Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80405

ಬಾಂಬ್ ನಾಗನ ಮನೆಯಲ್ಲಿ ಬಗೆದಷ್ಟೂ ಸಿಕ್ತಿದೆ ಕೋಟಿ ಕೋಟಿ ಹಳೇ ನೋಟು

$
0
0

– ಖೋಟಾ ನೋಟು ದಂಧೆಯಲ್ಲೂ ನಾಗ ಭಾಗಿ?

ಬೆಂಗಳೂರು: ಮಾಜಿ ರೌಡಿಶೀಟರ್ ಬಾಂಬ್ ನಾಗನ ಮನೆಯಲ್ಲಿ ಬಗೆದಷ್ಟೂ ಕೋಟಿ ಕೋಟಿ ದುಡ್ಡು ಸಿಕ್ತಿದೆ. ನಾಗನ ಮನೆಯಲ್ಲಿ ಈವರೆಗೆ 150 ಕೋಟಿ ರೂ. ಮೌಲ್ಯದ ಆಸ್ತಿ ಪತ್ರಗಳು ಸಿಕ್ಕಿವೆ. ಈಗಾಗ್ಲೇ 3 ಬಾಕ್ಸ್‍ಗಳನ್ನ ಪೊಲೀಸರು ತೆರೆದಿದ್ದು, ಮತ್ತೆರಡು ಬಾಕ್ಸ್ ಪತ್ತೆಯಾಗಿದೆ.

ದೇವರ ಪುಸ್ತಕಗಳ ಹಿಂದಿತ್ತು ಹಣ: ಶ್ರೀಮದ್ ಭಗವದ್ಗೀತೆ, ಕೃಷ್ಣವಾಣಿ ಸೇರಿದಂತೆ 200ಕ್ಕೂ ಹೆಚ್ಚು ಪುಸ್ತಕಗಳ ಕೆಳಗೆ ಕೋಟಿ ಕೋಟಿ ಹಣ ಪತ್ತೆಯಾಗಿದೆ. ಮೂರು ಕಬೋರ್ಡ್‍ನಲ್ಲಿ ರಿಯಲ್ ಎಸ್ಟೇಟ್ ಪತ್ರಗಳು ಸಿಕ್ಕಿದ್ದು, ಅಂದಾಜಿನ ಮೇಲೆ ಲೆಕ್ಕ ಮಾಡಿದ್ರೂ 150 ಕೋಟಿಗೂ ಮೀರಿದ ಆಸ್ತಿಪತ್ರಗಳಿವೆ.

ಖೋಟಾ ನೋಟು ದಂಧೆಯನ್ನೂ ಮಾಡ್ತಿದ್ನಾ ನಾಗ?: ಬ್ಲಾಕ್ ಅಂಡ್ ವೈಟ್ ಮನಿ ದಂಧೆ ಜೊತೆಗೆ ಬಾಂಬ್ ನಾಗ ಖೋಟಾ ನೋಟು ದಂಧೆಯಲ್ಲೂ ತೊಡಗಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ಬಾಂಬ್ ನಾಗನ ಮನೆಯಲ್ಲಿ ಕೋಟಿ ಕೋಟಿ ಹಳೇ ನೋಟುಗಳ ಕಂತೆ ಜೊತೆಗೆ ನೋಟು ಮುದ್ರಿಸುವ ಖಾಲಿ ಪೇಪರ್ ಕೂಡ ಪತ್ತೆಯಾಗಿದೆ. ಕಂತೆ ಕಂತೆ ಹಳೇ ನೋಟುಗಳ ಮಧ್ಯೆಯೇ ಖಾಲಿ ಪೇಪರ್ ಜೋಡಿಸಿಟ್ಟಿದ್ದ ಬಾಂಬ್ ನಾಗ. ಅಲ್ಲದೆ ನೋಟಿನ ಜೊತೆಯಲ್ಲೇ ಹಲವು ಬಗೆಯ ಪ್ರಿಂಟರ್ ಮಷಿನ್ ಕೂಡ ಸಿಕ್ಕಿದೆ.

ಪೊಲೀಸರು ದಾಳಿ ಮಡಲು ಕಾರಣ?: ಬಾಂಬ್ ನಾಗನ ವಿರುದ್ಧ ದೂರು ನೀಡಿದ್ದು ರಿಯಲ್ ಎಸ್ಟೇಟ್ ಉದ್ಯಮಿ ಉಮೇಶ್. ದೂರುದಾರ ಉಮೇಶ್ ಕಳೆದ ತಿಂಗಳು ವೀರಣ್ಣ ಮತ್ತಿಕಟ್ಟಿ ಅವರ ಅಳಿಯ ಪ್ರವೀಣ್ ಕುಮಾರ್ ಜೊತೆ ನೋಟ್ ದಂಧೆಯಲ್ಲಿ ಬಂಧಿತನಾಗಿದ್ದ. ಉಮೇಶ್ ಬಾಂಬ್ ನಾಗನಿಗೆ 20 ಕೋಟಿ ಮೊತ್ತದ ಹಳೇ ನೋಟುಗಳನ್ನ ಪಿಂಕ್ ನೋಟ್ ಮಾಡಿಕೊಡಲು ಮೊದಲು ಆಫರ್ ನೀಡಿದ್ದ. ಅದರಂತೆ ಬಾಂಬ್ ನಾಗನ ಮನೆಯ ಕೊನೆ ಮಹಡಿಯಲ್ಲಿ 10 ಕೋಟಿ ರೂ. ಎಕ್ಸ್ ಚೇಂಜ್ ದಂಧೆ ನಡೆದಿತ್ತು. ಬಳಿಕ ಉಮೇಶ್ 4ನೇ ಮಹಡಿಗೆ ಬಂದಾಗ ನಾಗನ ಗ್ಯಾಂಗ್‍ನ ಐವರು ರಿವಾಲ್ವಾರ್ ಹಿಡಿದು ಸುತ್ತುವರಿದು ಬೆದರಿಕೆ ಹಾಕಿ, ಉಮೇಶ್‍ಗೆ ಥಳಿಸಿ, ಎಕ್ಸ್ ಚೇಂಜ್ ಆಗಿದ್ದ 10 ಕೋಟಿ ಹಣವನ್ನ ಕಿತ್ತುಕೊಂಡಿದ್ದರು. ಬಳಿಕ ಉಮೇಶ್‍ನನ್ನ ಎತ್ತಿಕೊಂಡು ಹೋಗಿ ಹಲಸೂರು ಬಳಿ ಬಿಸಾಡಿ ಬಂದಿದ್ದರು. ಈ ಎಲ್ಲಾ ಘಟನೆ ಏಪ್ರಿಲ್ 7 ರಂದು ಶ್ರೀರಾಪುರದಲ್ಲಿರುವ ಬಾಂಬ್ ನಾಗನ ನಿವಾಸದಲ್ಲಿ ನಡೆದಿತ್ತು. ದರೋಡೆ ಹಾಗೂ ಅಪಹರಣಕ್ಕೆ ಸಂಬಂಧಿಸಿದಂತೆ ಉಮೇಶ್ ದೂರಿನ ಆಧಾರದ ಮೇಲೆ ಸರ್ಚ್ ವಾರೆಂಟ್ ಪಡೆದು ಪೊಲೀಸರು ಇಂದು ದಾಳಿ ನಡೆಸಿದ್ದಾರೆ. ಡಿಸಿಪಿ ಅಜಯ್ ಹಿಲೋರಿ ನೇತೃತ್ವದಲ್ಲಿ ಬಾಂಬ್ ನಾಗನ ಮನೆ ಶೋಧ ಇನ್ನೂ ಮುಂದುವರೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್, ಇಂತಹ ಆಪರೇಷನ್‍ಗಳು ರೌಡಿಗಳ ಮನೆಗಳ ಮೇಲೆ ಮುಂದುವರೆಯಲಿವೆ. ಕಳೆದ ತಿಂಗಳೇ ನಾನು ಹೇಳಿದಂತೆ, ರೌಡಿ ಚಟುವಟಿಕೆಗಳಿಂದ ಅಕ್ರಮವಾಗಿ ಯಾರೇ ಹಣ ಸಂಪಾದನೆ ಮಾಡಿದ್ರು ಬಿಡಲ್ಲ. ಅಂತವರ ಬಗ್ಗೆ ಮಾಹಿತಿ ಕಲೆ ಹಾಕ್ತಿದ್ದೇವೆ. ಇದು ಮುಂದುವರಿದ ಭಾಗವಷ್ಟೇ. ಅಕ್ರಮ ಚಟುವಟಿಕೆಗಳಿಂದ ಹಣ ಸಂಪಾದನೆ ಮಾಡೋರನ್ನ ಬಿಡುವುದಿಲ್ಲ. ಮಾಜಿ ರೌಡಿ ಅಂತ ಮುಖವಾಡ ಹಾಕಿಕೊಂಡವರಿಗೆ ಇದೆ ಹಬ್ಬ. ಎಲ್ಲರ ಮೇಲೂ ಕಣ್ಣಿಡಲಾಗಿದೆ. ಸ್ವಲ್ಪ ದಿನದ ಹಿಂದೆಯೂ ಇದೆ ರೀತಿ ದಾಳಿ ಮಾಡಲಾಗಿತ್ತು ಮುಂದೆಯೂ ದಾಳಿ ನಡೆಯಲಿದೆ ಅಂತ ಹೇಳಿದ್ರು.

ಕಿಡ್ನ್ಯಾಪ್ ಮತ್ತು ರಾಬರಿ ಸಂಬಂಧ ಬಾಂಬ್ ನಾಗನ ಮನೆ ಮೇಲೆ ದಾಳಿ ನಡೆಸಿದ್ದೇವೆ. ಇಲ್ಲಿವರೆಗೂ ಒಂದು ರೂಮ್ ಮಾತ್ರ ಓಪನ್ ಮಾಡಿದ್ದೀವಿ. ಮನೆಯವರು ಯಾರೂ ಸ್ಪಂದಿಸಿಲ್ಲ. ಜಮೀನು ವ್ಯವಹಾರ ಸಂಬಂಧ ಸಾಕಷ್ಟು ದಾಖಲೆಗಳು ಸಿಕ್ಕಿವೆ. ಇನ್ನೂ ಹಣದ ಲೆಕ್ಕ ನಡೀತಿದೆ. ಸಂಜೆಯೊಳಗೆ ಲೆಕ್ಕ ಸಿಗಲಿದೆ. ಅಪರಾಧ ಕೃತ್ಯಗಳಿಗೆ ಬಳಸುವ ಮಾರಕಾಸ್ತ್ರಗಳು ಕೂಡ ಪತ್ತೆಯಾಗಿವೆ ಅಂತ ನಿಂಬಾಳ್ಕರ್ ತಿಳಿಸಿದ್ರು. ಸಾಕಷ್ಟು ಕುಖ್ಯಾತ ರೌಡಿಗಳ ಬಗ್ಗೆ ಮಹತ್ವದ ಮಾಹಿತಿ ಕಲೆ ಹಾಕಲಾಗುತ್ತಿದೆ ಅಂತ ನಿಂಬಾಳ್ಕರ್ ಹೇಳಿದ್ರು.


Viewing all articles
Browse latest Browse all 80405

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>