Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80415

ಕಷ್ಟಪಟ್ಟು ಈಜಿಪ್ಟಿನಿಂದ ಕರೆತಂದು ಚಿಕಿತ್ಸೆ ನೀಡಿದ್ದ ಮುಂಬೈ ವೈದ್ಯರ ವಿರುದ್ಧವೇ ಈಗ ಎಮಾನ್ ಸಹೋದರಿ ಕಿಡಿ

$
0
0

ಮುಂಬೈ: ವಿಶ್ವದ ದಢೂತಿ ಮಹಿಳೆ ಈಜಿಪ್ಟ್ ನ ಎಮಾನ್ ಅಹ್ಮದ್ ಸಹೋದರಿ ಷೈಮಾ ಸೆಲೀಮ್ ಮುಂಬೈನ ವೈದ್ಯ ಲಕ್ದವಾಲಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಭಾರತಕ್ಕೆ ಬಂದು ಎಮಾನ್ ಅಹ್ಮದ್ ತೂಕ ಇಳಿಸಿಕೊಂಡಿದ್ದಾರೆ ಎಂದು ವೈದ್ಯರು ಹೇಳುತ್ತಿರೋದು ಸುಳ್ಳು ಅಂತಾ ಸಹೋದರಿ ಆರೋಪಿಸಿದ್ದಾರೆ. ಬರೋಬ್ಬರಿ 500 ಕೆಜಿ ತೂಕವಿದ್ದ ಎಮಾನ್ ದೇಹದ ತೂಕ ಇಳಿಸುತ್ತೇವೆ ಅಂತಾ ವೈದ್ಯರು ಭರವಸೆ ನೀಡಿ ಭಾರತಕ್ಕೆ ಕರೆತಂದಿದ್ದರು. ಆದ್ರೆ ಇಲ್ಲಿ ಆಕೆಯ ದೇಹದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬದಲಾಗಿ ಮತ್ತಷ್ಟು ಅಸ್ವಸ್ಥಗೊಂಡಿದ್ದಾಳೆ. ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಅಂತಾ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ಬಂದ 3 ವಾರದಲ್ಲಿ 120 ಕೆಜಿ ತೂಕ ಇಳಿಸಿಕೊಂಡ ವಿಶ್ವದ ದಢೂತಿ ಮಹಿಳೆ

ಷೈಮಾ ಸೆಲೀಮ್ ಏಪ್ರಿಲ್ 14ರಂದು ವೀಡಿಯೋ ಮಾಡುವ ಮೂಲಕ ಈ ಆರೋಪವನ್ನು ಮಾಡಿದ್ದಾರೆ. ಮುಂಬೈನ ಸೈಫೀ ಆಸ್ಪತ್ರೆಯ ವೈದ್ಯ ಡಾ. ಮುಫಜಲ್ ಲಕ್ದವಾಲಾ, ಸರ್ಜರಿ ಬಳಿಕ ಎಮಾನ್ ತೂಕ ಇಳಿಸಿಕೊಂಡಿದ್ದಾಳೆ ಅಂತಾ ಹೇಳುತ್ತಿದ್ದಾರೆ. ಆದ್ರೆ ಇದು ಸುಳ್ಳು. ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭವಾದ ಬಳಿಕ ಆಕೆ ಇಲ್ಲಿವರೆಗೆ ಎಮಾನ್ ಮಾತನಾಡಿಲ್ಲ, ನಡೆದಾಡಿಲ್ಲ. ಹೀಗಾಗಿ ಭಾರತಕ್ಕೆ ಬಂದ ಬಳಿಕ ಆಕೆಯ ಆರೋಗ್ಯ ಹದಗೆಟ್ಟಿದೆಯೇ ಹೊರತು, ಚಲನವಲನದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಅಂತಾ ಷೈಮಾ ವೀಡಿಯೋದಲ್ಲಿ ದೂರಿದ್ದಾರೆ. ಅಲ್ಲದೇ ಆಕೆಗೆ ಆಸ್ಪತ್ರೆಯಲ್ಲಿ ಯಾವೆಲ್ಲಾ ಸೌಲಭ್ಯಗಳನ್ನು ಒದಗಿಸಿದ್ದಾರೆ ಎಂಬುವುದನ್ನು ವೀಡಿಯೋದಲ್ಲಿ ತೋರಿಸಿದ್ದಾರೆ. ಈ ಆಸ್ಪತ್ರೆಯಲ್ಲಿ ಸಿಎಟಿ ಸ್ಕ್ಯಾನ್ ಮೆಶಿನ್ ಕೂಡ ಇಲ್ಲ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ಬಂದ 2 ತಿಂಗ್ಳಲ್ಲಿ 242 ಕೆಜಿ ತೂಕ ಇಳಿಸಿಕೊಂಡಿದ್ರೂ ಎಮಾನ್ ಇನ್ನೆಂದೂ ನಡೆಯಲು ಸಾಧ್ಯವಿಲ್ಲ

ಆದ್ರೆ ಇಮಾನ್ ಸಹೋದರಿ ಆರೋಪವನ್ನು ವೈದ್ಯ ಲಕ್ದವಾಲಾ ತಳ್ಳಿ ಹಾಕಿದ್ದಾರೆ. ಇಮಾನ್ ಚಿಕಿತ್ಸೆಗೂ ಮುನ್ನ 500 ಕೆಜಿ ತೂಕವಿದ್ಲು. ಚಿಕಿತ್ಸೆ ಬಳಿಕ ಆಕೆ ತೂಕ 172 ಕೆಜಿಗೆ ಇಳಿದಿದೆ. ಆದ್ರೆ ಮುಂದಿನ ಚಿಕಿತ್ಸಾ ವೆಚ್ಚವನ್ನು ಉಳಿಸಿಕೊಳ್ಳಲು ಇಮಾನ್ ಕುಟುಂಬಸ್ಥರು ಸುಳ್ಳು ಆರೋಪ ಮಾಡ್ತಿದ್ದಾರೆಂದು ಲಕ್ದವಾಲಾ ಪ್ರತಿಕ್ರಿಯೆ ನೀಡಿದ್ದಾರೆ.


Viewing all articles
Browse latest Browse all 80415

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ