೂ ಮಗುವಿನ ಹತ್ತವರಾದ ವಿಶಾಖಾ ಮತ್ತು ವಿನೋದ್ ಈಗಾಗಲೇ 25,000 ರೂ. ಅನ್ನು ಆಸ್ಪತ್ರೆಗೆ ನೀಡಿದ್ದಾರೆ.

ವಿಧಿಶಾಗೆ ಈಗ ನಾಲ್ಕು ತಿಂಗಳಾಗಿದ್ದು, ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾಳೆ. ಶೀಘ್ರವೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಕೂಡ ಆಗಲಿದ್ದಾಳೆ ಅಂತಾ ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ.


Viewing all articles
Browse latest Browse all 80495

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮದುವೆಯಾಗಲು ನಿರ್ಧರಿಸಿದ್ದಾರೆ ಅಮ್ಮ- ಮಗ


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!